Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಸಿನೆಮಾತು
  4. ನೋವು-ನಲಿವುಗಳ ಹಾಡಿನ ‘ಆರ್ಕೆಸ್ಟ್ರಾ’

ನೋವು-ನಲಿವುಗಳ ಹಾಡಿನ ‘ಆರ್ಕೆಸ್ಟ್ರಾ’

ರಶ್ಮಿ ಎಸ್.ರಶ್ಮಿ ಎಸ್.15 Jan 2023 6:40 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ನೋವು-ನಲಿವುಗಳ ಹಾಡಿನ ‘ಆರ್ಕೆಸ್ಟ್ರಾ’

ಆರ್ಕೆಸ್ಟ್ರಾ. ಸಾಮಾನ್ಯವಾಗಿ ಆರ್ಕೆಸ್ಟ್ರಾ ಅಂದರೆ ಎಲ್ಲರಿಗೂ ಒಂದಷ್ಟು ಮನರಂಜನೆಯ ಖುಷಿ ನೆನಪಾಗುತ್ತದೆ. ಅದೇ ಆರ್ಕೆಸ್ಟ್ರಾದಲ್ಲಿ ಎಷ್ಟೋ ಪ್ರೇಮಕಥೆಗಳು ಅರಳುತ್ತವೆ. ಎಷ್ಟೋ ಕಥೆಗಳು ಅಲ್ಲೇ ಮುಗಿದು ಹೋಗುತ್ತವೆ. ಆದರೆ ಆರ್ಕೆಸ್ಟ್ರಾದಲ್ಲಿ ಹಾಡುವ ಕಲಾವಿದರ ಬದುಕು ಯಾರಿಗೂ ಕಾಣುವುದೇ ಇಲ್ಲ. ಅಂತಹ ಬದುಕನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದೆ ‘ಆರ್ಕೆಸ್ಟ್ರಾ ಮೈಸೂರು’ ಚಿತ್ರತಂಡ. ಈ ವಾರ ರಿಲೀಸ್ ಆದ ಈ ಸಿನೆಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನೆಮಾದಲ್ಲಿ ಒಂದು ಎಮೋಷನ್ ಇದೆ. ಬದುಕಿನ ಹೋರಾಟವಿದೆ. ಹಾಡುಗಾರರ ಬದುಕು ಬವಣೆ ಎಲ್ಲವೂ ಈ ಚಿತ್ರದಲ್ಲಿದೆ.

ಸಂಗೀತವನ್ನೇ ನಂಬಿಕೊಂಡು ಬದುಕು ಅರಸುತ್ತಾ ಹೊರಡುವವರ ಕಥೆಯೇ ಈ ಆರ್ಕೆಸ್ಟ್ರಾ ಮೈಸೂರು ಸಿನೆಮಾ. ಬಣ್ಣ ಬಣ್ಣವಾಗಿ ಕಾಣಿಸುವವರ ಬದುಕಿನ ಹಿಂದೆ ಎಂಥ ಕಷ್ಟಗಳಿರುತ್ತವೆ, ಆ ಬದುಕು ಕಟ್ಟಿಕೊಳ್ಳಲು ಅವರು ಎಂಥ ಪರಿಸ್ಥಿತಿಗಳನ್ನು ಎದುರಿಸಿರುತ್ತಾರೆ ಎನ್ನುವುದನ್ನು ಈ ಚಿತ್ರದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಸುನೀಲ್ ಮೈಸೂರು. ಸಂಪೂರ್ಣವಾಗಿ ಮೈಸೂರಿನವರೇ ಸೇರಿಕೊಂಡು ಈ ಚಿತ್ರ ಮಾಡಿದ್ದು, ಆ ಮಣ್ಣಿನ ಸಂಸ್ಕೃತಿ, ಆರ್ಕೆಸ್ಟ್ರಾದ ಒಡನಾಟ, ಅಲ್ಲಿನ ಜೀವನಶೈಲಿ ಎಲ್ಲವೂ ಇಲ್ಲಿ ಬಂದುಹೋಗುತ್ತದೆ.

ಇದು ಸಿನೆಮಾ ಅನ್ನುವುದಕ್ಕಿಂತ ಒಂದು ಅನುಭವ ಅಂದರೇನೇ ಚೆನ್ನಾಗಿರುತ್ತದೆ. ಯಾಕೆಂದರೆ, ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವವರ ಅನುಭವವನ್ನೇ ಇಲ್ಲಿ ಸಿನೆಮಾ ಮಾಡಿದ್ದಾರೆ ನಿರ್ದೇಶಕರು. ಕಥೆ ಸಾಮಾನ್ಯ ಅನಿಸಿದರೂ, ಅದನ್ನು ಮನಮುಟ್ಟುವಂತೆ ನಿರೂಪಣೆ ಮಾಡಿದ್ದಾರೆ. ಪಕ್ಕಾ ಮೈಸೂರು ಸಿನೆಮಾ ಆಗಿರುವುದರಿಂದ, ಅಲ್ಲಿನ ಭಾಷೆ, ಅಲ್ಲಿನ ಜೀವನಶೈಲಿ, ಆರ್ಕೆಸ್ಟ್ರಾಕ್ಕೆ ಅಲ್ಲಿ ಸಿಗುವ ಮನ್ನಣೆ, ಅದೇ ಸ್ಟೇಜಿನಲ್ಲಿ ಅರಳುವ ಬದುಕುಗಳು ಎಲ್ಲವನ್ನೂ ಈ ಸಿನೆಮಾದಲ್ಲಿ ಮನಮುಟ್ಟುವಂತೆ ತೋರಿಸಿದ್ದಾರೆ. ಕಥೆಯಲ್ಲಿ ಒಂದು ತಾಜಾತನ ಇದೆ. ಜೊತೆಗೆ ಉತ್ಸಾಹವೂ ಎದ್ದು ಕಾಣುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕರು ಜಾಣ್ಮೆ ಪ್ರದರ್ಶಿಸಿದ್ದಾರೆ.

ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರೆಲ್ಲರೂ ಪಾತ್ರಕ್ಕೆ ಜೀವತುಂಬಿದ್ದಾರೆ. ಸಿನೆಮಾ ನೋಡುವ ಪ್ರೇಕ್ಷಕರಿಗೆ ತಟ್ಟುವ ಹಾಗೆ ಅಭಿನಯಿಸಿದ್ದಾರೆ. ದಿಲೀಪ್ ರಾಜ್, ಮಹದೇವ್ ಪ್ರಸಾದ್, ರಾಜಲಕ್ಷ್ಮೀ ಸೇರಿದಂತೆ ಕಲಾವಿದರೆಲ್ಲರ ಅಭಿನಯಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಕೆಸ್ಟ್ರಾ, ಅಲ್ಲಿನ ಹಾಡುಗಳು, ಆ ಪರಿಸರವನ್ನು ಇಷ್ಟಪಡುವ ಪ್ರೇಕ್ಷಕರಿಗೆ ಸಿನೆಮಾ ಇಷ್ಟವಾಗುತ್ತದೆ. ಜೊತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆಯೂ ಮಾಡುತ್ತದೆ.

ಚಿತ್ರ: ಆರ್ಕೆಸ್ಟ್ರಾ ಮೈಸೂರು

 ತಾರಾಗಣ: ದಿಲೀಪ್ ರಾಜ್, ಮಹದೇವ್ ಪ್ರಸಾದ್, ನಾಗಭೂಷಣ್, ಸಂಚು, ರಾಜಲಕ್ಷ್ಮೀ

ನಿರ್ದೇಶಕ: ಸುನೀಲ್ ಮೈಸೂರು

ನಿರ್ಮಾಪಕ: ಅಶ್ವಿನ್

ಸಂಗೀತ ನಿರ್ದೇಶಕ: ರಘು ದೀಕ್ಷಿತ್

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ರಶ್ಮಿ ಎಸ್.
ರಶ್ಮಿ ಎಸ್.
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X