Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಉಕ್ರೇನ್‌ನಲ್ಲಿ ರಶ್ಯದ 1,80,000 ಯೋಧರು...

ಉಕ್ರೇನ್‌ನಲ್ಲಿ ರಶ್ಯದ 1,80,000 ಯೋಧರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ: ವರದಿ

23 Jan 2023 11:21 PM IST
share
ಉಕ್ರೇನ್‌ನಲ್ಲಿ ರಶ್ಯದ 1,80,000 ಯೋಧರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ: ವರದಿ

ಓಸ್ಲೊ, ಜ.23: ಉಕ್ರೇನ್‌ನಲ್ಲಿನ ಯುದ್ಧದಲ್ಲಿ ಇದುವರೆಗೆ ರಶ್ಯದ 1,80,000 ಯೋಧರು ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ. ಇದೇ ವೇಳೆ ಉಕ್ರೇನ್ನಲ್ಲಿ 1,00,000 ಯೋಧರ ಸಾವು-ನೋವು ಸಂಭವಿಸಿದೆ ಮತ್ತು 30,000 ನಾಗರಿಕರು ಮೃತಪಟ್ಟಿದ್ದಾರೆ ಎಂದು ನಾರ್ವೆ ಸೇನಾ ಮುಖ್ಯಸ್ಥರ ವರದಿ ಹೇಳಿದೆ.

ರಶ್ಯದ ನೆರೆರಾಷ್ಟ್ರವಾಗಿರುವ ನಾರ್ವೆ 1949ರಿಂದಲೂ ನೇಟೊ ಸದಸ್ಯನಾಗಿದೆ. ಈ ಭಾರೀ ನಷ್ಟದ ಹೊರತಾಗಿಯೂ ರಶ್ಯವು ಈ ಯುದ್ಧವನ್ನು ಇನ್ನಷ್ಟು ಅವಧಿಗೆ ಮುಂದುವರಿಸುವ ಸಾಮರ್ಥ್ಯ ಹೊಂದಿದೆ ಎಂದು ನಾರ್ವೆ ಸೇನಾ ಮುಖ್ಯಸ್ಥ ಎರಿಕ್ ಕ್ರಿಸ್ಟೋಫರ್ಸನ್ ಹೇಳಿದ್ದಾರೆ. ಉಕ್ರೇನ್ನ ವೈಮಾನಿಕ ದಾಳಿ ವಿರೋಧಿ ವ್ಯವಸ್ಥೆಯ ಕಾರಣ ಉಕ್ರೇನಿಯನ್ನರು ಇದುವರೆಗೆ ರಶ್ಯದ ವಾಯುಪಡೆಯನ್ನು ಯುದ್ಧದಿಂದ ಹೊರಗಿಡಲು ಯಶಸ್ವಿಯಾಗಿದ್ದಾರೆ. ಆದರೆ ಇದನ್ನು ಎಷ್ಟು ಸಮಯದವರೆಗೆ ಮುಂದುವರಿಸುವ ಸಾಮರ್ಥ್ಯವಿದೆ ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ . ಇತ್ತೀಚಿನ ದಿನಗಳಲ್ಲಿ ರಶ್ಯ ನಡೆಸುವ ಬಹುತೇಕ ದಾಳಿಗಳು ದೀರ್ಘ ಶ್ರೇಣಿಯ ಕ್ಷಿಪಣಿಯ ಮೂಲಕವಾಗಿದೆ. ಚಳಿಗಾಲದಲ್ಲಿ ಉಕ್ರೇನ್ನ ಯುದ್ಧಸಾಮರ್ಥ್ಯ ಉಳಿಸಿಕೊಳ್ಳಲು ಅವರಿಗೆ ಕ್ಷಿಪ್ರವಾಗಿ ಯುದ್ಧಟ್ಯಾಂಕ್ಗಳನ್ನು ಒದಗಿಸುವ ಅಗತ್ಯವಿದೆ ಎಂದವರು ಹೇಳಿದ್ದಾರೆ.

ಉಕ್ರೇನ್ ಮತ್ತು ಯುರೋಪಿಯನ್ ಯೂನಿಯನ್ನ ಹಲವು ದೇಶಗಳ ವಿನಂತಿಯ ಹೊರತಾಗಿಯೂ, ಉಕ್ರೇನ್ಗೆ ಲಿಯೊಪಾರ್ಡ್ ಯುದ್ಧಟ್ಯಾಂಕ್ ಪೂರೈಕೆಯ ಪ್ರಸ್ತಾವವನ್ನು ಜರ್ಮನಿ ತಡೆಹಿಡಿದಿದೆ. ಅತ್ಯಾಧುನಿಕ ಲಿಯೊಪಾರ್ಡ್ ಯುದ್ಧಟ್ಯಾಂಕ್ ಹಲವು ಯುರೋಪಿಯನ್ ಯೂನಿಯನ್ ದೇಶಗಳ ಬಳಿಯಿದೆ. ಆದರೆ ಇದನ್ನು ಉಕ್ರೇನ್ಗೆ ಒದಗಿಸಲು ಜರ್ಮನಿಯ ಅನುಮತಿ ಅಗತ್ಯವಿದೆ. ಯುದ್ಧದಲ್ಲಿ ಯೋಧರ ಸಾವು-ನೋವಿನ ಮಾಹಿತಿಯನ್ನು ಕೆಲ ತಿಂಗಳಿಂದ ರಶ್ಯ ಅಥವಾ ಉಕ್ರೇನ್ ಒದಗಿಸಿಲ್ಲ.

ಉಕ್ರೇನ್ ಗೆ ಹೊಸ ಶಸ್ತ್ರಾಸ್ತ್ರ ಒದಗಿಸಿದರೆ ಜಾಗತಿಕ ದುರಂತ: ಪಾಶ್ಚಿಮಾತ್ಯರಿಗೆ ರಶ್ಯ ಎಚ್ಚರಿಕೆ 

ರಶ್ಯದ ಪ್ರದೇಶಗಳಿಗೆ ಬೆದರಿಕೆಯಾಗಿರುವ ಹೊಸ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ಒದಗಿಸಿದರೆ ಜಾಗತಿಕ ದುರಂತಕ್ಕೆ ಕಾರಣವಾಗಲಿದೆ ಮತ್ತು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಬಳಕೆಯ ವಿರುದ್ಧದ ನೀತಿಯನ್ನು ಇದು ಸಮರ್ಥಿಸುವುದಿಲ್ಲ ಎಂದು ರಶ್ಯ ಸಂಸತ್ತಿನ ಕೆಳಮನೆ ‘ಡೂಮಾ’ದ ಸ್ಪೀಕರ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಪ್ತ ವಿಚೆಸ್ಲಾವ್ ವೊಲೊದಿನ್ ಎಚ್ಚರಿಸಿದ್ದಾರೆ.

ಉಕ್ರೇನ್ ಗೆ ಅಮೆರಿಕ ಮತ್ತು ನೇಟೊದ ನೆರವು ಜಗತನ್ನು ಭಯಾನಕ ಯುದ್ಧದತ್ತ ಮುನ್ನಡೆಸುತ್ತಿದೆ. ಅಮೆರಿಕ ಮತ್ತು ನೇಟೊ ದೇಶಗಳು ಒದಗಿಸುವ ಆಯುಧಗಳು ನಾಗರಿಕ ಪ್ರದೇಶದ ಮೇಲೆ ದಾಳಿಗೆ ಮತ್ತು ನಮ್ಮ ಪ್ರದೇಶವನ್ನು ವಶಪಡಿಸುವ ಪ್ರಯತ್ನಕ್ಕೆ ಬಳಕೆಯಾದರೆ( ಅವರು ಈಗಾಗಲೇ ಈ ಬೆದರಿಕೆ ಒಡ್ಡಿದ್ದಾರೆ), ಅತ್ಯಂತ ಮಾರಕ, ಶಕ್ತಿಶಾಲಿ ಆಯುಧಗಳ ಮೂಲಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ವೊಲೊದಿನ್ ಹೇಳಿದ್ದಾರೆ. ಪರಮಾಣು ಶಕ್ತಿಗಳು ಈ ಹಿಂದೆ ಸ್ಥಳೀಯ ಘರ್ಷಣೆಗಳಲ್ಲಿ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಬಳಸಿಲ್ಲ ಎಂಬ ವಾದಗಳು ಸಮರ್ಥನೀಯವಲ್ಲ. ಯಾಕೆಂದರೆ ಈ ದೇಶಗಳು ತಮ್ಮ ನಾಗರಿಕರ ಭದ್ರತೆಗೆ ಮತ್ತು ದೇಶದ ಪ್ರಾದೇಶಿಕ ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದವರು ಪ್ರತಿಪಾದಿಸಿದ್ದಾರೆ.
 
ಉಕ್ರೇನ್ಗೆ ಕೋಟ್ಯಾಂತರ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒದಗಿಸುವುದಾಗಿ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಕಳೆದ ವಾರ ಭರವಸೆ ನೀಡಿವೆ.

share
Next Story
X