Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸವದತ್ತಿಯ ರಂಗ ನಾಯಕ ಝಕೀರ್ ನದಾಫ್

ಸವದತ್ತಿಯ ರಂಗ ನಾಯಕ ಝಕೀರ್ ನದಾಫ್

ರಂಗ ಪ್ರಸಂಗ

ಗಣೇಶ್ ಅಮೀನಗಡಗಣೇಶ್ ಅಮೀನಗಡ3 Feb 2023 11:00 AM IST
share
ಸವದತ್ತಿಯ ರಂಗ ನಾಯಕ ಝಕೀರ್ ನದಾಫ್
ರಂಗ ಪ್ರಸಂಗ

‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ಗೆ ಬೆನ್ನೆಲುಬಾದ 54 ವರ್ಷ ವಯಸ್ಸಿನ ಝಕೀರ್ ನದಾಫ್ ರಂಗ ಸಂಸ್ಕಾರದ ಮೂಲಕ ಸವದತ್ತಿಯಲ್ಲಿ ಬದಲಾವಣೆ ತಂದಿದ್ದಾರೆ. ಅವರಿಗೆ ವಂದನೆ, ಅಭಿವಂದನೆ.

ಅವರು ಓದಿದ್ದು ಧಾರವಾಡದ ಎನ್‌ಟಿಟಿಎಫ್‌ನಲ್ಲಿ ಟೂಲ್ ಡಿಸೈನ್ ಡ್ರಾಯಿಂಗ್ ಡಿಪ್ಲೊಮಾ ಕೋರ್ಸ್. ಆದರೆ ವೃತ್ತಿ ಕೋಳಿ ಸಾಕಣೆ. ಅಪ್ಪಿಕೊಂಡಿದ್ದು ರಂಗಭೂಮಿಯನ್ನು. ಹಾಗೆ ರಂಗದ ನಂಟು ಬೆಳೆದುದು ಅನೇಕ ವರ್ಷಗಳಿಂದ. ಇದರ ಪರಿಣಾಮ; ಪರಸಗಡ ನಾಟಕೋತ್ಸವವನ್ನು ಪ್ರತೀ ವರ್ಷ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಆಯೋಜಿಸುತ್ತಾರೆ. ಅದು ‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ ಮೂಲಕ. ಅವರು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಝಕೀರ್ ನದಾಫ್. ಕಳೆದ ವಾರ ಸವದತ್ತಿಯ ಕೋಟೆ ಆವರಣದಲ್ಲಿ ಪರಸಗಡ ನಾಟಕೋತ್ಸವ ಹಮ್ಮಿಕೊಂಡಿದ್ದರು. ನಾಟಕಕ್ಕೆ ಮುಂಚೆ ವೇದಿಕೆ ಕಾರ್ಯಕ್ರಮ ಇರಲಿಲ್ಲ. ನಾಟಕ ಮುಗಿದ ನಂತರವೂ ಇಂತಹ ಕಾರ್ಯಕ್ರಮವಿಲ್ಲ. ನೇರ ನಾಟಕ ಆರಂಭವಾಗುತ್ತಿತ್ತು. ತಡವಾಯಿತೆಂದು ಏದುಸಿರು ಬಿಡುತ್ತ ಪ್ರೇಕ್ಷಕರು ಧಾವಿಸಿ ಬರುತ್ತಿದ್ದರು. ಹೀಗೆ 26 ವರ್ಷಗಳಿಂದ ‘ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ’ಯು ಸವದತ್ತಿಯಲ್ಲಿ ಗಟ್ಟಿಯಾಗಿ ಬೇರು ಬಿಟ್ಟ ಪರಿಣಾಮ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಝಕೀರ್ ಅವರ ತಂಡಕ್ಕೆ ಹೊಸಬರು ಸೇರಿಕೊಳ್ಳುತ್ತಿದ್ದಾರೆ. ಅವರ ಹಾಗೆ ಬೇರೆ ಬೇರೆ ವೃತ್ತಿಯಲ್ಲಿರುವವರು ಅವರ ತಂಡದಲ್ಲಿದ್ದಾರೆ. ಈ ಸಂಘಟನೆಯ ಅಧ್ಯಕ್ಷರಾದ ಶ್ರೀನಿವಾಸ ಗದಗ ಅವರು ಪುರೋಹಿತರು. ಕಾರ್ಯದರ್ಶಿ ಶಿವಾನಂದ ತಾರಿಹಾಳ ಅವರು ಶಿಕ್ಷಕರು. ಸಂಘಟನೆಯ ನಿರ್ದೇಶಕ ಮಯೂರ ಶಿಂಧೆ ಅವರು ಬ್ಯಾಂಕ್ ಉದ್ಯೋಗಿ. ಇನ್ನೊಬ್ಬ ನಿರ್ದೇಶಕ ಗೋಪಾಲ ಫಾಸಲಕರ ಅವರು ಖಾಸಗಿ ಬ್ಯಾಂಕ್ ನೌಕರ. ನಿತ್ಯ ಬೆಳಗ್ಗೆ ತಮ್ಮ ತಮ್ಮ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಅವರು ಸಂಜೆ ಸೇರಿ ರಂಗ ಚಟುವಟಕೆಗಳನ್ನು ನಡೆಸುತ್ತಾರೆ. ಕಳೆದ ವರ್ಷ ಸಂಘಟನೆಯ ಬೆಳ್ಳಿಹಬ್ಬದ ಅಂಗವಾಗಿ ರಾಜ್ಯದ ವಿವಿಧ ತಂಡಗಳ 25 ನಾಟಕಗಳ ಉತ್ಸವವನ್ನು ಸವದತ್ತಿಯ ಕೋಟೆಯ ಆವರಣದಲ್ಲಿ ಸಂಘಟಿಸಿದ್ದರು. ಪರಸಗಡ ಎನ್ನುವುದು ಸವದತ್ತಿಯ ಮೂಲ ಹೆಸರು. ಸೌಗಂಧಿಪುರ- ಸೌಗಂಧವರ್ತಿಯಾಗಿ ನಂತರ ಸವದತ್ತಿಯಾಯಿತು ಎನ್ನಲಾಗುತ್ತಿದೆ. ಇದಕ್ಕಾಗಿ ಪರಸಗಡ ನಾಟಕೋತ್ಸವ ಎಂದು ಹೆಸರಿಡಲು ಕಾರಣ; ಕುತೂಹಲಕ್ಕಾದರೂ ಸವದತ್ತಿಯ ಮೊದಲಿನ ಹೆಸರು ಕೇಳಲಿ ಎನ್ನುವ ಆಶಯ ಅವರದು.

ಇಂತಹ ರಂಗ ಸಂಘಟನೆ ಶುರುವಾಗಿದ್ದು 1987ರಲ್ಲಿ. ಜಾರ್ಮ್ಸ್ ಕಲಾ ತಂಡ ಎಂದು ವೃತ್ತಿ ನಾಟಕಗಳನ್ನು ಝಕೀರ್ ಆಡುತ್ತಿದ್ದರು. ನಂತರ 1997ರಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯ ಮೂಲಕ ಹವ್ಯಾಸಿ ನಾಟಕಗಳತ್ತ ವಾಲಿದರು. 1997ರಲ್ಲಿ ರಂಗಕರ್ಮಿ ವಿನೋದ ಅಂಬೇಕರ ಅವರು ಈ ಸಂಘಟನೆಗೆ ರಂಗ ತರಬೇತಿ ಶಿಬಿರ ನಡೆಸಿ, ‘ಮೃಚ್ಛಕಟಿಕ’ ನಾಟಕ ನಿರ್ದೇಶಿಸಿದರು. ಮರುವರ್ಷ ಮತ್ತೊಂದು ರಂಗ ತರಬೇತಿ ಶಿಬಿರವನ್ನು ವಿನೋದ ಅಂಬೇಕರ ಅವರೇ ಸಾರಥ್ಯ ವಹಿಸಿಕೊಂಡು, ಬಿ.ವಿ. ವೈಕುಂಠರಾಜು ಅವರ ‘ಉದ್ಭವ’ ನಾಟಕ ನಿರ್ದೇಶಿಸಿದರು. 1999ರಲ್ಲಿ ರಂಗಕರ್ಮಿ ಜಯತೀರ್ಥ ಜೋಶಿ ಅವರು ಎಂ.ಎಸ್.ಕೆ. ಪ್ರಭು ರಚಿತ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’ ನಾಟಕವನ್ನು ನಿರ್ದೇಶಿಸಿ ಸವದತ್ತಿಯ ಕೋಟೆ ಆವರಣದಲ್ಲಿ ಪ್ರದರ್ಶಿಸಿದರು. ಅಲ್ಲಿಂದ ಶುರುವಾದ ನಾಟಕಗಳ ಪ್ರದರ್ಶನ ಈಗಲೂ ಮುಂದುವರಿದಿದೆ. ತಮ್ಮ ತಂಡಕ್ಕೆ ಬೇರೆ ಬೇರೆ ನಿರ್ದೇಶಕರನ್ನು ನಾಟಕ ನಿರ್ದೇಶಿಸಲು ಆಹ್ವಾನಿಸುತ್ತಾರೆ. ಇದರಿಂದ 30ಕ್ಕೂ ಅಧಿಕ ನಾಟಕಗಳನ್ನು ಆಡಿದ್ದಾರೆ ಜೊತೆಗೆ ರಾಜ್ಯದಾದ್ಯಂತ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ಬೇರೆ ಬೇರೆ ತಂಡಗಳನ್ನೂ ಆಹ್ವಾನಿಸುತ್ತಾರೆ. ನೀನಾಸಂ, ಸಾಣೇಹಳ್ಳಿ, ಜಮುರಾ ಅಲ್ಲದೆ ಮೈಸೂರು, ಧಾರವಾಡ ಹಾಗೂ ಕಲಬುರಗಿ ರಂಗಾಯಣಗಳ ನಾಟಕಗಳನ್ನು ಆಯೋಜಿಸಿದ್ದಾರೆ. ಹೀಗೆ ನಾಟಕಗಳನ್ನು ಆಡುತ್ತ, ಆಡಿಸುತ್ತ ಅವರು ರಂಗಾಸಕ್ತರನ್ನು ಹೆಚ್ಚಿಸುವುದರ ಜೊತೆಗೆ ತಂಡದವರೂ ಬದಲಾಗಿದ್ದಾರೆ. ಗೋಪಾಲ ಫಾಸಲಕರ ಅವರು ಬದುಕಿನಲ್ಲಿ ಹೇಗೆ ಇರಬೇಕು ಅಂತ ಅರಿತರು. ಶಿಂಧೆ ಅವರು ಈ ತಂಡಕ್ಕೆ ಸೇರುವ ಮೊದಲು ಊಟದ ತಾಟಿನಲ್ಲಿ ಊಟ ಬಿಡುತ್ತಿದ್ದರು. ಈಗ ಬಿಡುವುದಿಲ್ಲ. ಸಿಟ್ಟು, ಸೆಡವು ಕಡಿಮೆಯಾಗಿದೆ. ಸುಮ್ಮನಿರುವುದನ್ನು ಕಲಿತಿದ್ದಾರೆ. ಜೊತೆಗೆ ತಮ್ಮ ತಂದೆ ರುದ್ರಪ್ಪರಾಜಪ್ಪಶಿಂಧೆ ಹೆಸರಲ್ಲಿ ರಂಗ ಆರಾಧಕ ಪ್ರಶಸ್ತಿಯ ಪ್ರಾಯೋಜಕರಾಗಿದ್ದಾರೆ. ಹೀಗೆಯೇ ತಳ್ಳುಗಾಡಿಯಲ್ಲಿ ಹೊಟೇಲ್ ನಡೆಸುವ ಗಣೇಶ ಬಜೇರಿ ಗುಟ್ಕಾ ತಿನ್ನುವುದನ್ನು ಬಿಟ್ಟಿದ್ದಾರೆ. ಕಾಳಿನ ವ್ಯಾಪಾರಿ ಮಂಜು ಬೆಳವಡಿ ‘ನಾ ಕಂಡ ಕನಸು’ ಎಂಬ ಟೆಲಿಫಿಲ್ಮ್‌ನಲ್ಲಿ ನಟಿಸಿದ್ದಾರೆ. ಹೀಗೆ ವಿವಿಧ ವೃತ್ತಿಗಳಲ್ಲಿರುವ 30 ಸದಸ್ಯರಿದ್ದಾರೆ. ಮದುವೆಗೆ ಮೊದಲು ಈ ತಂಡದಲ್ಲಿದ್ದ ಅನಿತಾ ದಿನ್ನಿಮಣಿ ಅವರು ಮದುವೆ ನಂತರ ದುಬೈನಲ್ಲಿದ್ದಾರೆ. ಒಬ್ಬರೇ ದುಬೈಗೆ ಹೋಗಲು ಅವರಿಗೆ ಧೈರ್ಯ ಬಂದಿದ್ದು ತಂಡದಲ್ಲಿ ನಾಟಕವಾಡಿದ್ದಕ್ಕೆ. ಹೀಗೆಯೇ ರೇಣುಕಾ ಹುಡದೇಮನಿ ಅವರು ಮದುವೆ ನಂತರ ಅಮೆರಿಕದಲ್ಲಿದ್ದಾರೆ. ಈ ತಂಡ ಶುರುವಾದಾಗ ಶ್ರೀನಿವಾಸ ಗದಗ ಅವರು ನಿರುದ್ಯೋಗಿಯಾಗಿದ್ದರು. ನಂತರ ಪುರೋಹಿತರಾದರು. ಕಳೆದ ವರ್ಷ ತಂಡದ ಬೆಳ್ಳಿಹಬ್ಬಕ್ಕೆ 25 ಸಾವಿರ ರೂಪಾಯಿ ನೆರವಾಗಿದ್ದಾರೆ. ಇವರ ಹಾಗೆ ನಾಟಕೋತ್ಸವಕ್ಕೆ ನೆರವಾಗುತ್ತಾರೆ ಸವದತ್ತಿಯವರು. ಅಂದರೆ ಸರಕಾರದ ಅನುದಾನ ನೆಚ್ಚಿ ನಾಟಕ ಆಡದ ಅವರು, ನಾಟಕೋತ್ಸವಕ್ಕಾಗಿ ಊರಲ್ಲಿ ದೇಣಿಗೆ ಸಂಗ್ರಹಿಸುತ್ತಾರೆ. ನಂತರ ಖರ್ಚುವೆಚ್ಚದ ಲೆಕ್ಕಾಚಾರವನ್ನು ಪತ್ರ ಮುಖೇನ ದೇಣಿಗೆದಾರರ ಮನೆಗಳಿಗೆ ಕಳುಹಿಸುತ್ತಾರೆ. ಈಮೂಲಕ ಪಾರದರ್ಶಕತೆ ಮೆರೆಯುತ್ತಾರೆ. ಇದರಿಂದ ದೇಣಿಗೆದಾರರೇ ಫೋನ್ ಮಾಡಿ ‘ಯಾಕ್ರಿ ಇನ್ನೂ ರೊಕ್ಕಾ ಇಸಗೊಳ್ಳಾಕ ಬಂದಿಲ್ಲ’ ಎಂದು ತಂಡದವರನ್ನೇ ಕೇಳುತ್ತಾರೆ. ಅಷ್ಟರಮಟ್ಟಿಗೆ ದೇಣಿಗೆದಾರರು ಈ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇಂಥದೊಂದು ರಂಗತಂಡಕ್ಕೆ ಬೆನ್ನೆಲುಬಾದ 54 ವರ್ಷ ವಯಸ್ಸಿನ ಝಕೀರ್ ನದಾಫ್ ರಂಗ ಸಂಸ್ಕಾರದ ಮೂಲಕ ಸವದತ್ತಿಯಲ್ಲಿ ಬದಲಾವಣೆ ತಂದಿದ್ದಾರೆ. ಅವರಿಗೆ ವಂದನೆ, ಅಭಿವಂದನೆ.

share
ಗಣೇಶ್ ಅಮೀನಗಡ
ಗಣೇಶ್ ಅಮೀನಗಡ
Next Story
X