Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಸ್ಸಾಂನ ಗೋಲ್ಪುರದ ದಿಗ್ಬಂಧನ...

ಅಸ್ಸಾಂನ ಗೋಲ್ಪುರದ ದಿಗ್ಬಂಧನ ಕೇಂದ್ರಕ್ಕೆ ಶುಕ್ರವಾರ 68 ʻಅಕ್ರಮ ವಿದೇಶಿಗರʼ ಸ್ಥಳಾಂತರ

28 Jan 2023 2:43 PM IST
share
ಅಸ್ಸಾಂನ ಗೋಲ್ಪುರದ ದಿಗ್ಬಂಧನ ಕೇಂದ್ರಕ್ಕೆ ಶುಕ್ರವಾರ 68 ʻಅಕ್ರಮ ವಿದೇಶಿಗರʼ ಸ್ಥಳಾಂತರ

ಗುವಹಾಟಿ: ಅಸ್ಸಾಂನ ಗೋಲ್ಪರ ಎಂಬಲ್ಲಿ ನಿರ್ಮಾಣಗೊಂಡಿರುವ ದಿಗ್ಬಂಧನ ಕೇಂದ್ರಕ್ಕೆ (ಅಧಿಕೃತವಾಗಿ ಇದನ್ನು ಟ್ರಾನ್ಸಿಟ್‌ ಕ್ಯಾಂಪ್ ಎನ್ನಲಾಗುತ್ತದೆ) ಶುಕ್ರವಾರ ಕನಿಷ್ಠ 68 ʼವಿದೇಶೀಯರ" ಮೊದಲ ಬ್ಯಾಚ್‌ ಅನ್ನು ಕೊಂಡೊಯ್ಯಲಾಗಿದೆ ಎಂದು ವರದಿಯೊಂದು ಹೇಳಿದೆ. ಗುವಹಾಟಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಮಟಿಯಾ ಟ್ರಾನ್ಸಿಟ್‌ ಕ್ಯಾಂಪ್‌ಗೆ ʼವಿದೇಶಿಗರನ್ನು" ಹಂತಹಂತವಾಗಿ ಸ್ಥಳಾಂತರಿಸುವ ಪ್ರಸ್ತಾವಿತ ಪ್ರಕ್ರಿಯೆ ಇದರಿಂದ ಆರಂಭಗೊಂಡಂತಾಗಿದೆ.

ʻಅಕ್ರಮ ವಿದೇಶಿಗರನ್ನುʼ ಇರಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಾನುಸಾರ ನಿರ್ಮಾಣವಾದ ರಾಜ್ಯದ ಮೊದಲ ಕೇಂದ್ರ ಇದಾಗಿದೆ. ಇಲ್ಲಿಯ ತನಕ ಈ ಮಂದಿಯನ್ನು  ಅಸ್ಸಾಂನ ವಿವಿಧೆಡೆ ಜೈಲುಗಳೊಳಗೆ ಇರುವ ಆರು ದಿಗ್ಬಂಧನ ಕೇಂದ್ರಗಳಲ್ಲಿ ಇರಿಸಲಾಗಿತ್ತು.

ಅಸ್ಸಾಂನ ಫಾರಿನರ್ಸ್‌ ಟ್ರಿಬ್ಯುನಲ್‌ ಅಕ್ರಮ ವಿದೇಶಿಗರು ಎಂದು ಗುರುತಿಸಿದವರು ಹಾಗೂ ವೀಸಾ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕೆ ನ್ಯಾಯಾಲಯಗಳಿಂದ ದೋಷಿ ಎಂದು ಘೋಷಿತರಾದವರನ್ನು ಗೋಲ್ಪುರದ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಈ 68 ಜನರಲ್ಲಿ 45 ಪುರುಷರು, 21 ಮಹಿಳೆಯರು ಹಾಗೂ ಇಬ್ಬರು ಮಕ್ಕಳಿದ್ದಾರೆ, ಅವರನ್ನು ವಿದೇಶೀಯರು ಎಂದು ಗುರುತಿಸಲಾಗಿತ್ತು ಎಂದು ಅಸ್ಸಾಂ ಬಂದೀಖಾನೆ ಇಲಾಖೆಯ ಐಜಿ ಬರ್ನಾಲಿ ಶರ್ಮ ಹೇಳಿದ್ದಾರೆ.

ರಾಜ್ಯದಲ್ಲಿರುವ ಪ್ರಸಕ್ತ ಆರು ದಿಗ್ಬಂಧನಾ ಕೇಂದ್ರಗಳಲ್ಲಿ ಎರಡು ಕೊಕ್ರಾಜರ್‌ ಮತ್ತು ಗೋಲ್ಪುರ ಜಿಲ್ಲಾ ಕಾರಾಗೃಹಗಳಲ್ಲಿದ್ದರೆ ನಾಲ್ಕು ಇತರ ಕೇಂದ್ರಗಳು ತೇಜ್ಪುರ್‌, ದಿಬ್ರೂಘರ್‌ ಮತ್ತು ಜೋರ್ಹಟ್‌ ಕೇಂದ್ರ ಕಾರಾಗೃಹಗಳಲ್ಲಿವೆ. ಈ ಆರು ಕೇಂದ್ರಗಳಲ್ಲಿ ಒಟ್ಟು 195 ಮಂದಿ ಇದ್ದಾರೆಂದು ಸೆಪ್ಟೆಂಬರ್‌ 2022 ರ ಸರಕಾರಿ ಅಂಕಿಅಂಶ ತಿಳಿಸುತ್ತದೆ. ದಿಗ್ಬಂಧನ ಕೇಂದ್ರಕ್ಕೊಂದು ಮಾನವೀಯ ಮಖ ನೀಡಲು ಅವುಗಳ ಹೆಸರನ್ನು ದಿಗ್ಬಂಧನ ಉದ್ದೇಶದ ಟ್ರಾನ್ಸಿಟ್‌ ಕ್ಯಾಂಪ್ ಎಂದು ಅಸ್ಸಾಂ ಸರ್ಕಾರ ಬದಲಾಯಿಸಿತ್ತು.

ಗೋಲ್ಪುರದಲ್ಲಿರುವ ಮಟಿಯಾ ಟ್ರಾನ್ಸಿಟ್‌ ಕ್ಯಾಂಪ್‌  20 ಬಿಗಾ ಜಮೀನಿನಲ್ಲಿ ತಲೆಯೆತ್ತಿದ್ದು ಇದರ ನಿರ್ಮಾಣಕ್ಕೆ ರೂ 46 ಕೋಟಿ ವೆಚ್ಚ ಆಗಿದೆ. ಇದರಲ್ಲಿ 3000 ಮಂದಿಗೆ ಸ್ಥಳಾವಕಾಶವಿದೆ.

share
Next Story
X