Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಚೀನಾ ಸರ್ಕಾರದ ದಾಳಿಯ ನಂತರ ಆ್ಯಂಟ್...

ಚೀನಾ ಸರ್ಕಾರದ ದಾಳಿಯ ನಂತರ ಆ್ಯಂಟ್ ಸಮೂಹದ ನಿಯಂತ್ರಣ ತ್ಯಜಿಸಿದ ಜಾಕ್ ಮಾ

7 Jan 2023 2:57 PM IST
share
ಚೀನಾ ಸರ್ಕಾರದ ದಾಳಿಯ ನಂತರ ಆ್ಯಂಟ್ ಸಮೂಹದ ನಿಯಂತ್ರಣ ತ್ಯಜಿಸಿದ ಜಾಕ್ ಮಾ

ಹಾಂಗ್ ಕಾಂಗ್: ಚೀನಾ ಸರ್ಕಾರದ ನಿಯಂತ್ರಣ ಪ್ರಾಧಿಕಾರವೊಂದರ ದಾಳಿಯ ಕಾರಣಕ್ಕೆ 37 ಶತಕೋಟಿ ಡಾಲರ್ ಮೌಲ್ಯದ ಐಪಿಒ ನಷ್ಟ ಅನುಭವಿಸಿದ್ದ ಆ್ಯಂಟ್ ಸಮೂಹದ (Ant Group) ನಿಯಂತ್ರಣವನ್ನು ಕೈಬಿಡಲು ಆ ಸಮೂಹದ ಸಂಸ್ಥಾಪಕ ಜಾಕ್ ಮಾ (Jack Ma) ನಿರ್ಧರಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಚೀನಾ ಮೂಲದ ಸೂಕ್ಷ್ಮ ತಂತ್ರಜ್ಞಾನ ಕ್ಷೇತ್ರದ ದೈತ್ಯರಾಗಿರುವ ಜಾಕ್ ಮಾ ಅವರು ಆ್ಯಂಟ್ ಸಮೂಹದ ಮೇಲೆ ಹೊಂದಿದ್ದ ಮತದಾನದ ಹಕ್ಕು ಸೇರಿದಂತೆ ಹಲವಾರು ನಿಯಂತ್ರಣಗಳನ್ನು ತ್ಯಜಿಸಲು ಅನುಕೂಲವಾಗುವಂತೆ ಕಂಪನಿಯ ಶೇರುದಾರರು ಸರಣಿಯೋಪಾದಿ ಬದಲಾವಣೆ ಕೈಗೊಳ್ಳಲು ಸಮ್ಮತಿಸಿದ್ದಾರೆ ಎಂದು ಶನಿವಾರ ಸಮೂಹವು ಪ್ರಕಟಿಸಿದೆ.

ಚೀನಾ ಸರ್ಕಾರದ ನಿಯಂತ್ರಣ ಪ್ರಾಧಿಕಾರ ದಾಳಿಯಿಂದ ಅನುಭವಿಸಿದ ನಷ್ಟದ ಕಾರಣಕ್ಕೆ ಆ್ಯಂಟ್ ಸಮೂಹವು ತನ್ನ ಬೃಹತ್ ಆರ್ಥಿಕ ತಂತ್ರಜ್ಞಾನವನ್ನು ಮರುರೂಪಿಸಿಕೊಳ್ಳಬೇಕಾದ ಒತ್ತಡಕ್ಕೆ ಒಳಗಾಗಿತ್ತು. ಇದಾದ ನಂತರ ಆ್ಯಂಟ್ ಸಮೂಹದಿಂದ ಜಾಕ್ ಮಾ ಅವರ ನಿರ್ಗಮನವನ್ನು ದೊಡ್ಡ ಬೆಳವಣಿಗೆ ಎಂದೇ ಉದ್ಯಮ ವಲಯದಲ್ಲಿ ಬಣ್ಣಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಓರಿಯಂಟ್ ಕ್ಯಾಪಿಟಲ್ ರಿಸರ್ಚ್ ವ್ಯವಸ್ಥಾಪಕ ನಿರ್ದೇಶಕ ಆ್ಯಂಡ್ರೆ ಕಾಲಿಯರ್, "ತಾವು ಸ್ಥಾಪಿಸಿದ ಆ್ಯಂಟ್ ಸಂಸ್ಥೆಯಿಂದ ಜಾಕ್ ಮಾ ನಿರ್ಗಮಿಸಿರುವುದು ಬೃಹತ್ ಖಾಸಗಿ ಹೂಡಿಕೆದಾರರ ಪ್ರಭಾವವನ್ನು ತಗ್ಗಿಸುವ ಚೀನಾ ನಾಯಕತ್ವದ ದೃಢ ನಿರ್ಧಾರವನ್ನು ತೋರಿಸುತ್ತದೆ. ಈ ಬೆಳವಣಿಗೆಯಿಂದ ಚೀನಾ ಆರ್ಥಿಕತೆಯ ಬಹುತೇಕ ಉತ್ಪಾದನಾ ವಲಯಗಳು ನಶಿಸುವುದು ಮುಂದುವರಿಯಲಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಅಧಿಕೃತ ಹೇಳಿಕೆಯ ಹೊರತಾಗಿಯೂ, ಆ್ಯಂಟ್ ಸಂಸ್ಥೆಯು ಆರ್ಥಿಕ ವ್ಯವಸ್ಥೆಗೆ ಕೊಂಚ ಮಟ್ಟಿನ ಸಮಸ್ಯೆ ಉಂಟು ಮಾಡಲಿದೆ. ಆರ್ಥಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಿದ್ದ ಸಣ್ಣ ವ್ಯಾಪಾರೋದ್ಯಮಗಳಿಗೆ ಅದು ಸಾಲ ಸೌಲಭ್ಯ ಒದಗಿಸುವ ಸಾಮರ್ಥ್ಯ ಹೊಂದಿತ್ತು" ಎಂದೂ ಅವರು ಹೇಳಿದ್ದಾರೆ.

"ಜಾಕ್ ಮಾ ಇನ್ನು ಮುಂದೆ ಆ್ಯಂಟ್ ಸಮೂಹದ ನಿಯಂತ್ರಕ ಶೇರುದಾರರಾಗಿರುವುದಿಲ್ಲ ಎಂಬುದು ನಿಜಕ್ಕೂ ಗಮನಾರ್ಹ ಸಂಗತಿಯಾಗಿದೆ. ಒಟ್ಟಾರೆ ಅಭಿಪ್ರಾಯದಲ್ಲಿ ಇದರಿಂದ ಐಪಿಒ ಸ್ವಾಧೀನಕ್ಕೆ ದಾರಿಯಾಗಬೇಕು ಮತ್ತು ಕಣ್ತಪ್ಪು/ದತ್ತಾಂಶದ ಮಾಲಕತ್ವದಂತಹ ಪ್ರಮುಖ ಸಮಸ್ಯೆಗಳೂ ಕೂಡಾ ಬಗೆಹರಿಯಲಿವೆ" ಎಂದು ಬೀಜಿಂಗ್ ಮೂಲದ ಹೂಡಿಕೆ ಸಲಹಾ ಸಂಸ್ಥೆ ಬಿಡಿಎ ಅಧ್ಯಕ್ಷ ಡಂಕನ್ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ.

share
Next Story
X