ಫೆ17ರಿಂದ ಮಾರುತಿ ಟ್ರೋಫಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ
ಫೆ.19ರಂದು ಸೈಯದ್ ಕೀರ್ಮಾನಿ ಆಗಮನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಯುವಕ ಮಂಡಲ (ರಿ) ಉಳ್ಳಾಲ ಹಾಗೂ ಮಾರುತಿ ಕ್ರಿಕೇಟರ್ಸ್ (ರಿ) ಉಳ್ಳಾಲ ಇದರ 35 ನೇ ವಾರ್ಷಿಕೋತ್ಸವದ ಸಲುವಾಗಿ ಫೆ. 17 ರಿಂದ 19 ರ ವರೆಗೆ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ.
ಫೆ.19ರಂದು ನಡೆಯುವ ಬಹುಮಾನ ವಿತರಣಾ ಸಮಾರಂಭದ ವಿಶೇಷ ಅತಿಥಿಯಾಗಿ 1983 ವಿಶ್ವಕಪ್ ಕಪ್ ವಿಜೇತ ತಂಡದ ವಿಕೆಟ್ ಕೀಪರ್, ಮಾಜಿ ಅಂತರಾಷ್ಟ್ರೀಯ ಕ್ರಿಕೆಟ್ ಪಟು ಸೈಯದ್ ಕೀರ್ಮಾನಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಫೆ 17ರವರೆಗೆ ಮೊಗವೀರ ಕ್ರಿಕೆಟ್ ಪಂದ್ಯಾಟ ವೂ ನಡೆಯಲಿದೆ ಎಂದು ಸಂಚಾಲಕ ಭರತ್ ಕುಮಾರ್ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿವಿಧ ರಾಜ್ಯ ಮತ್ತು ಕರ್ನಾಟಕ ಸೇರಿದಂತೆ ಒಟ್ಟು ಬಲಿಷ್ಠ 16 ತಂಡಗಳಾದ ಯುನೈಟೆಡ್ ಜಾಗ್ವಾರ್ ಸುರತ್ಕಲ್, ನ್ಯಾಶ್ ಬೆಂಗಳೂರು, ಆಜಾದ್ ಉಳ್ಳಾಲ, ಫ್ರೆಂಡ್ಸ್ ಬೆಂಗಳೂರು, ಸ್ಟಾರ್ ಮದ್ದೂರು ಮಂಡ್ಯ, ಜೈ ಕರ್ನಾಟಕ ಬೆಂಗಳೂರು, ರಿಯಲ್ ಫೈಟರ್ಸ್ ಮಲ್ಪೆ, ಡ್ರೀಮ್ ಇಲೆವೆನ್ ಚೆನ್ನೈ,ಅವಿಘ್ನ ಸೃಷ್ಟಿ, ರಾಮಾಂಜನೇಯ ಗುಡ್ಡೆಕೊಪ್ಲ, ಫ್ರೆಂಡ್ಸ್ ಕೋಡಿ ಉಳ್ಳಾಲ,ರಂಗ ಇಲೆವೆನ್ ಬೆಂಗಳೂರು, ಜೈಹಿಂದ್ ಶಿವಮೊಗ್ಗ, ದಾವಣಗೆರೆ ಇಲೆವೆನ್, ಗುರುಗಣೇಶ್ ನೇಜಾರು ಮತ್ತು ಜಾನ್ಸನ್ ಕುಂದಾಪುರ ಪ್ರತಿಷ್ಠಿತ ಪ್ರಶಸ್ತಿಗಾಗಿ ಪಂದ್ಯ ನಡೆಯಲಿದೆ.
ಈ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡ 4,00,004 ರೂ ಮತ್ತು ದ್ವಿತೀಯ ಸ್ಥಾನಿ 2,00,002 ರೂ , ಬಹುಮಾನ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ. ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಆಟಗಾರ ಆಕರ್ಷಕ ದ್ವಿಚಕ್ರ ವಾಹನವನ್ನು ತನ್ನದಾಗಿಸಿಕೊಳ್ಳಲಿದ್ದಾರೆ ಎಂದು ಸಂಚಾಲಕ ಭರತ್ ಕುಮಾರ್ ತಿಳಿಸಿದ್ದಾರೆ.
*ಟ್ರೋಫಿ 2023 ಆಹ್ವಾನ ಪತ್ರಿಕೆ ಬಿಡುಗಡೆ:- ದ.ಕ ಹಾಗೂ ಉಡುಪಿ ಜಿಲ್ಲಾ ಮೀನುಗಾರಿಕಾ ಮಹಾಮಂಡಲದ ಅಧ್ಯಕ್ಷ ಯಶಪಾಲ್ ಸುವರ್ಣ ಬಿಡುಗಡೆಗೊಳಿಸಿ ಸಂಸ್ಥೆಯ ಕಾರ್ಯಕ್ರಮಗಳಿಗೆ ಶುಭಹಾರೈಸಿದರು, ಉದ್ಯಮಿ ಸಿಂಧೂರಾಮ್ ಸಮವಸ್ತ್ರವನ್ನು ಬಿಡುಗಡೆಗೊಳಿಸಿದರು. ದಕ್ಷಿಣ ಕನ್ನಡ ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ಮೊಗವೀರ ವ್ಯವಸ್ಥಾಪಕ ಮಂಡಳಿಯ ಕಾರ್ಯಾಧ್ಯಕ್ಷ ಹಾಗೂ ಪಂದ್ಯಾಟದ ಸಂಚಾಲಕ ಭರತ್ ಕುಮಾರ್ ಉಳ್ಳಾಲ್ ಪಂದ್ಯಾಟದ ವಿವರಗಳನ್ನುಸಂಸ್ಥೆಯ ಗೌರವಾಧ್ಯಕ್ಷ ಸುಧೀರ್ ವಿ. ಅಮೀನ್ ಪಂದ್ಯಾಟದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಅಧ್ಯಕ್ಷ ವರದರಾಜ್ ಬಂಗೇರ ವಹಿಸಿದ್ದರು, ವೇದಿಕೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರುಗಳಾದ ಸಂದೀಪ್ ಪುತ್ರನ್, ದಿನೇಶ್ ಕರ್ಕೇರ ಹಾಗೂ ಉದ್ಯಮಿಗಳಾದ ಕಬೀರ್, ವಿನೋದ್ ಮತ್ತಿತರರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ವಸಂತ್ ತಣ್ಣೀರುಬಾವಿ ನಿರ್ವಹಿಸಿದರು.