ಮಣಿಪಾಲ ಮ್ಯಾರಥಾನ್: ನಂಜುಡಪ್ಪ- ಬಿಜಾಯ್ ಬರ್ಮನ್ಗೆ ಪ್ರಶಸ್ತಿ

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ಮತ್ತು ಬೆಂಗಳೂರಿನ ಎನ್ಇಬಿ ಸ್ಪೋರ್ಟ್ಸ್ ಸಹಯೋಗದೊಂದಿಗೆ ರವಿವಾರ ಮಣಿಪಾಲದಲ್ಲಿ ಹಮ್ಮಿಕೊಳ್ಳಲಾದ 42ಕಿ.ಮೀ. ದೂರದ ಫುಲ್ ಮ್ಯಾರಥಾನ್ನ ಪುರುಷರ ವಿಭಾಗದಲ್ಲಿ ನಂಜುಡಪ್ಪ ಯಲ್ಲಪ್ಪ ಹಾಗೂ ಮಹಿಳೆಯರ ವಿಭಾಗ ದಲ್ಲಿ ಬಿಜೋಯ ಬರ್ಮನ್ ತಲಾ 50ಸಾವಿರ ರೂ. ನಗದು ಬಹುಮಾನ ದೊಂದಿಗೆ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ಇಸಾಕ್ ಕೆಂಬೊ ಕೊಮೊನ್ ದ್ವಿತೀಯ ಹಾಗೂ ಸಚಿನ್ ಪೂಜಾರಿ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಸುಸನ್ ಚೆಬೆಟ್ ದ್ವಿತೀಯ ಹಾಗೂ ದೀಪಿಕಾ ಪ್ರಕಾಶ್ ತೃತೀಯ ಸ್ಥಾನ ಪಡೆದರು. ವಿಜೇತರಲ್ಲಿ ದ್ವೀತಿಯ 30ಸಾವಿರ ರೂ. ಹಾಗೂ ತೃತೀಯ 20ಸಾವಿರ ರೂ. ನಗದು ಬಹುಮಾನ ಗಳಿಸಿದರು.
21 ಕಿ.ಮೀ. ದೂರದ ಹಾಫ್ ಮ್ಯಾರಥಾನ್ನ ಪುರುಷರ ವಿಭಾಗದಲ್ಲಿ ಶಿವಮ್ ಯಾದವ್ ಪ್ರಥಮ, ಪರಸಪ್ಪ ಹಲಿಜೊಲ್ ದ್ವಿತೀಯ, ಸಾಹಿಲ್ ಅನ್ನಿಗೇರಿ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಅರ್ಚನಾ ಕೆ.ಎಂ. ಪ್ರಥಮ, ಪ್ರೀಮು ಯಾದವ್ ದ್ವಿತೀಯ ಹಾಗೂ ಧನುಷಾ ಶೆಟ್ಟಿ ತೃತೀಯ ಬಹುಮಾನ ಗಳಿಸಿದರು.
ಮಣಿಪಾಲ ಗ್ರೀನ್ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಹೆ ಪ್ರೋಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಎಂಎಚ್ಇಪಿಎಲ್ ಚೇಯರ್ಮೆನ್ ಸುದರ್ಶನ್ ಬಲ್ಲಾಳ್ ವಿಜೇತರಿಗೆ ಬಹುಮಾನ ವಿತರಿಸಿದರು.
ಮ್ಯಾರಥಾನ್ ಉದ್ಘಾಟನೆ: ಮಣಿಪಾಲ ಮಾಹೆಯ ಆಡಳಿತ ಕಟ್ಟಡ ಮುಂಭಾಗದಿಂದ ಮ್ಯಾರಥಾನ್ಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೇ, ಉಡುಪಿ ಶಾಸಕ ಕೆ.ರಘುಪತಿ ಭಟ್, ಮಾಹೆ ಪ್ರೋಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್, ಎಂಎಚ್ ಇಪಿಎಲ್ ಚೇಯರ್ಮೆನ್ ಸುದರ್ಶನ್ ಬಲ್ಲಾಳ್, ಎಂ.ಡಿ.ವೆಂಕಟೇಶ್, ಮಾಜಿ ಸಚಿವ ಅಭಯಚಂದ್ರ ಜೈನ್, ಐಸಿಐಸಿಐ ಬ್ಯಾಂಕಿನ ಅತುಲ್ ಜೈನ್, ಮಾಹೆ ಸಹಕುಲಪತಿ ಶರತ್ ರಾವ್, ಮಂಗಳೂರು ಕ್ಯಾಂಪಸ್ನ ದಿಲೀಪ್ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಆನಂದ ಎನ್.ಗೋಪಾಲ್, ಪದ್ಮರಾಜ್ ಹೆಗ್ಡೆ, ಉನ್ನಿಕೃಷ್ಣನ್, ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕೆಂಪರಾಜ್ ಎಚ್.ಬಿ., ಕಾರ್ಯದರ್ಶಿ ದಿನೇಶ್ ಕುಮಾರ್, ಮಾಹೆ ಕ್ರೀಡಾ ಕೌನ್ಸಿಲ್ನ ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಮೊದ ಲಾದವರು ಉಪಸ್ಥಿತರಿದ್ದರು.
ವಿವಿಧ ವಿಭಾಗಗಳ ಫಲಿತಾಂಶ
10ಕಿ.ಮೀ. ಮ್ಯಾರಥಾನ್ ಪುರುಷರ ವಿಭಾಗ: ಪ್ರ- ಅನಿಲಾ ಕುಮಾರ್, ದ್ವಿ- ಮೋನು ಕುಮಾರ್, ತೃ- ಶ್ರೀಧರ ಎಸ್.ಎನ್. ಮಹಿಳೆಯರ ವಿಭಾಗ: ಪ್ರ- ಚೈತ್ರಾ ದೇವಾಡಿಗ, ದ್ವಿ- ಚೈತ್ರಾ ಪಿ., ತೃ- ಮಾನ್ಯ ಕೆ.ಎಂ.
5ಕಿ.ಮೀ. ಓಟ ಪುರುಷರ ವಿಭಾಗ: ಪ್ರ- ಅಜಯ್ ಠಾಕೂರ್, ದ್ವಿ- ನಂದನ್ ಕುಮಾರ್, ತೃ- ಲಾರಾ ಫ್ರಾನ್ಸಿಸ್ ಸಿದ್ಧಿ. ಮಹಿಳೆಯರ ವಿಭಾಗ: ಪ್ರ- ರೇಖಾ ಪಿರೋಜಿ, ದ್ವಿ- ರೂಪಾಶ್ರೀ ಎನ್.ಎಸ್., ತೃ- ಇಶೀತಾ ಧ್ರುವ.
3ಕಿ.ಮೀ. ಕಾಲೇಜು ಪುರುಷರ ವಿಭಾಗ: ಪ್ರ- ದರ್ಶನ್, ದ್ವಿ- ಧನುಷ್, ತನ- ಸಿಂಚನ್ರಾಜ್. ಮಹಿಳೆಯರ ವಿಭಾಗ: ಪ್ರ- ಶ್ವೇತಾ, ತೃ-ಅಕ್ಷತಾ. ಪ್ರೌಢ ಶಾಲಾ ಬಾಲಕರ ವಿಭಾಗ: ಪ್ರ- ಸಮೃದ್ಧ್, ದ್ವಿ- ಸಮರ್ಥ್, ತೃ- ರಾಘವೇಂದ್ರ. ಬಾಲಕಿಯರ ವಿಭಾಗ: ಪ್ರ-ರಾಜಶ್ರೀ, ದ್ವಿ- ರಾಜೇಶ್ವರಿ, ತೃ- ಪೂರ್ಣಿಮಾ. ಪ್ರಾಥಮಿಕ ಶಾಲಾ ಬಾಲಕರ ವಿಭಾಗ: ಪ್ರ- ರಿತೇಶ್, ದ್ವಿ- ಸಮಂತ್ ಶೆಟ್ಟಿ, ತೃ- ಮಂಜುನಾಥ್. ಬಾಲಕಿಯರ ವಿಭಾಗ: ಪ್ರ- ಪ್ರೀತಿ, ದ್ವಿ- ಅಕ್ಷತಾ, ತೃ- ಲಕ್ಷ್ಮೀ.







