Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 2050ರ ವೇಳೆಗೆ ಹೂಳಿನಿಂದಾಗಿ ಭಾರತದ...

2050ರ ವೇಳೆಗೆ ಹೂಳಿನಿಂದಾಗಿ ಭಾರತದ 3,700 ಜಲಾಶಯಗಳ ಶೇ.26ರಷ್ಟು ಸಂಗ್ರಹ ಸಾಮರ್ಥ್ಯ ನಷ್ಟ

9 Jan 2023 11:21 PM IST
share
2050ರ ವೇಳೆಗೆ ಹೂಳಿನಿಂದಾಗಿ ಭಾರತದ 3,700 ಜಲಾಶಯಗಳ ಶೇ.26ರಷ್ಟು ಸಂಗ್ರಹ ಸಾಮರ್ಥ್ಯ ನಷ್ಟ

ಹೊಸದಿಲ್ಲಿ,ಜ.9: ಹೂಳು ಸಂಗ್ರಹದಿಂದಾಗಿ 2050ರ ವೇಳೆಗೆ ಭಾರತದಲ್ಲಿಯ ಸುಮಾರು 3,700 ಜಲಾಶಯಗಳು ತಮ್ಮ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.26ರಷ್ಟನ್ನು ಕಳೆದುಕೊಳ್ಳಲಿವೆ ಮತ್ತು ಇದು ಭವಿಷ್ಯದಲ್ಲಿ ನೀರಿನ ಭದ್ರತೆ,ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯನ್ನು ದುರ್ಬಲಗೊಳಿಸಲಿದೆ ಎಂದು ವಿಶ್ವಸಂಸ್ಥೆಯ ನೂತನ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

50 ವರ್ಷಗಳಿಗೂ ಹಳೆಯದಾದ 141 ಬೃಹತ್ ಜಲಾಶಯಗಳ ಪೈಕಿ ಶೇ.25ರಷ್ಟು ಜಲಾಶಯಗಳು ತಮ್ಮ ಆರಂಭಿಕ ಸಂಗ್ರಹ ಸಾಮರ್ಥ್ಯದ ಕನಿಷ್ಠ ಶೇ.30ರಷ್ಟನ್ನು ಕಳೆದುಕೊಂಡಿವೆ ಎಂದು ಕೇಂದ್ರೀಯ ಜಲ ಆಯೋಗವು 2015ರಲ್ಲಿ ವರದಿ ಮಾಡಿತ್ತು.

ಸಂಗ್ರಹವಾಗಿರುವ ಹೂಳು ಈಗಾಗಲೇ ವಿಶ್ವಾದ್ಯಂತ ಸುಮಾರು 50,000 ಬೃಹತ್ ಜಲಾಶಯಗಳ ಒಟ್ಟು ಮೂಲ ಸಂಗ್ರಹ ಸಾಮರ್ಥ್ಯವನ್ನು ಅಂದಾಜು ಶೇ.13ರಿಂದ ಶೇ.19ರಷ್ಟು ಕುಂಠಿತಗೊಳಿಸಿದೆ.

150 ದೇಶಗಳಲ್ಲಿಯ 47,403 ಬೃಹತ್ ಜಲಾಶಯಗಳ 6,316 ಶತಕೋಟಿ ಘನ ಮೀಟರ್ ನೀರು ಸಂಗ್ರಹದ ಆರಂಭಿಕ ಸಾಮರ್ಥ್ಯವು 2050ರ ವೇಳೆಗೆ 4,665 ಶತಕೋಟಿ ಘನ ಮೀಟರ್‌ಗೆ ಕುಸಿಯಲಿದೆ,ತನ್ಮೂಲಕ ಶೇ.26ರಷ್ಟು ನೀರಿನ ಸಂಗ್ರಹ ಕಡಿಮೆಯಾಗಲಿದೆ ಎಂದು ವಿಶ್ವಸಂಸ್ಥೆಯ ಯುನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆನ್ ವಾಟರ್,ಎನ್ವಿರಾನ್ಮೆಂಟ್ ಆ್ಯಂಡ್ ಹೆಲ್ತ್ (ಯುಎನ್‌ಯು-ಐಎನ್‌ಡಬ್ಲುಇಎಚ್)ನ ಅಧ್ಯಯನವು ತೋರಿಸಿದೆ.

ಸಂಗ್ರಹ ಸಾಮರ್ಥ್ಯದಲ್ಲಿ 1,651 ಶತಕೋಟಿ ಘನ ಮೀಟರ್ ಕುಸಿತವು ಹೆಚ್ಚುಕಡಿಮೆ ಭಾರತ,ಚೀನಾ,ಇಂಡೋನೇಶ್ಯಾ,ಫ್ರಾನ್ಸ್ ಮತ್ತು ಕೆನಡಾಗಳ ವಾರ್ಷಿಕ ನೀರಿನ ಬಳಕೆಗೆ ಸಮವಾಗಿದೆ.

ವಿಶ್ವದ ಅತ್ಯಂತ ಹೆಚ್ಚು ಅಣೆಕಟ್ಟುಗಳಿರುವ ಪ್ರದೇಶವಾಗಿರುವ ಏಶ್ಯಾ-ಪೆಸಿಫಿಕ್ ವಲಯವು 2022ರಲ್ಲಿ ತನ್ನ ಆರಂಭಿಕ ಜಲಸಂಗ್ರಹ ಸಾಮರ್ಥ್ಯವನ್ನು ಶೇ.13ರಷ್ಟು ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿತ್ತು. 2050ರ ವೇಳೆಗೆ ಈ ನಷ್ಟದ ಪ್ರಮಾಣವು ಶೇ.23ಕ್ಕೆ ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ.

ಏಶ್ಯಾ-ಫೆಸಿಫಿಕ್ ಪ್ರದೇಶದಲ್ಲಿ ವಿಶ್ವದ ಶೇ.60ರಷ್ಟು ಜನಸಂಖ್ಯೆ ವಾಸವಾಗಿದ್ದು,ಸುಸ್ಥಿರ ನೀರು ಮತ್ತು ಆಹಾರ ಭದ್ರತೆಗಾಗಿ ಜಲಸಂಗ್ರಹವು ನಿರ್ಣಾಯಕವಾಗಿದೆ.

share
Next Story
X