ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಗೆ ಮುರಿದ ಖುರ್ಚಿಯನ್ನು ಎಸೆದ ಕಿಡಿಗೇಡಿಗಳು: ವಿಡಿಯೋ ವೈರಲ್
ಔರಂಗಾಬಾದ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಮುರಿದ ಕುರ್ಚಿಯ ಭಾಗವನ್ನು ಎಸೆದಿರುವ ಘಟನೆಯು ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ʼಸಮಾಧಾನ ಯಾತ್ರೆʼ ವೇಳೆ ನಡೆದ ಈ ಘಟನೆಯ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಮೂಹದ ಕಡೆಯಿಂದ ಯಾರೋ ಕಿಡಿಗೇಡಿಗಳು ಕುರ್ಚಿಯ ಭಾಗವನ್ನು ನಿತೀಶ್ ಕಡೆಗೆ ಎಸೆದಿದ್ದಾರೆ. ತಕ್ಷಣವೇ ಅವರ ಭದ್ರತಾ ಸಿಬ್ಬಂದಿ ಮತ್ತು ಇತರ ಜೆಡಿಯು ಕಾರ್ಯಕರ್ತರು ಕುಮಾರ್ ಅವರನ್ನು ಸುತ್ತುವರೆದು ರಕ್ಷಣೆ ನೀಡಿದ್ದಾರೆ. ಘಟನೆಯ ನಂತರವೂ ಬಿಹಾರ ಸಿಎಂ ತಮ್ಮ ʼಸಮಾಧಾನ ಯಾತ್ರೆʼ ಮುಂದುವರಿಸಿದ್ದಾರೆ.
#WATCH | Bihar: A part of a broken chair was hurled towards Bihar CM Nitish Kumar during Samadhan Yatra in Aurangabad. pic.twitter.com/MqeR6MLnFR
— ANI (@ANI) February 13, 2023
Next Story