Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೀಪದ ಕೆಳಗಿನ ಕತ್ತಲೆ ಓಡಿಸಲಿ ದ.ಕ....

ದೀಪದ ಕೆಳಗಿನ ಕತ್ತಲೆ ಓಡಿಸಲಿ ದ.ಕ. ಕಸಾಪ ರಜತ ಸಮ್ಮೇಳನ

ಕಲ್ಲಚ್ಚು ಮಹೇಶ ಆರ್. ನಾಯಕ್ಕಲ್ಲಚ್ಚು ಮಹೇಶ ಆರ್. ನಾಯಕ್3 Feb 2023 11:42 AM IST
share
ದೀಪದ ಕೆಳಗಿನ ಕತ್ತಲೆ ಓಡಿಸಲಿ  ದ.ಕ. ಕಸಾಪ ರಜತ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ ಶತಮಾನ ಕಂಡಿರುವ ಕನ್ನಡಿಗರ ಒಂದು ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಯ ಹೊರತಾಗಿಯೂ ಅದು ಅನೇಕ ಅಧ್ವಾನಗಳ ಗೂಡು ಸಹ ಹೌದು. ಇತ್ತೀಚಿನ ವರ್ಷಗಳಲ್ಲಂತೂ ಅದು ಬಹಳ ಸಲ ರಾಜಕೀಯ ಮತ್ತು ಧಾರ್ಮಿಕ ಮುಖವಾಡ ಹೊತ್ತು ಅಲ್ಲಿಯ ರಾಜ್ಯ ಅಧ್ಯಕ್ಷರುಗಳ ಸ್ವಾರ್ಥಪರ ಚಿಂತನೆಗಳಿಂದ ಕನ್ನಡಿಗರ ಕೆಂಗಣ್ಣಿಗೆ ನೇರ ಗುರಿಯಾಗಿ ನಗೆಪಾಟಲಾದದ್ದು ಇದೆ. ಈ ಬಾರಿಯ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೆಲವು ಆಗುಹೋಗುಗಳು ಬಹುಶಃ ಇದಕ್ಕೆ ತಾಜಾ ಉದಾಹರಣೆ. ಇವುಗಳ ಹೊರತಾಗಿಯೂ ಕಸಾಪದ ಕೆಲವು ಜಿಲ್ಲಾ ಮತ್ತು ತಾಲೂಕು ಘಟಕಗಳು ತಮ್ಮ ಇತಿಮಿತಿಯ ಒಳಗೆ ಕಾರ್ಯಾಚರಿಸುತ್ತಿದ್ದು, ಅದರಲ್ಲೂ ತಮ್ಮ ನಿಬಂಧನೆಗಳಿಗೆ ಅನುಸಾರ ಸಮ್ಮೇಳನ ಇತ್ಯಾದಿಗಳನ್ನು ಹಮ್ಮಿಕೊಂಡು ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಪ್ರಯತ್ನದಲ್ಲಿದೆ.

ಈ ಹಿನ್ನೆಲೆಯಲ್ಲಿ ದ.ಕ. ಕಸಾಪ ತನ್ನ ಅಸ್ತಿತ್ವದ ಆರಂಭದಿಂದಲೂ ಒಂದು ಸಕ್ರಿಯ ಘಟಕ. ಒಂದಲ್ಲ ಒಂದು ಚಟುವಟಿಕೆಗಳನ್ನು ಆಯೋಜಿಸಿ ಕರಾವಳಿ ಕರ್ನಾಟಕದಲ್ಲಿ ಸರಿಸುಮಾರು ನಾಲ್ಕು ದಶಕಗಳಿಂದ ಜನಮನದಲ್ಲಿ ಬೇರೂರಿದ ಸಂಸ್ಥೆ. ಆದರೆ ಈ ಸುದೀರ್ಘ ಅವಧಿಯಲ್ಲಿ ಅದು ಕಂಡ ಅಧ್ಯಕ್ಷರ ಸಂಖ್ಯೆ ಮೂರ್ನಾಲ್ಕು ಮಾತ್ರ. ನಿಬಂಧನೆಗಳಲ್ಲಿರುವ ನ್ಯೂನತೆ ಮತ್ತು ಇಲ್ಲಿಯ ಕಡಿಮೆ ಕಸಾಪ ಸದಸ್ಯರ ಸಂಖ್ಯೆ ಹಾಗೂ ಅದರೊಳಗೂ ನಿರ್ಮಾಣವಾಗಿದ್ದ ಜಾತಿ, ಧರ್ಮ ಆಧಾರಿತ ಲೆಕ್ಕಾಚಾರ ಸುದೀರ್ಘ ಕಾಲ ಹೊಸಮುಖ ಮತ್ತು ಹೊಸ ಆಲೋಚನೆಗೆ ಆನಿರ್ವಾಯವಾಗಿ ಅವಕಾಶ ನಿರಾಕರಿಸುತ್ತಲೇ ಬಂದಿತ್ತು. ಆದರೆ ಅದೃಷ್ಟವಶಾತ್ ಕಳೆದ ಬಾರಿಯ ಕಸಾಪ ಚುನಾವಣೆ ಇವುಗಳನ್ನೆಲ್ಲ ಮೆಟ್ಟಿ ನಿಂತು ಸುಮಾರು ಎರಡು ದಶಕಗಳ ನಂತರ ಹೊಸ ಅಧ್ಯಕ್ಷರೊಬ್ಬರನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಇದೀಗ ಅವರ ಸಾರಥ್ಯದಲ್ಲಿ 25ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಜತ ಸಂಭ್ರಮದೊಂದಿಗೆ ಜಿಲ್ಲೆಗೆ ಅತೀ ಅಗತ್ಯವಿರುವ ಸಾಹಿತ್ಯ ಸಾಮರಸ್ಯ ಸಮೃದ್ಧಿ ಎಂಬ ಆಶಯದೊಂದಿಗೆ ಹೇಮಾವತಿ ವಿ. ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಫೆ. 3ರಿಂದ 5ರ ತನಕ ಆಯೋಜಿಸುತ್ತಿದೆ. ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನೇತ್ರಾವತಿಯ ಹರಿವಿಗೂ ಹೊಸ ಚಿಂತನೆ ನೀಡುವ ಶಕ್ತಿ ಇರುವ ಉಜಿರೆಯಲ್ಲಿ. ಇತ್ತೀಚಿನ ದಶಕಗಳಲ್ಲಿ ಕಸಾಪಕ್ಕೆ ತನ್ನ ಚಟುವಟಿಕೆಗಳಿಗೆ ಆರ್ಥಿಕ ತೊಂದರೆ ಏನಿಲ್ಲ, ಅದರಲ್ಲೂ ಸಮ್ಮೇಳನಗಳಿಗೆ ಸಾಕಷ್ಟು ನಿರ್ದಿಷ್ಟ ದೊಡ್ಡ ಮೊತ್ತ ಹಾಗೂ ಸ್ಥಳೀಯ ಸಹಕಾರ ಹೇರಳವಾಗಿ ದೊರೆಯುತ್ತಿದೆ. ಇಂತಹ ಆಶಾದಾಯಕ ವಿದ್ಯಮಾನದ ನಡುವೆ ಸಮಾಜದ ಎಲ್ಲರನ್ನೂ ಒಳಗೊಂಡ ಸಾಹಿತ್ಯ ಸಮ್ಮೇಳನ ಜಿಲ್ಲೆಯ ಕನ್ನಡಿಗರ ಬಹುಕಾಲದ ಕನಸು. ಇಂತಹ ಕನಸು 25ನೇ ದ.ಕ. ಕಸಾಪ ಸಮ್ಮೇಳನದ ಆಗುಹೋಗುಗಳಲ್ಲಿ ಬಹುತೇಕ ನನಸಾಗುವಂತೆ ಭಾಸವಾಗುತ್ತಿದೆ. ಯಾವುದೇ ಧಾರ್ಮಿಕ ಮುಖಂಡರ ಅನಗತ್ಯ ಉಪಸ್ಥಿತಿ ಇಲ್ಲದ ಸಾಹಿತ್ಯ ಸಮ್ಮೇಳನ ದ.ಕ. ಜಿಲ್ಲೆಯಲ್ಲಿ ಸಹ ಸಾಧ್ಯವಿದೆ. ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯ ಸನ್ಮಾನವನ್ನೂ ನಾವು ನಿಲ್ಲಿಸಬಲ್ಲೆವು. ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿಗಳಲ್ಲಿ ಎಲ್ಲ ಮತ ಧರ್ಮ, ಜಾತಿಯವರಿಗೂ ಸಮಾನ ಅವಕಾಶ ಬೇಕು, ಎಂಬ ಜಿಲ್ಲೆಯ ಬಹುಜನರ ಕೂಗನ್ನು ಸಾಕಾರಗೊಳಿಸುವ ಒಂದು ಪ್ರಾಮಾಣಿಕ ಪ್ರಯತ್ನ ಇಲ್ಲಿ ನಡೆದಿದೆ.

ಇಷ್ಟಕ್ಕೆ ಇದು ಸೀಮಿತ ವಾಗದೆ ಮುಂದಿನ ತನ್ನೆಲ್ಲ ಚಟುವಟಿಕೆಗಳಲ್ಲೂ ನಿಬಂಧನೆ ಗಳನುಸಾರ ಇದೇ ಹೆಜ್ಜೆ ದ.ಕ. ಕಸಾಪದ ಮೂಲಮಂತ್ರವಾಗಲಿ. ಕಸಾಪದ ಹುದ್ದೆ ನಿಜಾರ್ಥದ ಕನ್ನಡ ಸೇವೆಗೆ ಎಂಬ ಸ್ಪಷ್ಟ ಅರಿವಿನೊಂದಿಗೆ ಎಲ್ಲ ತಾಲೂಕು ಘಟಕಗಳು ಸಹ ಈ ಬಗ್ಗೆ ಚಿಂತಿಸಲಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದೆಷ್ಟರ ಮಟ್ಟಿಗಿನ ಅಚ್ಚುಕಟ್ಟುತನದಲ್ಲಿ ಖಾಸಗಿ ನೆಲೆಯ ಕನ್ನಡ ಸಮ್ಮೇಳನ ನಡೆದರೂ ಕಸಾಪ ಸಮ್ಮೇಳನ ಜನಸಾಮಾನ್ಯರ, ಕಟ್ಟ ಕಡೆಯ ವ್ಯಕ್ತಿಗೂ ಹೆಮ್ಮೆ ತರುವ ಸಮ್ಮೇಳನವಾಗಲಿ.

share
ಕಲ್ಲಚ್ಚು ಮಹೇಶ ಆರ್. ನಾಯಕ್
ಕಲ್ಲಚ್ಚು ಮಹೇಶ ಆರ್. ನಾಯಕ್
Next Story
X