Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ನಾಸಾ ಉಪಗ್ರಹ ಸುರಕ್ಷಿತ ಪತನ : ಆಲಾಸ್ಕ...

ನಾಸಾ ಉಪಗ್ರಹ ಸುರಕ್ಷಿತ ಪತನ : ಆಲಾಸ್ಕ ಸಮೀಪದ ಸಾಗರದಲ್ಲಿ ಬಿದ್ದ ಉಪಗ್ರಹ

40 ವರ್ಷಗಳ ಕಾಲ ಭೂಮಿಯನ್ನು ಪರಿಭ್ರಮಿಸಿದ ದಾಖಲೆ

10 Jan 2023 10:38 PM IST
share
ನಾಸಾ ಉಪಗ್ರಹ ಸುರಕ್ಷಿತ ಪತನ : ಆಲಾಸ್ಕ ಸಮೀಪದ ಸಾಗರದಲ್ಲಿ ಬಿದ್ದ ಉಪಗ್ರಹ
40 ವರ್ಷಗಳ ಕಾಲ ಭೂಮಿಯನ್ನು ಪರಿಭ್ರಮಿಸಿದ ದಾಖಲೆ

ಕೇಪ್‌ಕ್ಯಾನೆವರಲ್,ಜ.10: ಸುಮಾರು 40 ವರ್ಷಗಳ ಕಾಲ ಭೂಮಿಯ ಕಕ್ಷೆಯನ್ನು ಪರಿಭ್ರಮಿಸಿದ್ದ ಉಪಗ್ರಹವೊಂದು ಸೋಮವಾರ ಅಲಾಸ್ಕ ಕರಾವಳಿಯ ಸಮೀಪದ ಸಾಗರ ಪ್ರದೇಶದಲ್ಲಿ ಯಾವುದೇ ಅಪಾಯವುಂಟು ಮಾಡದೆ ಪತನಗೊಂಡಿದೆ. ಎಂದು ವರದಿಯಾಗಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಿರ್ಮಿತ ಈ ಉಪಗ್ರಹವನ್ನು 1984ರಲ್ಲಿ ಅಂತರಿಕ್ಷದಲ್ಲಿ ಸ್ಥಾಪಿಸಲಾಗಿತ್ತು. ರವಿವಾರ ರಾತ್ರಿ ಉಪಗ್ರಹವು ಅಲಾಸ್ಕಾ ಪ್ರದೇಶದಿಂದ ಕೆಲವೇ ನೂರು ಮೈಲು ದೂರದಲ್ಲಿರುವ ಬೆರಿಂಗ್ ಸಮುದ್ರದಲ್ಲಿ ಪತನಗೊಂಡಿದೆ. ಪತನಗೊಂಡ ಉಪಗ್ರಹದ ಅವಶೇಷಗಳಿಂದ ಯಾವುದೇ ಹಾನಿಯಾಗಿಲ್ಲವೆಂದು ನಾಸಾ ತಿಳಿಸಿದೆ.

2450 ಕೆ.ಜಿ.ತೂಕದ ಈ ಉಪಗ್ರಹವನ್ನು ಭೂ ವಿಕಿರಣ ಅಧ್ಯಯಕ್ಕಾಗಿ ಉಡಾವಣೆಗೊಳಿಸಲಾಗಿತ್ತು. ಆದರೆ ಪತನಗೊಳ್ಳುವ ವೇಳೆ ಅದು ಭೂವಾತಾವರಣವನ್ನು ಪ್ರವೇಶಿಸುವಾಗ ಸಂಪೂರ್ಣವಾಗಿ ಉರಿದು ಬೂದಿಯಾಗಲಿದೆಯಾದರೂ ಕೆಲವು ಅವಶೇಷಗಳು ಉಳಿಯುವ ಸಾಧ್ಯತೆಯಿದೆಯೆಂದು ನಾಸಾ ಹೇಳಿತ್ತು. ಆದರೆ ಈ ಉಪಗ್ರಹದ ಅವಶೇಷಗಳ ಪತನದ ವೇಳೆ ಹಾನಿಯಾಗುವ ಸಾಧ್ಯತೆಯ ಪ್ರಮಾಣ 9400ಕ್ಕೆ 1ರಷ್ಟಿರುತ್ತದೆ ಎಂಬುದಾಗಿ ಅದು ತಿಳಿಸಿತ್ತು.

ಅಮೆರಿಕದ ಬಾಹ್ಯಾಕಾಶ ನೌಕೆ ಸ್ಪೇಶ್‌ಶಟಲ್ ಚ್ಯಾಲೆಂಜರ್ 1984ರಲ್ಲಿ ಈ ಉಪಗ್ರಹವನ್ನು ಭೂಕಕ್ಷೆಗೆ ಒಯ್ದಿತ್ತು. ಬಾಹ್ಯಾಕಾಶ ನೌಕೆಯಲ್ಲಿದ್ದ ಅಮೆರಿಕದ ಮಹಿಳಾಗಗನಯಾತ್ರಿ ಸ್ಯಾಲಿ ರೈಡ್ ಈ ಉಪಗ್ರಹವನ್ನು ಕಕ್ಷೆಗೆ ಬಿಡುಗಡೆಗೊಳಿಸಿದ್ದರು.

ಈ ಉಪಗ್ರಹ  ವಾತಾವರಣದಲ್ಲಿ ಓರೆನ್ ವಲಯದ ಅಧ್ಯಯನ ನಡೆಸಿತ್ತು ಹಾಗೂ ಸೂರ್ಯನಿಂದ ಬಿಡುಗಡೆಯಾಗುವ ವಿಕಿರಣ ಇಂಧನವನ್ನು ಭೂಮಿಯು ಹೇಗೆ ಹೀರಿಕೊಳ್ಳುತ್ತದೆಯೆಂಬ ಬಗ್ಗೆ ಅದು ದತ್ತಾಂಶಗಳನ್ನು ಸಂಗ್ರಹಿಸಿತ್ತು.

share
Next Story
X