Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಪುತ್ತೂರು: ಕಮ್ಯೂನಿಟಿ ಸೆಂಟರಿನ...

ಪುತ್ತೂರು: ಕಮ್ಯೂನಿಟಿ ಸೆಂಟರಿನ 'ಆಂದೋಲನ' ಸಾಕ್ಷ್ಯಚಿತ್ರ ಬಿಡುಗಡೆ

8 Jan 2023 10:01 PM IST
share
ಪುತ್ತೂರು: ಕಮ್ಯೂನಿಟಿ ಸೆಂಟರಿನ ಆಂದೋಲನ ಸಾಕ್ಷ್ಯಚಿತ್ರ ಬಿಡುಗಡೆ

ಪುತ್ತೂರು: ಗ್ರಾಮ ಮತ್ತು ಪಟ್ಟಣಗಳಲ್ಲಿ ಹಲವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳು ನಮ್ಮ ನಡುವೆ ಇದ್ದಾರೆ. ಅವರ ಸಾಮರ್ಥ್ಯ, ಆಸಕ್ತಿ ಮತ್ತು ಕನಸನ್ನು ಅರಿತು ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ ಗುರಿ ತಲುಪಿಸುವ ಗುರುವಿನ ಅಗತ್ಯವಿತ್ತು. ಅದನ್ನು ಪುತ್ತೂರು ಕಮ್ಯೂನಿಟಿ ಸೆಂಟರ್ ಪರಿಣಾಮಕಾರಿಯಾಗಿ ಮಾಡಿದೆ ಎಂದು ಅನಿವಾಸಿ ಉದ್ಯಮಿ ಫಾರೂಕ್ ಪೊರ್ಟ್ ಫೊಲಿಯೋ ಅವರು ಅಭಿಪ್ರಾಯ ಪಟ್ಟರು.

ನಿನ್ನೆ ಸೆಂಟರಿನ ಯೋಜನೆಗಳ ಸಾಕ್ಷ್ಯಚಿತ್ರ ಆಂದೋಲನವನ್ನು ಪುತ್ತೂರಿನ ಯುವ ಉದ್ಯಮಿಗಳ ಜೊತೆ ಸೇರಿ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ತಳಮಟ್ಟದಲ್ಲಿ ದುಡಿಯುವವರಲ್ಲಿ ವೈಜ್ಞಾನಿಕ ಮತ್ತು ದೂರದೃಷ್ಠಿಯ ಚಿಂತನೆಯ ಜೊತೆ ಕಾಳಜಿಯೂ ಬೇಕು. ಆರ್ಥಿಕ ಸಹಕಾರ ಅದನ್ನು ಪೊಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಹಾಗಾದರೆ ಸಮನ್ವಯ ಕೂಡುವಿಕೆಯಿಂದ ಅತ್ಯುತ್ತಮ ಫಲಿತಾಂಶ ಸಾಧ್ಯ ಎಂದರು.

ಆಂದೋಲನ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ಅನಿವಾಸಿ ಉದ್ಯಮಿ ಅಶ್ರಫ್ ಷಾ ಮಾಂತೂರು ಅವರು,  ನಮ್ಮ ಊರಿನ ಈ ಯೋಜನೆ ಈಗ ಎಲ್ಲರೂ ಮಾದರಿಯಾಗಿಸುತ್ತಿರುವುದು ತಿಳಿದು ಸಂತೋಷವಾಗಿದೆ ಎಂದರು.

ಇನ್ನೊಬ್ಬರು ಅನಿವಾಸಿ ಉದ್ಯಮಿ ಪೈರೋಝ್ ಪರ್ಲಡ್ಕ ಮಾತನಾಡಿ, ಆರಂಭದಿಂದಲೂ ಇದೊಂದು ಮಹತ್ವಾಕಾಂಕ್ಷೆಯ ಪ್ರಯತ್ನ ಎಂದು ತಿಳಿದಿದ್ದೆ. ಇಂದು ಸಾಕ್ಷ್ಯಚಿತ್ರ ನೋಡಿದ ನಂತರ ಇದು ಸಮುದಾಯದ ಅಭಿವೃದ್ದಿಗೆ ಇರುವ ಅತ್ಯುತ್ತಮ ಪದ್ದತಿಯೆಂದು ಅರ್ಥವಾಗಿದೆ. ಸಾವಿರಾರು ಮಕ್ಕಳೊಂದಿಗೆ ಸಂವಹನ ಮಾಡಿ ಅವರ ಗುರಿ ತಲುಪಿಸಲು ದುಡಿಯುವುದು ಸಣ್ಣ ಸಂಗತಿಯಲ್ಲ. ಹಲವಾರು ಸಂಘ ಸಂಸ್ಥೆಯಲ್ಲಿ ದುಡಿದಿದ್ದೇನೆ. ಎಲ್ಲರೂ ಕಾಳಜಿಯಿಂದಲೇ ಸಮುದಾಯದ ಪ್ರಗತಿಗೆ ಶ್ರಮ ವಹಿಸಿದ್ದಾರೆ, ಅದರಲ್ಲೂ ಕಮ್ಯೂನಿಟಿ ಸೆಂಟರ್ ವ್ಯವಸ್ಥಿತವಾದ ಪ್ರಗತಿಗೆ ಮಾದರಿ ಪದ್ದತಿ ನಿರ್ಮಿಸಿದೆ. ಇದು ಎಲ್ಲೆಡೆ ಅನ್ವಯಿಸಬೇಕು ಎಂದರು.

ಅನಿವಾಸಿ ಉದ್ಯಮಿ ಮಹಮ್ಮದ್ ಹಾರಿಸ್ ಅರಂಡ ಇವರು ಮಾತನಾಡಿ, ದತ್ತಾಂಶ ಮತ್ತು ಪ್ರಗತಿಯ ವರದಿ ಅಧಿಕೃತ ಆಗಿರಬೇಕು. ದಾಖಲೆಗಳು ಮತ್ತು ನೀತಿಗಳು ಇಲ್ಲದ ಯಾವುದೇ ಸಂಘ ಸಂಸ್ಥೆಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಫಲಿತಾಂಶ ಇಲ್ಲದ ಪರಿಶ್ರಮ ಮತ್ತು ಹಣ ವ್ಯರ್ಥವಾಗಿದೆ. ಸಮುದಾಯದ ಬೇಡಿಕೆ ಮತ್ತು ಅಗತ್ಯತೆ ಕುರಿತು ವೈಜ್ಞಾನಿಕ ಅಧ್ಯಯನ ನಡೆಯಬೇಕು. ಅದಕ್ಕಾಗಿ ಕಮ್ಯೂನಿಟಿ ಸೆಂಟರ್ ಬುದ್ದಿಜೀವಿಗಳ-ಉಲೆಮಾಗಳ-ಚಿಂತಕರ ಮತ್ತು ವೃತ್ತಿಪರರ ಆಲೋಚನೆ ಸಂಗ್ರಹಿಸಿ ಸಮುದಾಯದ ಮುಂದಿಡುವ ಕೆಲಸ ಮಾಡಿದರೆ ನಾವೆಲ್ಲರೂ ಜೊತೆ ಇರುತ್ತೇವೆ ಎಂದರು.

ಅನಿವಾಸಿ ಉದ್ಯಮಿ ತಾಹಿರ್ ಸಾಲ್ಮರರವರು ಬಹುದಿನಗಳ ಕನಸು ನನಸಾಗಿದೆ. ನಮ್ಮ ಊರಿನ ಎನ್.ಆರ್.ಐ ಉದ್ಯಮಿ, ಹಲವು ಸಂಘ ಸಂಸ್ಥೆಗಳ ಪೊಷಕರಾಗಿರುವ ಅಮ್ಜದ್ ಖಾನ್ ಪೊಳ್ಯರ ಸಾರಥ್ಯದಲ್ಲಿ,  ಹಲವು ದೂರದೃಷ್ಠಿಯ ವ್ಯಕ್ತಿತ್ವ ಇರುವ ತಂಡದ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಈ ಸೆಂಟರಿನಲ್ಲಿ ನಾವೆಲ್ಲರೂ ಸಹಯೋಗದಿಂದ ದುಡಿದು ದೇಶಕ್ಕೆ ಕೊಡುಗೆ ಕೊಡುವ ಸಮುದಾಯವನ್ನು ಸೃಷ್ಠಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮಹಮ್ಮದ್ ಕುಕ್ಕುವಳ್ಳಿ, ಅಶ್ರಫ್ ಮುಕ್ವೆ, ನಿಝಾಮ್ ಅರಂಡ, ಅಶ್ರಫ್ ಗೋಳಿಕಟ್ಟೆ, ಮಹಮ್ಮದ್ ಕಲಂದರ್,  ಸಿರಾಜುದ್ದೀನ್ ಪರ್ಲಡ್ಕ, ತಾಸಿರ್ , ವಕೀಲರಾದ ಶಾಕೀರ್ ಹಾಜಿ, ಇಸಾಕ್ ಕಡಬ,
ಪುತ್ತೂರಿನ ಯುವ ನಾಯಕರಾದ ರಿಯಾಝ್ ಪರ್ಲಡ್ಕ, ಹರ್ಷದ್ ದರ್ಬೆ, ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ನ ಉಪಾಧ್ಯಕ್ಷರಾದ ಅಬ್ದುಲ್ಲಾ ಶೇಕ್,  ಟ್ರಸ್ಟಿಗಳಾದ ಸತ್ತಾರ್ ವಲ್ತಡ್ಕ, ಮುನೀರ್ ವಿಟ್ಲ,  ನಝೀರ್ ಮುಂತಾದ ಗಣ್ಯರು ಭಾಗವಹಿಸಿದ್ದರು.  

ಇದೇ ಸಂದರ್ಭ ಅದ್ದು ಪಡೀಲ್ ಇವರ ಪುತ್ರ ರಾಮಕೃಷ್ಣ ಸ್ಕೂಲ್ ನ ವಿದ್ಯಾರ್ಥಿ  ಮಹಮ್ಮದ್ ಅನ್ಸಾರ್ ರವರು ಇತ್ತೀಚೆಗೆ ಮೂಡಬಿದ್ರೆ ಅಳ್ವಾಸನಲ್ಲಿ ನಡೆದ ಸ್ಕೌಟ್ಸ್ ಎಂಡ್ ಗೈಡ್ಸ್ ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿಸಿದ್ದಕ್ಕೆ ಸನ್ಮಾನಿಸಿ ಗೌರವಿಸಲಾಯಿತು.

ಸೆಂಟರಿನ ಪ್ರಧಾನ ಕಾರ್ಯದರ್ಶಿ ಹನೀಫ್ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಇಮ್ತಿಯಾಝ್ ಪಾರ್ಲೆ ಕಾರ್ಯಕ್ರಮ ನಿರ್ವಹಿಸಿದರು.

share
Next Story
X