Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೇರೊಂದು ಪಿರಮಿಡ್

ಬೇರೊಂದು ಪಿರಮಿಡ್

ಬಿಂಬಗಳು

ಮೂಲ: ಎಡುರ್ಡೊ ಗಲೆಯಾನೊ  ಅನುವಾದ: ಹರೀಶ್ ಗಂಗಾಧರ್ಮೂಲ: ಎಡುರ್ಡೊ ಗಲೆಯಾನೊ ಅನುವಾದ: ಹರೀಶ್ ಗಂಗಾಧರ್19 Jan 2023 11:00 AM IST
share
ಬೇರೊಂದು ಪಿರಮಿಡ್
ಬಿಂಬಗಳು

ಸಾವಿರಾರು ಜನರು ಸಮರೋಪಾದಿಯಲ್ಲಿ ಹಗಲಿರುಳು ದುಡಿದರು ಪಿರಮಿಡ್ ಕಟ್ಟುವುದಕ್ಕೆ ನೂರಾರು ವರ್ಷಗಳೇ ಹಿಡಿಯುತ್ತಿತ್ತು. ಬೃಹದಾಕಾರದ ಬಂಡೆಗಳನ್ನು ಕಡಿದು, ಎಲ್ಲಿಂದಲೋ ಕಲ್ಲುಗಳನ್ನು ಎಳೆದುತಂದು, ಒಂದೇ ಅಳತೆಗೆ ಕೆತ್ತಿ, ಒಂದೊಂದೇ ಜೋಡಿಸಬೇಕಿತ್ತು. ಈ ದೈತ್ಯ ಪಿರಮಿಡ್ ಈಜಿಪ್ಟಿನ ಫೆರೊವಿನ ಅಂತಿಮ ಮತ್ತು ಶಾಶ್ವತ ಶಯನ ಗೃಹವಾಗಿತ್ತು. ಅಂತ್ಯಕ್ರಿಯೆಗಾಗಿ ತಂದಿದ್ದ ಹೇರಳ ಸಂಪತ್ತಿನಿಂದ ಸುತ್ತುವರಿದಿದ್ದ ರಾಜ/ರಾಣಿಯ ಪಾರ್ಥಿವ ಶರೀರ ಇರಿಸಲಾಗುತ್ತಿದ್ದ ಸ್ಥಳ ಈ ಪಿರಮಿಡ್‌ಗಳಾಗಿದ್ದವು.

ಈಜಿಪ್ಟಿಯನ್ ಸಮಾಜ ಈ ಕಲ್ಲಿನ ಪಿರಮಿಡ್‌ಗಳನ್ನು ಮಾತ್ರ ಕಟ್ಟಲಿಲ್ಲ, ಅಲ್ಲಿನ ಸಮಾಜವೇ ಒಂದು ಪಿರಮಿಡ್ ಆಗಿತ್ತು. ಆ ಪಿರಮಿಡ್ ತಳದಲ್ಲಿ ಭೂರಹಿತ ಕೃಷಿಕರು, ಕೂಲಿಯಾಳುಗಳಿರುತ್ತಿದ್ದರು. ಆತ ನೈಲ್ ನದಿಯಲ್ಲಿ ಪ್ರವಾಹ ಬಂದಾಗ ಕಟ್ಟೆಗಳನ್ನು ಎತ್ತರಿಸುತ್ತಿದ್ದ, ಹೊಸ ಕಾಲುವೆಗಳನ್ನು ತೋಡುತ್ತಿದ್ದ, ಕೋಪಗೊಂಡ ದೇವತೆಗಳನ್ನು ಶಾಂತಗೊಳಿಸಲು ದೇವಾಲಯಗಳನ್ನೂ ಕಟ್ಟುತ್ತಿದ್ದ. ಮತ್ತೆ ಕಾಲುವೆಗಳಲ್ಲಿ ನೀರು ಹರಿದು ಬಂದಾಗ ಬೇರೆಯವರ ಜಮೀನಿನಲ್ಲಿ ದುಡಿಯುತ್ತಿದ್ದ.

ನಾಲ್ಕು ಸಾವಿರ ವರ್ಷಗಳ ಹಿಂದಿನ ಭೂರಹಿತ ಕೃಷಿಕರನ್ನು, ಬರಹಗಾರ ದುಹ ಖೆಟಿ ಹೀಗೆ ಚಿತ್ರಿಸುತ್ತಾನೆ-

ರೈತ ನೊಗ ಹೊರುತ್ತಾನೆ

ಆ ಹೆಣಭಾರಕ್ಕೆ ಹೆಗಲು ಕುಗ್ಗಿಹೋಗಿದೆ

ಕೊರಳಲಿ ಕೀವುಗಟ್ಟಿದ ಗಾಯಗಳಿವೆ

ಮುಂಜಾನೆ ಈರುಳ್ಳಿ ಬೆಳೆಗೆ ನೀರು ಹಾಯಿಸಿದರೆ

ಮುಸ್ಸಂಜೆ ಸೊಪ್ಪಿನ ಹೊಲಕ್ಕೆ ನೀರು ಹರಿಸುತ್ತಾನೆ

ಬಿರುಬಿಸಿಲಿನ ಮಧ್ಯಾಹ್ನ ತಾಳೆಮರಕ್ಕೆ ನೀರು ಕಟ್ಟುತ್ತಾನೆ

ಕೆಲವು ಬಾರಿ ಅಲ್ಲೇ ಕುಸಿದು ಬಿದ್ದು ಸಾಯುತ್ತಾನೆ ಕೂಡ.

ಅವನ ಅಂತ್ಯಕ್ರಿಯೆಯಲ್ಲಿ ಯಾವುದೊಂದು ಪುಟ್ಟ ಸ್ಮಾರಕವು ಏಳಲಿಲ್ಲ. ಬದುಕಿದ್ದಾಗ ಬೆತ್ತಲೆ, ಸತ್ತಾಗ ಬೆತ್ತಲೆ. ಧೂಳು, ಮಣ್ಣು ಅವನ ಮನೆ.

ಬದುಕಿದ್ದಾಗ ಅವನು ಮಲಗುತ್ತಿದ್ದ ಚಾಪೆಯನ್ನು ಮರುಭೂಮಿಯ ರಸ್ತೆ ಬದಿಯಲ್ಲಿ ಹಾಸಿ ಅವನ ದೇಹವನ್ನು ಮಲಗಿಸಿ, ಪಕ್ಕದಲ್ಲಿ ಆತ ನೀರು ಕುಡಿಯಲು ಬಳಸುತ್ತಿದ್ದ ಕೆಮ್ಮಣ್ಣಿನ ಹೂಜಿಯನ್ನ ಇಡಲಾಗುತ್ತಿತ್ತು. ಮಣ್ಣಿಗೆ ಮುಂಚೆ ಆತನ ಮುಷ್ಟಿಯೊಳಕ್ಕೆ ಒಂದು ಹಿಡಿ ಗೋಧಿಯನ್ನು ತುರುಕಲಾಗುತಿತ್ತು, ಹಸಿವಾದರೆ ತಿನ್ನಲಿಕ್ಕೆ!

share
ಮೂಲ: ಎಡುರ್ಡೊ ಗಲೆಯಾನೊ  ಅನುವಾದ: ಹರೀಶ್ ಗಂಗಾಧರ್
ಮೂಲ: ಎಡುರ್ಡೊ ಗಲೆಯಾನೊ ಅನುವಾದ: ಹರೀಶ್ ಗಂಗಾಧರ್
Next Story
X