Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ರಂಗದೊಳಗಿಂದ
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ. ರೈಪಿ.ಎ. ರೈ5 Feb 2023 6:35 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಓ ಮೆಣಸೇ...

ಜೆಡಿಎಸ್‌ನವರ ‘ಪಂಚರತ್ನ ಯಾತ್ರೆ’ಯ ಬಸ್ಸಿನ ಬ್ರೇಕ್ ಫೇಲ್ ಆಗಿ ಹಾಸನದಲ್ಲೇ ನಿಂತಿದೆ -ನಳಿನ್ ಕುಮಾರ್ ಕಟೀಲು

ನಿಮ್ಮ ರೈಲಿನ ಅಪಾಯ ಏನೆಂದರೆ ಅದು ಬ್ರೇಕ್ ಫೇಲ್ ಆದ ಬಳಿಕವೂ ಕುರುಡಾಗಿ ಓಡುತ್ತಲೇ ಇದೆ.

---------------------
 ನನಗೆ 80 ವರ್ಷ ಪ್ರಾಯವಾಗಿರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ -ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
 ನಾನಿನ್ನು ಮನೆಯಲ್ಲಿ ಕೂರುತ್ತೇನೆ ಎಂದು ಘೋಷಿಸುವುದಕ್ಕೆ ಇನ್ನೆಷ್ಟು ದಶಕಗಳು ಉರುಳಬೇಕು?

---------------------
ಅಮಿತ್ ಶಾ ಹಾಗೂ ಪ್ರಧಾನಿ ಮೋದಿಯನ್ನು ಟೀಕಿಸಿದರೆ ನಾವು ದೊಡ್ಡವರಾಗುತ್ತೇವೆ ಎನ್ನುವ ಭ್ರಮೆ ಕಾಂಗ್ರೆಸ್‌ನವರಲ್ಲಿದೆ -ಕೆ.ಎಸ್.ಈಶ್ವರಪ್ಪ, ಶಾಸಕ
 ನಿಮ್ಮ ಗತಿ ನೋಡಿದ ಯಾರಿಗೂ ಅಂತಹ ಭ್ರಮೆ ಇಲ್ಲ.
---------------------
 ಕೇಂದ್ರ ಸಚಿವ ಅಮಿತ್ ಶಾ ವ್ಯಕ್ತಿತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಛಾಯೆ ಇದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
  ಆರೆಸ್ಸೆಸ್ ಮೇಲೆ ನಿಷೇಧ ಹೇರಿದ್ದರೆಂಬ ಕಾರಣಕ್ಕಾಗಿ ಹೀಗೆಲ್ಲ ಹೇಳಿ ಅವರ ಆತ್ಮಕ್ಕೆ ಕಿರುಕುಳ ನೀಡುವುದು ಸರಿಯಲ್ಲ.

---------------------
 ಹಲವು ವರ್ಷಗಳಿಂದ ಕಾಶ್ಮೀರವು ರಕ್ತದಿಂದ ರಂಜಿತವಾಗಿತ್ತು. ಈಗ ಅದು ಕುಂಕುಮದಂತೆ ಶೋಭಿಸುತ್ತಿದೆ -ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
 ವೀಡಿಯೊ ಗೇಮ್ ನೋಡಿದಿರಾ ಸ್ವಾಮೀಜಿ?

---------------------
 ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಇರುವುದರಿಂದ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ -ಎಸ್.ಎಲ್.ಭೈರಪ್ಪ, ಸಾಹಿತಿ
 ಹೌದು. ಅನ್ಯಥಾ ಚಿಲ್ಲರೆ ದಕ್ಷಿಣೆ ಮಾತ್ರ ಸಿಗುತ್ತಿತ್ತು.

---------------------
 ನನ್ನನ್ನು ರಾಷ್ಟ್ರಪತಿ ಮಾಡುತ್ತೇನೆ ಎಂದರೂ ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ -ಸಿದ್ದರಾಮಯ್ಯ, ಮಾಜಿ ಸಿಎಂ
 ಭಾರತದಲ್ಲಿ ರಾಷ್ಟ್ರಪತಿ ಆಗುವುದಕ್ಕಿಂತ ಮುನ್ಸಿಪಾಲಿಟಿ ಸದಸ್ಯನಾಗುವುದು ಲೇಸು. ಒಂದಿಷ್ಟಾದರೂ ಸ್ವಾತಂತ್ರವಿರುತ್ತದೆ.

---------------------
 ಮಹಾಭಾರತದಲ್ಲಿದ್ದಂತೆ ಈಗಿನ ರಾಜಕೀಯದಲ್ಲೂ ನೂರಾರು ಶಕುನಿಗಳಿದ್ದಾರೆ -ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
 ಶಕುನಿಗಳ ಕುರಿತು ಶಕುನಿಗಳೇ ಹೇಳಿದರೆ ಚೆನ್ನಾಗಿರುತ್ತದೆ.

---------------------
 ಭಗವಾನ್ ಕೃಷ್ಣ ಹಾಗೂ ಹನುಮಂತ ವಿಶ್ವದ ಶ್ರೇಷ್ಠ ರಾಜತಾಂತ್ರಿಕರು -ಎಸ್.ಜೈಶಂಕರ್, ಕೇಂದ್ರ ಸಚಿವ
 ಮೆಲ್ಲಗೆ ಹೇಳಿ ಸಾರ್. ಎಲ್ಲಾದರೂ ಮೋದಿಯವರು ಕೇಳಿ ಬಿಟ್ಟರೆ ನಿಮ್ಮ ಚರ್ಮ ಸುಲಿಯುತ್ತಾರೆ. ಅವರ ಮುಂದೆ ಕೃಷ್ಣ, ಹನುಮಂತ ಇವರೆಲ್ಲಾ ಯಾವ ಲೆಕ್ಕ?

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ... ಎಂದು ರಾಯರಲ್ಲಿ ಬೇಡಿಕೊಂಡಿದ್ದೇನೆ -ಅನಿತಾ ಕುಮಾರಸ್ವಾಮಿ, ಶಾಸಕಿ
ಯಾರನ್ನು?

---------------------

ಹೊಂದಾಣಿಕೆ ರಾಜಕಾರಣವನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ-ಸಿ.ಟಿ.ರವಿ, ಶಾಸಕ
ಸದ್ಯ ಹೊಂದಾಣಿಕೆಗೆ ಕುಮಾರಸ್ವಾಮಿ ಬಿಟ್ಟರೆ ಬೇರೆ ಯಾರಾದರೂ ತಯಾರಿದ್ದಾರೆಯೇ?

---------------------
 ಅಭಿವ್ಯಕ್ತಿ ಸ್ವಾತಂತ್ರದ ಹೆಸರು ಹೇಳಿಕೊಂಡು ದೇಶದ ಜನರಲ್ಲಿ ಒಡಕು ಮೂಡಿಸುವ ವಿಚ್ಛಿದ್ರಕಾರಿ ಶಕ್ತಿಗಳ ಬಗ್ಗೆ ಜನತೆ ಎಚ್ಚರದಿಂದಿರಬೇಕು
-ನರೇಂದ್ರ ಮೋದಿ, ಪ್ರಧಾನಿ
ಅಭಿವೃದ್ಧಿಯ ಹೆಸರಲ್ಲಿ ದೇಶವನ್ನು ಅದಾನಿಗಳಿಗೆ ಮಾರಿ ಬಿಟ್ಟವರ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ.

---------------------
 ದೇಶ, ಹಿಂದುತ್ವ ಮತ್ತು ಸಮಾಜಕ್ಕಾಗಿ ಕ್ಷತ್ರಿಯರ ಹೋರಾಟ ಶ್ಲಾಘನೀಯ -ಅರವಿಂದ ಲಿಂಬಾವಳಿ, ಶಾಸಕ
 ಹೀಗೆಲ್ಲ ಹೇಳಿ ಪರಶುರಾಮನ ಕೊಡಲಿಯನ್ನು ಕೆರಳಿಸಬೇಡಿ.

--------------------
 ಅಲ್ಪಸಂಖ್ಯಾತರು ಜೆಡಿಎಸ್‌ಗೆ ಒಂದು ಮತ ಹಾಕಿದರೂ ಅದು ಬಿಜೆಪಿಗೆ ಶಕ್ತಿ ತುಂಬಿದಂತಾಗುತ್ತದೆ -ಝಮೀರ್ ಅಹ್ಮದ್, ಶಾಸಕ
 ಆದ್ದರಿಂದ ಅವರು ನೇರವಾಗಿ ಬಿಜೆಪಿಗೇ ಓಟು ಕೊಟ್ಟುಬಿಟ್ಟರೆ ಚೆನ್ನ. ಅಲ್ಲವೇ?

 ---------------------
 ಯಾರೋ ನಾಲ್ವರು ಬಂದು ಹೇಳಿದ ತಕ್ಷಣ ಬಿಜೆಪಿ ಟಿಕೆಟ್ ನೀಡಲು ಸಾಧ್ಯವಿಲ್ಲ -ಬಿ.ಎಲ್.ಸಂತೋಷ್, ಬಿಜೆಪಿ ರಾ.ಸಂ. ಕಾರ್ಯದರ್ಶಿ
 ಐದು ಮಂದಿಯಾದರೂ ಹೇಳ್ಬೇಕು ಅಂತೀರಾ?

---------------------
 ಪ್ರತೀ ಬಾರಿ ಇಂತಹ ಘಟನೆಗಳು (ಬಿಬಿಸಿ ಸಾಕ್ಷಚಿತ್ರ) ನಡೆದಾಗಲೂ ಪ್ರಧಾನಿ ಮೋದಿಗೆ ಹಿಂಬಾಲಕರು ಹೆಚ್ಚಾಗುತ್ತಾರೆ
-ತೇಜಸ್ವಿ ಸೂರ್ಯ, ಸಂಸದ
ನೀವು ಎಮರ್ಜೆನ್ಸಿ ಡೋರ್ ತೆರೆದಾಗ ಆದಂತೆ?

---------------------
 
1985ರಲ್ಲಿ ಡಿ.ಕೆ.ಶಿವಕುಮಾರ್ ಹರಿದ ಚಪ್ಪಲಿ ಹಾಕಿಕೊಂಡು ಓಡಾಡುತ್ತಿದ್ದ. ಈಗ ಲೂಟಿ ಮಾಡಿ ಶ್ರೀಮಂತನಾಗಿದ್ದಾನೆ -ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಹರಿದ ಚಪ್ಪಲಿ ಕದ್ದ ಚಪ್ಪಲಿಯಾಗಿರಲಿಲ್ಲ ಎಂದು ಅವರು ಅಭಿಮಾನ ಪಡುತ್ತಾರಲ್ಲಾ?
 
ಬಿಲ್ಲವ ಸಮುದಾಯದಲ್ಲಿ ಸದೃಢ ನಾಯಕತ್ವವನ್ನು ಹೆಚ್ಚಿಸಿದರೆ ವಿಧಾನಸೌಧ ಮತ್ತು ಸಂಸತ್‌ನಲ್ಲಿ ಸಮುದಾಯದ ಪರ ಧ್ವನಿ ಮೊಳಗಲು ಸಾಧ್ಯವಾಗುತ್ತದೆ -ಕೆ.ಹರೀಶ್ ಕುಮಾರ್, ವಿ.ಪ. ಸದಸ್ಯ
  ಹಾಗೆ ಆಗಿ ಬಿಟ್ಟರೆ ಮತ್ತೆ ಸಂಘ ಪರಿವಾರಕ್ಕಾಗಿ ರೌಡಿಸಂ ಮಾಡಲು, ಜೈಲಿಗೆ ಹೋಗಲು ಯಾರು ಉಳಿಯುತ್ತಾರೆ?

 ---------------------
 ನಾನು ಸಾಯುತ್ತೇನೆಯೇ ಹೊರತು ಬಿಜೆಪಿ ಜೊತೆ ಪುನಃ ಕೈಜೋಡಿಸುವುದಿಲ್ಲ -ನಿತೀಶ್ ಕುಮಾರ್, ಬಿಹಾರ ಸಿಎಂ
ಇತ್ತೀಚೆಗೆ ನಿಮಗೆ ಡೈಲಾಗ್‌ಗಳನ್ನು ಕುಮಾರಸ್ವಾಮಿಯವರು ಬರೆದು ಕೊಡುತ್ತಿದ್ದಾರೆಯೇ?

---------------------
 ಮಾಜಿ ಪ್ರಧಾನಿ ದೇವೇಗೌಡರನ್ನು ಉತ್ಸವ ಮೂರ್ತಿ ಮಾಡಿಕೊಂಡು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ -ಬಿಜೆಪಿ
 ನೀವು ಶ್ರೀರಾಮನನ್ನು ರಾಜಕಾರಣಕ್ಕೆ ಬಳಸುತ್ತಿರುವುದಕ್ಕೆ ಹೋಲಿಸಿದರೆ ಇದು ಎಷ್ಟೋ ವಾಸಿ.
 

---------------------
 ಗೋಧ್ರೋತ್ತರ ಘಟನೆಯ ಕುರಿತು ಬಿಬಿಸಿ ಸಿದ್ಧಪಡಿಸಿರುವ ಸಾಕ್ಷಚಿತ್ರದ ಹಿಂದೆ ಚೀನಾ ನೀಡಿದ ಹಣಕಾಸು ನೆರವಿನ ಕೈವಾಡ ಅಡಗಿದೆ -ಮಹೇಶ್ ಜೇಠ್ಮಲಾನಿ, ಸಂಸದ
 ಹಿಂದೆ ರಾಮ್ ಜೇಠ್ಮಲಾನಿ ಎಂಬೊಬ್ಬರು ತಕ್ಷಣದ ಸ್ವಾರ್ಥಗಳಿಗಾಗಿ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರು. ಕೊನೆಗೆ ಸಾಯುವ ಮುನ್ನ ಬಹಿರಂಗವಾಗಿ ಪಶ್ಚಾತ್ತಾಪಪಟ್ಟಿದ್ದರು.

---------------------

 ಪ್ರಧಾನಿ ಮೋದಿ ನೇತೃತ್ವದ ಸರಕಾರ ಪಕ್ಷಪಾತ ಮಾಡದೆ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತದೆ -ದ್ರೌಪದಿ ಮುರ್ಮು, ರಾಷ್ಟ್ರಪತಿ
 ನಿಮ್ಮ ಈ ಬಗೆಯ ಪರಮ ಅಸಹಾಯಕತೆಯ ಹೇಳಿಕೆಗಳು ಅವರ ನಿಷ್ಪಕ್ಷ ಧೋರಣೆಯನ್ನು ಬಿಚ್ಚಿಡುತ್ತವೆ.

---------------------
 15 ವರ್ಷಕ್ಕಿಂತ ಹಳೆಯ 9 ಲಕ್ಷ ಸರಕಾರಿ ವಾಹನಗಳು ಮತ್ತು ಬಸ್‌ಗಳನ್ನು ಎಪ್ರಿಲ್ ಒಂದರಿಂದ ಗುಜರಿಗೆ ಹಾಕಲಾಗುವುದು
-ನಿತಿನ್ ಗಡ್ಕರಿ, ಕೇಂದ್ರ ಸಚಿವ
ಸಂವಿಧಾನವನ್ನು ಗುಜರಿಗೆ ಹಾಕಲು ಇದೇ ಕಾರಣವನ್ನು ಬಳಸುವ ಅಪಾಯ ಇದೆ.

---------------------

 ಗೋಡ್ಸೆ ಸಿದ್ಧಾಂತದವರು ದೇಶದಿಂದ ಕಿತ್ತುಕೊಂಡದ್ದನ್ನು ರಾಹುಲ್ ಗಾಂಧಿ ವಾಪಸ್ ಕೊಡಬಲ್ಲರು -ಮೆಹಬೂಬ ಮುಫ್ತಿ, ಪಿಡಿಪಿ ಮುಖ್ಯಸ್ಥೆ
 ಒಟ್ಟಿನಲ್ಲಿ ರಾಹುಲ್ ಅವರನ್ನು ಇನ್ನೊಬ್ಬ ಗಾಂಧಿಯಾಗಿಸಿ ಗೋಡ್ಸೆಗೆ ಬಲಿ ಕೊಡಲು ಕೆಲವರು ತೀರ್ಮಾನಿಸಿದಂತಿದೆ.

---------------------
 ‘ಪಠಾಣ್’ ಸಿನೆಮಾ ಬಿಡುಗಡೆಯಾದಾಗಿನಿಂದ ಸಿಕ್ಕಿರುವ ಪ್ರೀತಿ ಕಳೆದ 4 ವರ್ಷಗಳಲ್ಲಿ ಸಿನೆಮಾ ಮಾಡದ ಬೇಸರವನ್ನು ಮರೆಸಿದೆ
-ಶಾರುಕ್ ಖಾನ್, ನಟ
 ಅದು ನಿಮಗೆ ಸಿಕ್ಕಿರುವ ಪ್ರೀತಿಯೋ? ನಾಯಕಿ ಧರಿಸದೇ ಇರುವ ಬಟ್ಟೆಗೆ ಸಿಕ್ಕಿರುವ ಪ್ರೀತಿಯೋ ಖಚಿತ ಮಾಡಿಕೊಳ್ಳಿ 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪಿ.ಎ. ರೈ
ಪಿ.ಎ. ರೈ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X