Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೊಂಗಲ್ ಆಹ್ವಾನ ಪತ್ರಿಕೆಯಲ್ಲಿ ಮತ್ತೆ...

ಪೊಂಗಲ್ ಆಹ್ವಾನ ಪತ್ರಿಕೆಯಲ್ಲಿ ಮತ್ತೆ ಸರಕಾರವನ್ನು ಕೆಣಕಿದ ತಮಿಳುನಾಡು ರಾಜ್ಯಪಾಲ

ಸಭಾತ್ಯಾಗ ನಡೆಸಿದ ವೇಗದಲ್ಲೇ ರಾಜ್ಯದಿಂದ ಹೋಗಲಿ: ಸಂಸದ

10 Jan 2023 10:08 PM IST
share
ಪೊಂಗಲ್ ಆಹ್ವಾನ ಪತ್ರಿಕೆಯಲ್ಲಿ ಮತ್ತೆ ಸರಕಾರವನ್ನು ಕೆಣಕಿದ ತಮಿಳುನಾಡು ರಾಜ್ಯಪಾಲ
ಸಭಾತ್ಯಾಗ ನಡೆಸಿದ ವೇಗದಲ್ಲೇ ರಾಜ್ಯದಿಂದ ಹೋಗಲಿ: ಸಂಸದ

ಚೆನ್ನೈ, ಜ. 10: ತಮಿಳುನಾಡು ರಾಜಭವನದಲ್ಲಿ ಪೊಂಗಲ್ ಹಬ್ಬವನ್ನು ಆಚರಿಸುವುದಕ್ಕೆ ಸಂಬಂಧಿಸಿ ರಾಜ್ಯಪಾಲ ಆರ್.ಎನ್. ರವಿ ಸಿದ್ಧಪಡಿಸಿರುವ ಆಹ್ವಾನಪತ್ರಿಕೆಯಲ್ಲಿ ‘ತಮಿಳುನಾಡು ಸರಕಾರ’ದ ಬದಲಿಗೆ ‘ತಮಿಳಗಆಳುನಾರ್’ ಎಂಬ ಪದವನ್ನು ಬಳಸಿರುವುದು ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಿದೆ. ಇದಕ್ಕೆ ತಮಿಳುನಾಡು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತಮಿಳುನಾಡು’ ಎಂಬಹೆಸರಿನ ಬದಲು ‘ತಮಿಳಗಮ್’ ಎಂಬಹೆಸರು ರಾಜ್ಯಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಹೇಳುವ ಮೂಲಕ ರಾಜ್ಯಪಾಲರು ಈಗಾಗಲೇ ವಿವಾದವೊಂದನ್ನು ಸೃಷ್ಟಿಸಿದ್ದರು.

ರಾಜ್ಯಪಾಲರ ನಿವಾಸ ರಾಜಭವನದಲ್ಲಿ ನಡೆಯಲಿರುವ ಪೊಂಗಲ್ ಹಬ್ಬದ ಆಹ್ವಾನಪತ್ರಿಕೆಯನ್ನು ತಮಿಳಿನಲ್ಲಿ ಸಿದ್ಧಪಡಿಸಲಾಗಿದ್ದು, ರಾಜ್ಯ ಸರಕಾರದ ಲಾಂಛನವೂ ಅದರಲ್ಲಿಲ್ಲ. ಅದರಲ್ಲಿ ಭಾರತ ಸರಕಾರದ ಲಾಂಛನಮಾತ್ರಇದೆ.

ಇಂಗ್ಲಿಷ್ ಭಾಷೆಯ ಆಹ್ವಾನ ಪತ್ರಿಕೆಯಲ್ಲಿ ತಮಿಳುನಾಡು ರಾಜ್ಯಪಾಲರ ಹೆಸರನ್ನು ಮಾತ್ರ ಬಳಸಲಾಗಿದೆ.

‘‘ಇಡೀ ದೇಶಕ್ಕೆ ಅನ್ವಯವಾಗುವ ಪ್ರತಿಯೊಂದಕ್ಕೂ ತಮಿಳುನಾಡು ‘ಬೇಡ’ ಎನ್ನುತ್ತದೆ. ಇದು ಅಭ್ಯಾಸ ಆಗಿ ಹೋಗಿದೆ. ಈ ಬಗ್ಗೆ ತುಂಬ ಬರೆಯಲಾಗಿದೆ. ಎಲ್ಲವೂ ಸುಳ್ಳು ಮತ್ತು ಕಲ್ಪನೆ. ಇದನ್ನು ತುಂಡರಿಸಬೇಕು. ಸತ್ಯ ಮೇಲೆ ಬರಬೇಕು. ವಾಸ್ತವವಾಗಿ, ತಮಿಳುನಾಡು ಎನ್ನುವುದು ಭಾರತದ ಆತ್ಮವನ್ನು ಹಿಡಿದಿಡುವ ನೆಲ. ಅದು ಭಾರತದ ಗುರುತು. ನಿಜವಾಗಿ, ಈ ನೆಲವನ್ನು ತಮಿಳಗಮ್ ಎಂದು ಕರೆಯುವುದೇ ಹೆಚ್ಚು ಸೂಕ್ತ. ದೇಶದ ಉಳಿದ ಭಾಗಗಳು ತುಂಬಾ ಸಮಯ ವಿದೇಶೀಯರ ಕೈಯಲ್ಲಿ ವಿನಾಶವನ್ನು ಅನುಭವಿಸಿದವು’’ ಎಂದು ಕಳೆದ ವಾರ ಕಾರ್ಯಕ್ರಮವೊಂದರಲ್ಲಿ ತಮಿಳುನಾಡು ರಾಜ್ಯಪಾಲರು ಹೇಳಿದ್ದರು.

ತಮಿಳುನಾಡು ಎಂದರೆ ‘‘ತಮಿಳರ ದೇಶ’’ ಹಾಗೂ ತಮಿಳಗಮ್ ಎಂದರೆ ‘‘ತಮಿಳು ಜನರ ಮನೆ’’. ಇದು ಈ ವಲಯದ ಪ್ರಾಚೀನ ಹೆಸರಾಗಿದೆ.

‘‘ತಮಿಳಗಮ್’’ ಎಂಬ ಹೆಸರನ್ನು ತೇಲಿ ಬಿಡುವ ಮೂಲಕ ರಾಜ್ಯಪಾಲರು ಪ್ರತಿಪಕ್ಷ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದ್ದಾರೆ’’ ಎಂದು ಆಡಳಿತಾರೂಢ ಡಿಎಮ್‌ಕೆ ಮತ್ತು ಅದರ ಮಿತ್ರಪಕ್ಷಗಳು ಆರೋಪಿಸಿವೆ.

‘‘ಅವರು ಸುಳ್ಳು ಮತ್ತು ಸಂಭಾವ್ಯ ಅಪಾಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’’ ಎಂದು ಡಿಎಮ್‌ಕೆ ನಾಯಕ ಟಿ.ಆರ್. ಬಾಲು ಹೇಳಿದ್ದಾರೆ.

ರಾಜ್ಯಪಾಲರ ಆಹ್ವಾನ ಪತ್ರಿಕೆಯು ಕೆಲವು ದಿನಗಳ ಹಿಂದೆಯೇ ಹೊರಬಿದ್ದಿದೆಯಾದರೂ, ಅವರು ಸೋಮವಾರ ರಾಜ್ಯಸರಕಾರದೊಂದಿಗೆ ಜಟಾಪಟಿ ನಡೆಸಿ ವಿಧಾನಸಭೆಯಿಂದ ಸಭಾತ್ಯಾಗ ನಡೆಸಿದ ಬಳಿಕ ವಿವಾದವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

► ಸಭಾತ್ಯಾಗ ನಡೆಸಿದ ವೇಗದಲ್ಲೇ ರಾಜ್ಯದಿಂದ ಹೋಗಲಿ: ಸಿಪಿಎಮ್ ಸಂಸದ

ಪೊಂಗಲ್ ಆಚರಣೆಗೆ ಸಂಬಂಧಿಸಿ ರಾಜ್ಯಪಾಲರ ನಿವಾಸವು ಹೊರಡಿಸಿರುವ ಎರಡು ಆಹ್ವಾನ ಪತ್ರಿಕೆಗಳ ಚಿತ್ರಗಳನ್ನು ಸಿಪಿಎಮ್ ಸಂಸದಸು. ವೆಂಕಟೇಶನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘‘ರಾಜ್ಯಪಾಲರು ಕಳೆದ ವರ್ಷದ ಆಹ್ವಾನ ಪತ್ರಿಕೆಯಲ್ಲಿ ತನ್ನನ್ನು ‘ತಮಿಳುನಾಡು ಗವರ್ನರ್’ ಎಂಬುದಾಗಿ ಕರೆದುಕೊಂಡಿದ್ದರೆ, ಈ ಬಾರಿಯ ಪತ್ರಿಕೆಯಲ್ಲಿ ‘‘ತಮಿಳಗಆಳುನಾರ್’’ ಎಂಬುದಾಗಿ ಕರೆದುಕೊಂಡಿದ್ದಾರೆ. ನಿನ್ನೆ ಅವರು ವಿಧಾನಸಭೆಯಿಂದ ಹೊರನಡೆದ ವೇಗದಲ್ಲೇ ರಾಜ್ಯದಿಂದ ಹೊರಹೋಗಬೇಕು. ಅಥವಾ ಅವರನ್ನು ಉಚ್ಚಾಟಿಸಬೇಕು’’ ಎಂದುವೆಂಕಟೇಶನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಕೊಯಂಬತೋರ್‌ನಲ್ಲಿ ಪ್ರತಿಭಟನೆ

ತಂತಾರಿ ಪೆರಿಯಾರ್ ದ್ರಾವಿಡರ್ ಕಳಗಮ್ ಮಂಗಳವಾರ ಕೊಯಂಬತೋರ್‌ನಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ವಿರುದ್ಧ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ರಾಜ್ಯಪಾಲರ ಪ್ರತಿಕೃತಿಯನ್ನು ದಹಿಸಲು ಪ್ರಯತ್ನಿಸಿದರು. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ಅದನ್ನು ತಡೆದರು. ಕೆಲವು ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದರು.

share
Next Story
X