ಹುಬ್ಬಳ್ಳಿಯಲ್ಲಿ ಪ್ರಧಾನಿ ರೋಡ್ ಶೋ ವೇಳೆ ಭದ್ರತಾ ಲೋಪ; ಬ್ಯಾರಿಕೇಡ್ ಹಾರಿ ಮೋದಿ ಬಳಿ ತೆರಳಿದ್ದ ಬಾಲಕ ಹೇಳಿದ್ದೇನು?
ಹುಬ್ಬಳ್ಳಿ, ಜ.13: ನಿನ್ನೆ (ಶುಕ್ರವಾರ) ರಾಷ್ಟ್ರೀಯ ಯುವಜನೋತ್ಸವಕ್ಕೆ ಚಾಲನೆ ನೀಡಲು ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಯ ಏರ್ ಪೋರ್ಟ್ ನಿಂದ ರೈಲ್ವೇ ಮೈದಾನದತ್ತ ರೋಡ್ ಶೋ ನಡೆಸಿದ್ದರು. ಈ ವೇಳೆ ಬಾಲಕನೋರ್ವ ಬ್ಯಾರಿಕೇಡ್ ಹಾರಿ ಪ್ರಧಾನಿ ಮೋದಿ ಬಳಿ ತೆರಳಿ ಹೂ ಹಾರ ಹಾಕಲು ಯತ್ನಿಸಿದ್ದು, ಆತನನ್ನು ಭದ್ರತಾ ಸಿಬ್ಬಂದಿ ತಡೆದಿದ್ದರು.
ಈ ಘಟನೆ ಬಗ್ಗೆ ಬಾಲಕ ಕುನಾಲ್ ದೊಂಗಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ.
'ಮೋದಿಯವರನ್ನು ನೋಡಲು ನಮ್ಮ ಕುಟುಂಬಸ್ಥರ ಜೊತೆಗೆ ಹೋಗಿದ್ದೆ. ಮೋದಿಯವರಿಗೆ ಹೂ ಹಾರ ಹಾಕುವ ಯೋಜನೆ ಮಾಡಿದ್ದೆ. ಆದರೆ ನಮ್ಮ ಸಮೀಪ ಅವರು ಬರಲಿಲ್ಲ, ಹೀಗಾಗಿ ಮಾಲೆ ಹಿಡಿದು ಮೋದಿಯವರ ಬಳಿ ತೆರಳಿದೆ. ಪೊಲೀಸರು ನನ್ನನ್ನು ಪಕ್ಕಕ್ಕೆ ತಳ್ಳಿದರು. ಆದರೆ, ಮೋದಿಯವರು ನನ್ನ ಹಾರ ತೆಗೆದುಕೊಂಡರು. ಇದರಿಂದಾಗಿ ನನಗೆ ತುಂಬಾ ಖುಷಿಯಾಗಿದೆ' ಎಂದು ಕುನಾಲ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ: ಹುಬ್ಬಳ್ಳಿಯ ಪ್ರಧಾನಿ ರೋಡ್ಶೋನಲ್ಲಿ ಭದ್ರತಾ ಲೋಪ !
Next Story