Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 30 ದೇಶಗಳ ಚುನಾವಣೆಯಲ್ಲಿ ಪ್ರಭಾವ ಬೀರಲು...

30 ದೇಶಗಳ ಚುನಾವಣೆಯಲ್ಲಿ ಪ್ರಭಾವ ಬೀರಲು ಇಸ್ರೇಲ್ ಸಂಸ್ಥೆಯ ಯತ್ನ: ಕುಟುಕು ಕಾರ್ಯಾಚರಣೆಯ ವರದಿ

15 Feb 2023 10:33 PM IST
share
30 ದೇಶಗಳ ಚುನಾವಣೆಯಲ್ಲಿ ಪ್ರಭಾವ ಬೀರಲು ಇಸ್ರೇಲ್ ಸಂಸ್ಥೆಯ ಯತ್ನ: ಕುಟುಕು ಕಾರ್ಯಾಚರಣೆಯ ವರದಿ

ಪ್ಯಾರಿಸ್, ಫೆ.15: ಇಸ್ರೇಲ್ ನ ಸಂಸ್ಥೆಯೊಂದು ಹ್ಯಾಕಿಂಗ್, ವಿಧ್ವಂಸಕ ಕೃತ್ಯ ಮತ್ತು ಗ್ರಾಹಕರಲ್ಲಿ ತಪ್ಪುಮಾಹಿತಿ ಹರಡುವ ಮೂಲಕ ವಿಶ್ವದಾದ್ಯಂತ 30ಕ್ಕೂ ಹೆಚ್ಚು ದೇಶಗಳ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದೆ ಎಂದು ಬುಧವಾರ ಪ್ರಕಟವಾದ ರಹಸ್ಯ ಮಾಧ್ಯಮ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಪಂಚದಾದ್ಯಂತ ಕೆಲವು ಅಕ್ರಮ ಖಾಸಗಿ ಸಂಸ್ಥೆಗಳು ಆಕ್ರಮಣಕಾರಿ ಹ್ಯಾಕಿಂಗ್ ಸಾಧನದ ಮೂಲಕ ಲಾಭ ಮಾಡಿಕೊಳ್ಳುತ್ತಿವೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯ ಶಕ್ತಿಯಿಂದ  ಸಾರ್ವಜನಿಕ ಅಭಿಪ್ರಾಯದಲ್ಲಿ ಪ್ರಭಾವ ಬೀರುತ್ತಿವೆ ಎಂಬ ಹೆಚ್ಚುತ್ತಿರುವ ಆತಂಕಕ್ಕೆ ಈ ವರದಿ ಪೂರಕವಾಗಿದೆ.

ಇಸ್ರೇಲ್ ನ ವಿಶೇಷ ಕಾರ್ಯಾಚರಣಾ ತಂಡದ ಮಾಜಿ ಸದಸ್ಯ ಟಾಲ್ ಹನಾನ್ ನೇತೃತ್ವದ `ಟೀಮ್ ಜಾರ್ಜ್' ಎಂಬ ಕೋಡ್ವರ್ಡ್ ಹೊಂದಿರುವ ಸಂಸ್ಥೆಯ ವಿರುದ್ಧ ಪತ್ರಕರ್ತರ ತಂಡವೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಫ್ರಾನ್ಸ್ ಮೂಲದ ಎನ್ಜಿಒ ಸಂಸ್ಥೆಯ ನಿರ್ದೇಶನದಂತೆ ಬ್ರಿಟನ್ ನ `ದಿ ಗಾರ್ಡಿಯನ್', ಫ್ರಾನ್ಸ್ ನ `ಲೆ ಮೋಂಡ್', ಜರ್ಮನಿಯ `ಡೆರ್ ಸ್ಪೀಗೆಲ್' ಸೇರಿದಂತೆ 30 ಸಂಸ್ಥೆಗಳ ಪತ್ರಕರ್ತರು ತನಿಖಾ ವರದಿ ತಂಡದಲ್ಲಿದ್ದರು. ತಾವು ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದು `ಟೀಮ್ ಜಾರ್ಜ್'ನ ಗ್ರಾಹಕರಾಗಲು ಇಚ್ಛೆಯಿದೆ ಎಂದು ಹೇಳಿಕೊಂಡ ಈ ತಂಡ ಕುಟುಕು ಕಾರ್ಯಾಚರಣೆ ನಡೆಸಿದೆ.

ಟೆಲಿಗ್ರಾಮ್ ಖಾತೆಗಳು ಹಾಗೂ ಸಾವಿರಾರು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ನಿಯಂತ್ರಿಸುವುದು, ಹೊಸ ವರದಿಗಳನ್ನು ಪ್ರಕಟಿಸುವುದು ಇವರ ಕಾರ್ಯವಿಧಾನವಾಗಿದೆ. `ಅಡ್ವಾನ್ಸ್ಡ್ ಇಂಪ್ಯಾಕ್ಟ್ ಮೀಡಿಯಾ ಸೊಲ್ಯುಷನ್ಸ್' ಎಂಬ ಸಾಫ್ಟ್ವೇರ್ ವೇದಿಕೆಯ ಮೂಲಕ  ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಆನ್ಲೈನ್ ಅಭಿಯಾನ ನಡೆಸಲಾಗುತ್ತಿದೆ. ಈ ಸಾಫ್ಟ್ವೇರ್ ವೇದಿಕೆಯು ಫೇಸ್ಬುಕ್, ಟ್ವಿಟರ್ ಅಥವಾ ಲಿಂಕೆಡಿನ್ನ ಸುಮಾರು 40,000 ಸಾಮಾಜಿಕ ಮಾಧ್ಯಮ ಪ್ರೊಫೈಲ್ ಗಳನ್ನು ನಿಯಂತ್ರಿಸುತ್ತಿದೆ. ತಮ್ಮ ತಂಡವು ಫ್ರಾನ್ಸ್ ನ ಪ್ರಮುಖ ಟಿವಿ ನ್ಯೂಸ್ಚಾನೆಲ್ ಬಿಎಫ್ಎಮ್ ನಲ್ಲಿ `ಮೊನಾಕೊದಲ್ಲಿ ವಿಹಾರ ಉದ್ದಿಮೆಯ ಮೇಲೆ ರಶ್ಯ ವಿರುದ್ಧದ ನಿರ್ಬಂಧದ ಪರಿಣಾಮ' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ ಎಂದು ಕುಟುಕು ಕಾರ್ಯಾಚರಣೆಯ ಸಂದರ್ಭ ಹನಾನ್ ಹೇಳಿಕೊಂಡಿದ್ದಾರೆ.

ತಮ್ಮ ಸಂಸ್ಥೆಯು ಗುಪ್ತಚರ ಏಜೆನ್ಸಿಗಳಿಗೆ, ರಾಜಕೀಯ ಅಭಿಯಾನಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗಾಗಿ ಪ್ರತ್ಯೇಕ ಮೂರು ವಿಧದ ಕಾರ್ಯನಿರ್ವಹಿಸುತ್ತದೆ. ಈಗ  ಆಫ್ರಿಕಾದಲ್ಲಿನ ಚುನಾವಣೆಯಲ್ಲಿ ನಾವು ತೊಡಗಿಕೊಂಡಿದ್ದೇವೆ. ಎಮಿರೇಟ್ಸ್ ಮತ್ತು ಗ್ರೀಸ್ ನಲ್ಲಿಯೂ ನಮ್ಮ ತಂಡವಿದೆ. 33 ಅಧ್ಯಕ್ಷರ ಮಟ್ಟದ ಚುನಾವಣಾ ಅಭಿಯಾನವನ್ನು ನಾವು ಪೂರ್ಣಗೊಳಿಸಿದ್ದು ಇದರಲ್ಲಿ 27ರಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ರಾಜಕೀಯ ಅಭಿಯಾನದ 75%ದಷ್ಟು ಆಫ್ರಿಕಾಕ್ಕೆ ಸಂಬಂಧಿಸಿದ್ದು ಎಂದು ಹನಾನ್ ಹೇಳಿದ್ದಾರೆ.

ಅಲ್ಲದೆ ಕೆನ್ಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮುಂಚಿನ ದಿನ ಅಲ್ಲಿನ ರಾಜಕೀಯ ಕಾರ್ಯಕರ್ತರ ಜಿಮೇಲ್ ಇನ್ಬಾಕ್ಸ್ ಹಾಗೂ ಟೆಲಿಗ್ರಾಮ್ ಖಾತೆಗಳನ್ನು ಯಾವ ರೀತಿ ಹ್ಯಾಕ್ ಮಾಡಲಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಸಹಿತ ವಿವರಿಸಿದ್ದಾರೆ. ಆಗಸ್ಟ್ 2022ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಕೆನ್ಯಾದ ಅಧ್ಯಕ್ಷ ವಿಲಿಯಮ್ ರುಟೋ ಅವರ ಇಬ್ಬರು ಸಹಾಯಕರ ಜಿಮೇಲ್ ಇದಾಗಿದೆ ಎಂದು ವರದಿ ಹೇಳಿದೆ.

ಟೀಮ್ ಜಾರ್ಜ್ ವಿವರಿಸಿದ ವಿಧಾನಗಳು ಮತ್ತು ತಂತ್ರಗಳು ದೊಡ್ಡ ಟೆಕ್ ವೇದಿಕೆಗಳಿಗೆ ಹೊಸ ಸವಾಲುಗಳನ್ನು ಹುಟ್ಟುಹಾಕಿದೆ. ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು ಜಾಗತಿಕ ಖಾಸಗಿ ಮಾರುಕಟ್ಟೆಯು ತಪ್ಪು ಮಾಹಿತಿ ಪ್ರಸಾರ ಮಾಡುತ್ತಿರುವುದು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವರದಿ ಹೇಳಿದೆ.

share
Next Story
X