ಜಾರ್ಖಂಡ್ನಲ್ಲಿ ಅಗ್ನಿ ಅವಘಡ: ವೈದ್ಯ ದಂಪತಿ ಸೇರಿ ಆರು ಮಂದಿ ಮೃತ್ಯು
ರಾಂಚಿ: ಜಾರ್ಖಂಡ್ನ ಧನ್ಬಾದ್ನ ಪುರಾಣ ಬಝಾರ್ನಲ್ಲಿರುವ ಹಝ್ರಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡ ನಂತರ ಇಬ್ಬರು ವೈದ್ಯರು ಸೇರಿದಂತೆ ಕನಿಷ್ಠ ಆರು ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಸ್ಥಳದಿಂದ ಒಂಬತ್ತು ಮಂದಿಯನ್ನು ರಕ್ಷಿಸಲಾಗಿದೆ.
ಮೃತರನ್ನು ಡಾ. ವಿಕಾಸ್ ಹಝ್ರಾ ಹಾಗೂ ಅವರ ಪತ್ನಿ ಡಾ. ಪ್ರೇಮಾ ಹಝ್ರಾ , ಆಸ್ಪತ್ರೆಯ ಇತರ ಉದ್ಯೋಗಿಗಳು ಎಂದು ಗುರುತಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಆಸ್ಪತ್ರೆಯ 2ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ, ಇದು 1 ನೇ ಮಹಡಿಯನ್ನು ಆವರಿಸಿತು. ಅಲ್ಲಿ ಮಲಗಿದ್ದ ಜನರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಬೆಂಕಿಯನ್ನು ನಂದಿಸಲು ಯಾವುದೇ ವ್ಯವಸ್ಥೆಗಳಿಲ್ಲದ ಕಾರಣ, ಕೊಠಡಿಯು ಶೀಘ್ರದಲ್ಲೇ ಹೊಗೆಯಿಂದ ತುಂಬಿ ಹೋಗಿತ್ತು, ಇದರಿಂದಾಗಿ ವೈದ್ಯ ದಂಪತಿಗಳು ಸೇರಿದಂತೆ ಆರು ಜನರು ಉಸಿರುಗಟ್ಟಿ ಸಾವನ್ನಪ್ಪಿದರು.
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, 2 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಆಸ್ಪತ್ರೆಯ ಎರಡೂ ಕಡೆಯಿಂದ ಒಟ್ಟು 9 ಜನರನ್ನು ರಕ್ಷಿಸಿವೆ. ಇವರೆಲ್ಲರನ್ನು ಸಮೀಪದ ಪಾಟಲಿಪುತ್ರ ನರ್ಸಿಂಗ್ ಹೋಂಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹೇಳುವಂತೆ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ ತಡೆಯಲು ವಿಶೇಷ ಭದ್ರತಾ ವ್ಯವಸ್ಥೆ ಇರಲಿಲ್ಲ. ಆಂಟಿಫೈರ್ ಯಂತ್ರ ಕೂಡ ಸಕ್ರಿಯವಾಗಿರಲಿಲ್ಲ,