ಸ್ಯಾಂಟ್ರೋ ರವಿಗೆ ರೂಮ್ ನೀಡುತ್ತಿದ್ದ ಆರೋಪ: ಕುಮಾರಕೃಪ ಅತಿಥಿಗೃಹದ ಅಧಿಕಾರಿಯ ವರ್ಗಾವಣೆ
![ಸ್ಯಾಂಟ್ರೋ ರವಿಗೆ ರೂಮ್ ನೀಡುತ್ತಿದ್ದ ಆರೋಪ: ಕುಮಾರಕೃಪ ಅತಿಥಿಗೃಹದ ಅಧಿಕಾರಿಯ ವರ್ಗಾವಣೆ ಸ್ಯಾಂಟ್ರೋ ರವಿಗೆ ರೂಮ್ ನೀಡುತ್ತಿದ್ದ ಆರೋಪ: ಕುಮಾರಕೃಪ ಅತಿಥಿಗೃಹದ ಅಧಿಕಾರಿಯ ವರ್ಗಾವಣೆ](https://www.varthabharati.in/sites/default/files/images/articles/2023/01/7/362858-1673080572.jpg)
ಬೆಂಗಳೂರು: ಸ್ಯಾಂಟ್ರೋ ರವಿಗೆ ಕುಮಾರಕೃಪದಲ್ಲಿ ರೂಮ್ ನೀಡುತ್ತಿದ್ದ ಆರೋಪದ ಮೇರೆಗೆ ಕುಮಾರಕೃಪ ಅತಿಥಿಗೃಹದ ಅಧಿಕಾರಿ ದೇವರಾಜ್ ಎಚ್.ಎಸ್. ರನ್ನು ವರ್ಗಾವಣೆ ಮಾಡಲಾಗಿದೆ.
ದೇವರಾಜ್ ರನ್ನು ಕುಮಾರ ಕೃಪ ಗೆಸ್ಟ್ ಹೌಸ್ ನಿಂದ ಕೆಎಸ್ಟಿಡಿಸಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಕೆಎಸ್ಟಿಡಿಸಿಯ ಪ್ರಕಟನೆ ತಿಳಿಸಿದೆ.
ದೇವರಾಜ್ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸ್ಯಾಂಟ್ರೋ ರವಿ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಿರುವುದಾಗಿ ತಿಳಿದುಬಂದಿದೆ.
![](https://www.varthabharati.in/sites/default/files/images/galllery/2023/01/7/WhatsApp Image 2023-01-07 at 1.39.08 PM.jpeg)
Next Story