Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಾಲದ ಕಂತು ಅವಧಿ ಹೆಚ್ಚಳಕ್ಕೆ ಚೀನಾ...

ಸಾಲದ ಕಂತು ಅವಧಿ ಹೆಚ್ಚಳಕ್ಕೆ ಚೀನಾ ನಕಾರ: ಶ್ರೀಲಂಕಾಕ್ಕೆ ಐಎಂಎಫ್ ಆರ್ಥಿಕ ನೆರವು ವಿಳಂಬ?

28 Jan 2023 11:07 PM IST
share
ಸಾಲದ ಕಂತು ಅವಧಿ ಹೆಚ್ಚಳಕ್ಕೆ ಚೀನಾ ನಕಾರ: ಶ್ರೀಲಂಕಾಕ್ಕೆ ಐಎಂಎಫ್ ಆರ್ಥಿಕ ನೆರವು ವಿಳಂಬ?

ಕೊಲಂಬೋ, ಜ.28: ತೀವ್ರ ಆರ್ಥಿಕ ವಿಪತ್ತಿನಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾ, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯಿಂದ ತುರ್ತು ಸಾಲದ ನೆರವು ಪಡೆಯಲು ಚೀನಾ ವಿಧಿಸಿರುವ ಷರತ್ತು ತೊಡಕಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಶ್ರೀಲಂಕಾದ ಪ್ರಮುಖ ಸಾಲಗಾರ ದೇಶಗಳಾದ(ಸಾಲ ಒದಗಿಸಿರುವ ದೇಶಗಳು) ಭಾರತ, ಜಪಾನ್ ಮತ್ತು ಚೀನಾಗಳು, ತಾವು ನೀಡಿರುವ ಸಾಲದ ಮರುಪಾವತಿ ಅವಧಿಯನ್ನು ಕನಿಷ್ಟ 15 ವರ್ಷ ಎಂದು ಪ್ರಮಾಣೀಕರಿಸಿದರೆ ಮಾತ್ರ ಶ್ರೀಲಂಕಾಕ್ಕೆ ತುರ್ತು ಆರ್ಥಿಕ ನೆರವು ಒದಗಿಸುವುದಾಗಿ ಐಎಂಎಫ್ ಸ್ಪಷ್ಟವಾಗಿ ತಿಳಿಸಿದೆ. ಐಎಂಎಫ್ನ ಸೂಚನೆಗಳಿಗೆ ತಾವು ಬದ್ಧವಾಗಿರುವುದಾಗಿ ಭಾರತ ಮತ್ತು ಜಪಾನ್ ಈಗಾಗಲೇ ಘೋಷಿಸಿವೆ. ಆದರೆ ಚೀನಾ ಮಾತ್ರ ಇದಕ್ಕೆ ವ್ಯತಿರಿಕ್ತ ನಿಲುವು ತಳೆದಿದೆ. ಸಾಲ ಕಂತು ಅವಧಿ ಗರಿಷ್ಟ 2 ವರ್ಷ ಮಾತ್ರ ಎಂದು ಚೀನಾದ ಎಕ್ಸಿಮ್ ಬ್ಯಾಂಕ್(ಎಕ್ಸ್ಪೋರ್ಟ್-ಇಂಪೋರ್ಟ್ ಬ್ಯಾಂಕ್) ಸ್ಪಷ್ಟಪಡಿಸಿದೆ.
 
ಹೀಗಾಗಿ, ಈ ವರ್ಷದ ಮಾರ್ಚ್ ವೇಳೆ ಐಎಂಎಫ್ನಿಂದ 2.9 ಶತಕೋಟಿ ಡಾಲರ್ ಮೊತ್ತದ ಆರ್ಥಿಕ ನೆರವು ಪಡೆಯುವ ಶ್ರೀಲಂಕಾದ ಆಶಯಕ್ಕೆ ಹಿನ್ನಡೆಯಾಗಲಿದೆ. ಇದೀಗ ಶ್ರೀಲಂಕಾವನ್ನು ಆರ್ಥಿಕ ಮತ್ತು ರಾಜಕೀಯ ಅವ್ಯವಸ್ಥೆಯಿಂದ ರಕ್ಷಿಸಲು ಸಾರ್ವಭೌಮ ಬಾಕಿ ವ್ಯವಸ್ಥೆ (ಶ್ರೀಲಂಕಾದ ಸರಕಾರಕ್ಕೆ ಸಾಲ ನೀಡಿರುವ ದೇಶಗಳಿಗೆ ಆರ್ಥಿಕ ನೆರವು) ಐಎಂಎಫ್ಗೆ ಇರುವ ಏಕೈಕ ಆಯ್ಕೆಯಾಗಿದೆ.
  
ಚೀನೀ ಅಭಿವೃದ್ಧಿ ಬ್ಯಾಂಕ್ನ ಸಾಲ ಸೇರಿದಂತೆ ಶ್ರೀಲಂಕಾವು ಚೀನಾಕ್ಕೆ 7 ಶತಕೋಟಿ ಡಾಲರ್ ಸಾಲ ಮರುಪಾವತಿಸಬೇಕಾಗಿದೆ. ಚೀನಾದ ಖಾಸಗಿ ಹಣಕಾಸು ಸಂಸ್ಥೆಗಳು, ಬ್ಯಾಂಕ್ಗಳಿಂದ ಪಡೆದ ಸಾಲ ಇದರಲ್ಲಿ ಸೇರಿಲ್ಲ. ಸಮರ್ಥನೀಯವಲ್ಲದ ಅಧಿಕ ಬಡ್ಡಿದರ, ಹಣಕಾಸಿನ ದುರುಪಯೋಗ, ದುರ್ಬಳಕೆಯಿಂದಾಗಿ ಸರಿಯಾಗಿ ಸಾಲ ಮರುಪಾವತಿಯಾಗದೆ ಆರ್ಥಿಕ ಹೊರೆ ಹೆಚ್ಚಿದೆ. ಜತೆಗೆ, ಗೊತಬಯ ರಾಜಪಕ್ಸ ಅವರ ಆಡಳಿತಾವಧಿಯಲ್ಲಿ ದುಂದುವೆಚ್ಚ ಹೆಚ್ಚಿತ್ತು. ಹಂಬನ್ಯೋಟ ಬಂದರು ಯೋಜನೆ, ಮತ್ತಲ ರಾಜಪಕ್ಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನೊರೊಚೊಲೈ ವಿದ್ಯುತ್ ಸ್ಥಾವರ ಮುಂತಾದ ಬಿಳಿಯಾನೆ ಯೋಜನೆಗಳು ಸಾಲ ಪಡೆದ ಹಣವನ್ನು ನುಂಗಿಹಾಕಿದ್ದವು. ಕಳೆದ ದಶಕದಲ್ಲಿ ಚೀನಾದ ಬೆಲ್ಟ್ ರೋಡ್ ಉಪಕ್ರಮ(ಬಿಆರ್ಐ)ದ ಭಾಗವಾಗಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನಗಳೆರಡೂ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಆದರೆ ಬಿಆರ್ಐ ಯೋಜನೆಯಲ್ಲಿ ಈ ಎರಡು ದೇಶಗಳನ್ನು ತೊಡಗಿಸಿಕೊಳ್ಳುವಾಗ ತೋರಿದ್ದ ಆಸಕ್ತಿಯನ್ನು ಈ ಎರಡೂ ದೇಶಗಳ ಅರ್ಥವ್ಯವಸ್ಥೆಯ ಪುನಶ್ಚೇತಕ್ಕೆ ನೆರವಾಗುವಲ್ಲಿ ಚೀನಾ ಪ್ರದರ್ಶಿಸುವ ಅಗತ್ಯವಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

share
Next Story
X