ಅಜ್ಮೇರ್ ದರ್ಗಾಕ್ಕೆ ಪತ್ನಿ ಜತೆ ಜನಾರ್ದನ ರೆಡ್ಡಿ ಭೇಟಿ
ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿಯವರು ಹಾಗೂ ಪತ್ನಿ ಲಕ್ಷ್ಮೀ ಅರುಣಾ ರವರು ರಾಜಸ್ಥಾನದ ಅಜ್ಮೀರ್ ಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನ ಸಲ್ಲಿಸಿದ್ದಾರೆ.
ನಿನ್ನೆ ಸಂಜೆ ರಾಜಸ್ಥಾನದ ಅಜ್ಮೇರ್ ದರ್ಗಾಕ್ಕೆ ರೆಡ್ಡಿ ದಂಪತಿ ಖಾಜಾ ಗರೀಬ್ ನವಾಝ್ ದರ್ಗಾಕ್ಕೆ ತೆರಳಿ ಚಾದರ ಮತ್ತು ಹೂವನ್ನು ಸಮರ್ಪಣೆ ಮಾಡಿದ್ದಾರೆ. ಅಲ್ಲದೇ, ವಿಶೇಷ ಪ್ರಾರ್ಥನೆ ಸಹ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮುಸ್ಲಿಮ್ ಮುಖಂಡರು ಉಪಸ್ಥಿತರಿದ್ದರು.