Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇನ್ನಷ್ಟು ಕುಸಿದ ಅದಾನಿ ಶೇರುಗಳು,...

ಇನ್ನಷ್ಟು ಕುಸಿದ ಅದಾನಿ ಶೇರುಗಳು, ಶುಕ್ರವಾರ ಬೆಳಿಗ್ಗೆಯೇ 2 ಲಕ್ಷ ಕೋಟಿ ರೂ. ಕರಗಿದ ಮಾರುಕಟ್ಟೆ ಬಂಡವಾಳ

ಹಿಂಡನ್ಬರ್ಗ್ ಹೊಡೆತ

27 Jan 2023 4:15 PM IST
share
ಇನ್ನಷ್ಟು ಕುಸಿದ ಅದಾನಿ ಶೇರುಗಳು, ಶುಕ್ರವಾರ ಬೆಳಿಗ್ಗೆಯೇ 2 ಲಕ್ಷ ಕೋಟಿ ರೂ. ಕರಗಿದ ಮಾರುಕಟ್ಟೆ ಬಂಡವಾಳ
ಹಿಂಡನ್ಬರ್ಗ್ ಹೊಡೆತ

ಹೊಸದಿಲ್ಲಿ,ಜ.27: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ಬರ್ಗ್ ರೀಸರ್ಚ್ (Hindenburg Research) ನ ವರದಿಯ ಹೊಡೆತ ಅದಾನಿ ಗ್ರೂಪ್ (Adani Group) ತತ್ತರಿಸುವಂತೆ ಮಾಡಿದೆ. ಶುಕ್ರವಾರ ಬೆಳಿಗ್ಗೆಯ ವಹಿವಾಟಿನಲ್ಲಿ ಗ್ರೂಪ್ ನ ಒಂಭತ್ತು ಲಿಸ್ಟೆಡ್ ಕಂಪನಿಗಳ ಶೇರುಗಳು ಇನ್ನಷ್ಟು ಕುಸಿದಿದ್ದು, ಗ್ರೂಪ್ ನ  ಮಾರುಕಟ್ಟೆ ಬಂಡವಾಳದಲ್ಲಿ ಎರಡು ಲ.ಕೋ.ರೂ.ಗಳು ಕರಗಿವೆ. ಇದರೊಂದಿಗೆ ಮಂಗಳವಾರದ ಮುಕ್ತಾಯದ ಬಳಿಕ ಮಾರುಕಟ್ಟೆ ಬಂಡವಾಳ 2.5 ಲ.ಕೋ.ರೂ.ಗೂ ಅಧಿಕ ಕರಗಿದೆ. ಗುರುವಾರ ಗಣರಾಜ್ಯ ದಿನದ ಪ್ರಯುಕ್ತ ಶೇರುಮಾರುಕಟ್ಟೆಗಳು ಮುಚ್ಚಿದ್ದವು.

ಶುಕ್ರವಾರ ಅಪರಾಹ್ನದ ವಹಿವಾಟಿನಲ್ಲಿ ಅದಾನಿ ಟೋಟಲ್ ಗ್ಯಾಸ್ (Adani Total Gas Limited)ಶೇ.20, ಅದಾನಿ ಗ್ರೀನ್ ಎನರ್ಜಿ (Adani Green Energy)ಶೇ.20, ಅಂಬುಜಾ ಸಿಮೆಂಟ್ (Ambuja Cement)ಶೇ.18.14, ಎಸಿಸಿ (ACC)ಶೇ.14.57, ಅದಾನಿ ಪವರ್(Adani Power)ಶೇ.5, ಅದಾನಿ ವಿಲ್ಮರ್ (Adani Wilmar) ಶೇ.5  ಮತ್ತು ಅದಾನಿ ಎಂಟರ್ಪ್ರೈಸ್ (Adani Enterprises)ಶೇ.15.55 ರಷ್ಟು ಕುಸಿದಿದ್ದವು.

ಹಿಂಡನ್ಬರ್ಗ್ ರೀಸರ್ಚ್ ನ ದುರುದ್ದೇಶಪೂರಿತ, ಕುಚೇಷ್ಟೆಯ ವರದಿಗಾಗಿ ಅದರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಾಗಿ ಅದಾನಿ ಗ್ರೂಪ್ ಗುರುವಾರ ಹೇಳಿತ್ತಾದರೂ ಶುಕ್ರವಾರ ಬೆಳಿಗ್ಗೆ ಕಂಪನಿಯ ಶೇರುಗಳು ನಷ್ಟದೊಂದಿಗೇ ವಹಿವಾಟನ್ನು ಆರಂಭಿಸಿದ್ದವು.

ಈ ನಡುವೆ ಅದಾನಿ ಗ್ರೂಪ್ ನಿಂದ ಕಾನೂನು ಬೆದರಿಕೆಗೆ ಪ್ರತಿಕ್ರಿಯಿಸಿರುವ ಹಿಂಡನ್ಬರ್ಗ್, ತಾನು ತನ್ನ ವರದಿಗೆ ಬದ್ಧನಾಗಿದ್ದೇನೆ ಮತ್ತು ತನ್ನ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಂಡರೂ ಅದು ವ್ಯರ್ಥ ಎಂದು ಹೇಳಿದೆ.

ತಾನು ತನ್ನ ವರದಿಯನ್ನು ಬಿಡುಗಡೆಗೊಳಿಸಿದ 36 ಗಂಟೆಗಳಲ್ಲಿ ಅದಾನಿ ತಾನು ಎತ್ತಿದ್ದ ಒಂದೇ ಒಂದು ಪ್ರಮುಖ ವಿಷಯಕ್ಕೂ ಉತ್ತರಿಸಿಲ್ಲ. ಬದಲಿಗೆ ನಿರೀಕ್ಷೆಯಂತೆ ಅದಾನಿ ಬಡಾಯಿ ಮತ್ತು ಬೆದರಿಕೆಗಳ ಮಾರ್ಗ ಅನುಸರಿಸುತ್ತಿದ್ದಾರೆ. ಎರಡು ವರ್ಷಗಳ ಕಾಲ ಶ್ರಮಿಸಿ ಸಿದ್ಧಪಡಿಸಲಾದ ತನ್ನ ವರದಿಯನ್ನು ಅವರು ‘ಸಂಶೋಧಿಸಲ್ಪಡದ ವರದಿ ’ಎಂದು ಇಂದು ನೀಡಿರುವ ಮಾಧ್ಯಮ ಹೇಳಿಕೆಯಲ್ಲಿ ಬಣ್ಣಿಸಿದ್ದಾರೆ ಎಂದು ಹಿಂಡನ್ಬರ್ಗ್ ತಿಳಿಸಿದೆ.

ಇದನ್ನು ಓದಿ: ಶೇರು ಬೆಲೆಗಳಲ್ಲಿ ಹಸ್ತಕ್ಷೇಪ ಆರೋಪ: ಹಿಂಡೆನ್ ಬರ್ಗ್ ವಿರುದ್ಧ ಕಾನೂನು ಕ್ರಮಕ್ಕೆ ಅದಾನಿ ಗ್ರೂಪ್ ಚಿಂತನೆ

share
Next Story
X