ಹಾಸನ | ಆಲೂರಿನಲ್ಲಿ ಯುವಕನ ಹತ್ಯೆ
ಹಾಸನ, ಜ.18: ಮಾರಕಾಯುಧದಿಂದ ಇರಿದು ಯುವಕನನ್ನು ಕೊಲೆ(Murder)ಗೈದ ಘಟನೆ ಆಲೂರು ತಾಲೂಕಿನ ಮಗ್ಗೆ ಗ್ರಾಮದ ಚರ್ಚ್ ಕೊಡಿಗೆ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕುಂದೂರು ಗ್ರಾಮದ ಭರತ್(28) ಕೊಲೆಯಾದ ಯುವಕ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಭರತ್ ಗೆ ಚಾಕುವಿಂದ ಇರಿದು ಕೊಲೆಗೈದ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ನಿಷೇಧಿತ PFI ಹೆಸರಿನಲ್ಲಿ ಬೆದರಿಕೆ ಆರೋಪ: ಯುವಕನ ಬಂಧನ
Next Story