Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸೋಷಿಯಲ್ ಮೀಡಿಯಾ
  3. "ವಚನಗಳನ್ನು, ತತ್ವ ಪದಕಾರರ ಗೀತೆಗಳನ್ನು...

"ವಚನಗಳನ್ನು, ತತ್ವ ಪದಕಾರರ ಗೀತೆಗಳನ್ನು ಈಗಲಾದರೂ ಓದಿ. ನಿಮ್ಮ ತಲೆಯೊಳಗಿನ ಕಸ ಕರಗೀತು"

ಡಾ.ಎಸ್.ಎಲ್.ಭೈರಪ್ಪನವರಿಗೊಂದು ಬಹಿರಂಗ ಪತ್ರ

8 Jan 2023 11:02 AM IST
share
ವಚನಗಳನ್ನು, ತತ್ವ ಪದಕಾರರ ಗೀತೆಗಳನ್ನು ಈಗಲಾದರೂ ಓದಿ. ನಿಮ್ಮ ತಲೆಯೊಳಗಿನ ಕಸ ಕರಗೀತು
ಡಾ.ಎಸ್.ಎಲ್.ಭೈರಪ್ಪನವರಿಗೊಂದು ಬಹಿರಂಗ ಪತ್ರ

"ಸಂಸ್ಕೃತ ಭಾಷೆ ಭಾರತದ ಶ್ರೀಮಂತ ಭಾಷೆ. ಅದರಿಂದ ಕನ್ನಡ ಭಾಷೆ ಶ್ರೀಮಂತಗೊಂಡಿದೆ ಹಾಗೂ ಶೇಕಡ ಅರವತ್ತರಷ್ಟು ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದಿವೆ" ಎಂದು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಓದಲಾದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪರ ಭಾಷಣಕ್ಕೆ ಲೇಖಕ, ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಸ್.ಎಲ್.ಭೈರಪ್ಪರಿಗೊಂದು ಬಹಿರಂಗ ಪತ್ರ ಬರೆದಿರುವ ಜಗದೀಶ್ ಕೊಪ್ಪ, ಕನ್ನಡ ಸಾಹಿತ್ಯದ ಕೃಷಿಯಲ್ಲಿ ನಿಮ್ಮಂತಹವರು ಶ್ರೇಷ್ಟತೆಯ ಹಂಗಿಗಾಗಿ ಸಂಸ್ಕೃತ ಭಾಷೆಯಿಂದ ಪ್ರಭಾವಿತರಾಗಿ ಕಥೆ, ಕಾದಂಬರಿ, ಕಾವ್ಯ ರಚಿಸಿದ್ದೀರಿ. ಪಂಡಿತರೆನಿಸಿಕೊಂಡಿದ್ದೀರಿ. ನೀವು ಎಂದಾದರೂ ನಮ್ಮ ಕನ್ನಡ ನೆಲದ ನಮ್ಮ ಜನಪದರ ಭಾಷೆಯನ್ನು ಗಮನಿಸಿದ್ದೀರಾ? ದಕ್ಷಿಣದ ಚಾಮರಾಜನಗರದಿಂದ ಉತ್ತರದ ಬೀದರ್ ವರೆಗೆ ಮತ್ತು ಪೂರ್ವದ ಕೋಲಾರದಿಂದ ಪಶ್ಚಿಮದ ಕರಾವಳಿ ಹಾಗೂ ಬೆಳಗಾವಿಯವರೆಗೆ ಎಷ್ಟೊಂದು ಬಗೆಯ ಕನ್ನಡ ಭಾಷೆ ಇದೆ ಎಂಬುದನ್ನು ಬಲ್ಲಿರಾ? ಎಂದು ಪ್ರಶ್ನಿಸಿದ್ದಾರೆ.

ಹನ್ನೊಂದು ಮತ್ತು ಹನ್ನೆರೆಡನೆಯ ಶತಮಾನದಲ್ಲಿ ಡೋಹರ ಕಕ್ಕಯ್ಯ, ದೇವರ ದಾಸಿಮಯ್ಯನಿಂದ ಹಿಡಿದು ಬಸವಣ್ಣ, ಅಲ್ಲಮ ಪ್ರಭು, ಅಕ್ಕ ಮಹಾದೇವಿ ಮತ್ತು ಮುಕ್ತಾಯಕ್ಕರಂತಹ ಮಹನೀಯರ ವಚನಗಳಲ್ಲಿ ಎಷ್ಟು ಸಂಸ್ಕೃತ ಶಬ್ದಗಳಿವೆ ಹುಡುಕಿ ಹೇಳಬಲ್ಲಿರಾ? ಎಂದು ಪ್ರಶ್ನಿಸಿರುವ ಜಗದೀಶ್ ಕೊಪ್ಪ, ತತ್ವ ಪದಕಾರರ ಗೀತೆಗಳನ್ನು ಆಲಿಸಿದ್ದೀರಾ? ಅಥವಾ ಓದಿದ್ದೀರಾ? ಮೌಖಿಕ ಕಾವ್ಯಗಳಾದ ಮಲೆ ಮಹಾದೇಶ್ವರ, ಮೈಲಾರಲಿಂಗ, ಮಂಟೆ ಸ್ವಾಮಿ ಕಾವ್ಯ ಹೀಗೆ ನೂರಾರು ಕಥನ ಕಾವ್ಯಗಳಿವೆ. ಅವುಗಳು ಸಂಸ್ಕೃತ ಭಾಷೆಯಿಂದ ಪ್ರಭಾವಿತವಾದ ಕಾವ್ಯಗಳು ಎಂದು ಹೇಳಬಲ್ಲ ಧೈರ್ಯ ಇದೆಯಾ? ದಯವಿಟ್ಟು ಅವುಗಳನ್ನು ಈಗಲಾದರೂ ಓದಿ. ನಿಮ್ಮ ತಲೆಯೊಳಗಿನ ಕಸ ಕರಗೀತು ಎಂದು ಹೇಳಿದ್ದಾರೆ.

ಉತ್ತರದವರ ಹಂಗಿನಲ್ಲಿ ಈವರೆಗೆ ಬದುಕಿದ್ದು ಸಾಕು. ನೀವು ಹುಟ್ಟಿದ ಚೆನ್ನರಾಯ ಪಟ್ಟಣ ತಾಲೂಕಿನ ಅಥವಾ ಬದುಕುತ್ತಿರುವ ಮೈಸೂರು ಜಿಲ್ಲೆಯ ಗ್ರಾಮೀಣ ಭಾಷೆಯನ್ನು ಒಮ್ಮೆ ಅವಲೋಕಿಸಿ. ನಿಮ್ಮಂತಹವರ ಸಾಹಿತ್ಯ ನಾಟಕದ ಕಲಾವಿದನೊಬ್ಬ ರಾತ್ರಿ ಬಣ್ಣ ಬಳಿದುಕೊಂಡು ಬೆಳಕಾದ ನಂತರ ತೊಳೆದು ಹಾಕುತ್ತಾನಲ್ಲಾ ಅಂತಹದ್ದು. ಜನರ ಎದೆಗೆ ಕಿವಿಯಾಗಿ ಅವರ ನೋವಿಗೆ ಧ್ವನಿಯಾದವರ ಕನ್ನಡ ನುಡಿ ಅಥವಾ ಭಾಷೆಗೆ ಎಂದಿಗೂ ಸಾವಿಲ್ಲ. ಇದಕ್ಕೆ ನಮ್ಮ ಮುಂದಿರುವ ವಚನಗಳೇ ಸಾಕ್ಷಿಯಾಗಿವೆ ಎಂದು ಜಗದೀಶ್ ಕೊಪ್ಪ ಹೇಳಿದ್ದಾರೆ.

ಈ ಬಗ್ಗೆ ಜಗದೀಶ್ ಕೊಪ್ಪ ಅವರ Facebook ಪೋಸ್ಟ್ ಇಲ್ಲಿದೆ...

share
Next Story
X