Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಬಸವಣ್ಣನ ಪದ ಹಾಡಲು ಬಿಡದ ಮಹೇಶ ಜೋಶಿ...

ಬಸವಣ್ಣನ ಪದ ಹಾಡಲು ಬಿಡದ ಮಹೇಶ ಜೋಶಿ ಹಾಳಾಗಿ ಹೋಗಲಿ..: ಸಮ್ಮೇಳನದಲ್ಲಿ ಹಿರಿಯ ಜನಪದ ಕಲಾವಿದೆಯಿಂದ ಹಿಡಿ ಶಾಪ!

ವರದಿ-ಸಮೀರ್ ದಳಸನೂರುವರದಿ-ಸಮೀರ್ ದಳಸನೂರು8 Jan 2023 11:21 PM IST
share
ಬಸವಣ್ಣನ ಪದ ಹಾಡಲು ಬಿಡದ ಮಹೇಶ ಜೋಶಿ ಹಾಳಾಗಿ ಹೋಗಲಿ..: ಸಮ್ಮೇಳನದಲ್ಲಿ ಹಿರಿಯ ಜನಪದ ಕಲಾವಿದೆಯಿಂದ ಹಿಡಿ ಶಾಪ!

ಹಾವೇರಿ, ಜ. 8: ‘ಆ ಅಧ್ಯಕ್ಷ ಮಹೇಶ ಜೋಶಿ ನನ್ನ ಗಾಯನವನ್ನೆ ರದ್ದು ಮಾಡಿದ್ದಾನೆ..! ಅದರಲ್ಲೂ ಬಸವಣ್ಣನ ಕುರಿತು ಹಾಡುತ್ತೇನೆ ಎಂದರೂ, ಬಿಡಲಿಲ್ಲ. ಅಷ್ಟೋ ದೂರು ಊರಿಂದ ಬಂದೆ, ಇಲ್ಲಿ ವೇದಿಕೆಯೇ ನೋಡದಂತೆ ಮಾಡಿದರು..! ಆತ ಈ ಕ್ಷಣವೇ ಹಾಳಾಗಿ ಹೋಗಲಿ’. ಹೀಗೆ, ಕಟುಶಬ್ದಗಳಿಂದ ಮಾಧ್ಯಮ ಪ್ರತಿನಿಧಿಗಳ ಬಳಿ ಹಿರಿಯ ಜನಪದ ಕಲಾವಿದೆ, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತೆ ರುಕ್ಮಣಿ ಮಲ್ಲಪ್ಪ ಹರ್ನಾಳ್ ಅಳಲು ತೋಡಿಕೊಂಡರು.

ರವಿವಾರ ಇಲ್ಲಿನ ಹಾವೇರಿಯಲ್ಲಿ ನಡೆಯುತ್ತಿರುವ 86ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೆ ದಿನ ರವಿವಾರ ವೇದಿಕೆ ಹಿಂಭಾಗವಿರುವ ಮಾಧ್ಯಮ ಕೊಠಡಿ ಬಳಿ ಆಗಮಿಸಿದ ಜಮಖಂಡಿ ಮೂಲದ ಹಿರಿಯ ಜಾನಪದ ಕಲಾವಿದೆ ರುಕ್ಮಣಿ ಮಲ್ಲಪ್ಪ ಹರ್ನಾಳ್ ಅವರು, ತಮ್ಮನ್ನು ಸಾಹಿತ್ಯ ಸಮ್ಮೇಳನದಲ್ಲಿ ಉದ್ದೇಶ ಪೂರಕವಾಗಿ ಕಡೆಗಣನೆ ಮಾಡಿರುವ ಕುರಿತು ಹೇಳಿ ಕಣ್ಣೀರು ಹಾಕಿದರು.

ಸಾಹಿತ್ಯ ಸಮ್ಮೇಳನಕ್ಕೂ ಮೊದಲೇ ಅಂದರೆ, ಆರು ತಿಂಗಳ ಹಿಂದೆಯೇ ಬಿಜೆಪಿ ಶಾಸಕ ನೆಹರು ಓಲೇಕಾರ ಅವರನ್ನು ಸಂಪರ್ಕಿಸಿ ಈ ಬಾರಿ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೆ ಜಾನಪದ ಹಾಡಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದೇ. ಆನಂತರ ಹಾವೇರಿಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲೂ ಪಾಲ್ಗೊಂಡು ಜಾನಪದ ಹಾಡುಗಳನ್ನು ಹಾಡಿದೆ. ಇದನ್ನು ನೋಡಿದ ಅಂದಿನ ಅಧಿಕಾರಿಗಳು, ಇಲ್ಲಿನ ಜನಪ್ರತಿನಿಧಿಗಳು ನನನೆ ಅವಕಾಶ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿ ಜ.7ರಂದು ಅಂದರೆ ಸಮ್ಮೇಳನದ ಎರಡನೆ ದಿನ ಶನಿವಾರ ವೇದಿಕೆಗೆ ಬರುವಂತೆ ಸೂಚಿಸಿದ್ದರು. 

ಅದರಂತೆ ಶನಿವಾರ ಬೆಳಗ್ಗೆಯೇ ಜಮಖಂಡಿಯಿಂದ ಹಾವೇರಿಗೆ ತಲುಪಿದೆ. ಆದರೆ, ಇಲ್ಲಿ ನಡೆದಿದ್ದೇ ಬೇರೆ. ಇಲ್ಲಿ ನನಗೆ ಒಳಗೆ ಬಿಡಲು ತಯಾರಿಲ್ಲ. ಇದನ್ನು ಕಂಡು ಗಬರಿಯಾದೆ, ಯಾರಿಗೆ ಕೇಳಬೇಕು ಎಂದು ಗೊತ್ತಾಗಲಿಲ್ಲ. ಆನಂತರ ಶಾಸಕನನ್ನೆ ಮೊಬೈಲ್ ಮೂಲಕ ಕರೆ ಮಾಡಿದಾಗ, ಅವರು ಕರೆದು ಅವಕಾಶ ಇಲ್ಲ ಎಂದರು. ಆನಂತರ, ನನ್ನನ್ನು ಪೊಲೀಸರಿಂದ ಹೊರದಬ್ಬಲಾಯಿತು. ಇದನ್ನು ನೋಡಿ ನಾನು ದಿಗ್ಬ್ರಮೆಯಾಯಿತು ಎಂದು ರುಕ್ಮಣಿ ಮಲ್ಲಪ್ಪ ಹರ್ನಾಳ್ ಕಣ್ಣೀರು ಸುರಿಸಿದರು.

ಜೋಶಿ ಯಾರನ್ನು ಸೇರಿಸಿಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ, ತಮ್ಮ ಸಮುದಾಯವನ್ನೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಸ್ಥಳೀಯ, ಲಿಂಗಾಯುತ, ಮುಸ್ಲಿಮರು, ದಲಿತರನ್ನು ಇಲ್ಲಿ ಬಿಡದಂತೆಯೇ ನೋಡಲಾಗಿದ್ದು, ಭಾರೀ ಅನ್ಯಾಯವಾಗಿದೆ. ಆತ ಹಾಳಾಗಿ ಹೋಗಲಿ ಎಂದು ಅವರು ಟೀಕಿಸಿದರು.

ಬಸವಣ್ಣ ಪದಗಳು ಕೈಬಿಟ್ಟರು..!: ನಾನು ಈ ಹಿಂದೆ ನಡೆದ ಸಮ್ಮೇಳನ ತಯಾರಿ ಸಭೆಯಲ್ಲಿ ಪಾಲ್ಗೊಂಡು, ಬಸವಣ್ಣ ಹಾಗೂ ನೀಲಮ್ಮ ವಚನಗಳನ್ನು ಹಾಡಿದೆ. ಇದನ್ನು ಎಲ್ಲರೂ ಒಪ್ಪಿದ್ದರು. ಆದರೆ, ಏಕಾಏಕಿ ಮಹೇಶ್ ಜೋಶಿ ಇದಕ್ಕೆ ಅವಕಾಶ ನೀಡಲಿಲ್ಲ. ಇದಕ್ಕೆ ಕಾರಣವೇನು ಎಂಬುವುದು ಗೊತ್ತಾಗಬೇಕು ಎಂದು ರುಕ್ಮಣಿ ಮಲ್ಲಪ್ಪ ಹರ್ನಾಳ್ ಹೇಳಿದರು. 

share
ವರದಿ-ಸಮೀರ್ ದಳಸನೂರು
ವರದಿ-ಸಮೀರ್ ದಳಸನೂರು
Next Story
X