Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸ್ಪಷ್ಟ ನಿರ್ಧಾರ ತಿಳಿಸದ ಚೀನಾ:...

ಸ್ಪಷ್ಟ ನಿರ್ಧಾರ ತಿಳಿಸದ ಚೀನಾ: ಶ್ರೀಲಂಕಾಕ್ಕೆ ಐಎಂಎಫ್ ಸಾಲ ಮಂಜೂರು ಅನಿಶ್ಚಿತತೆಯಲ್ಲಿ

15 Feb 2023 10:47 PM IST
share
ಸ್ಪಷ್ಟ ನಿರ್ಧಾರ ತಿಳಿಸದ ಚೀನಾ: ಶ್ರೀಲಂಕಾಕ್ಕೆ ಐಎಂಎಫ್ ಸಾಲ ಮಂಜೂರು ಅನಿಶ್ಚಿತತೆಯಲ್ಲಿ

ಕೊಲಂಬೊ, ಫೆ.15: ಶ್ರೀಲಂಕಾಕ್ಕೆ ನೀಡಿರುವ ಸಾಲದ ಮರುರಚನೆಯ ಬಗ್ಗೆ ಚೀನಾ ಇನ್ನೂ ಸ್ಪಷ್ಟ ನಿರ್ಧಾರ ತಿಳಿಸದ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರಕ್ಕೆ  ಐಎಂಎಫ್(IMF) ಸಾಲ ಮಂಜೂರಾತಿಯ ಕುರಿತ ಅನಿಶ್ಚಿತತೆ ಮುಂದುವರಿದಿದೆ ಎಂದು ವರದಿಯಾಗಿದೆ.

ಶ್ರೀಲಂಕಾಕ್ಕೆ ಸಾಲ ನೀಡಿರುವ ನೆರೆಹೊರೆಯ ಪ್ರಮುಖ ದೇಶಗಳಾದ ಚೀನಾ, ಭಾರತ ಮತ್ತು ಜಪಾನ್ನಿಂದ `ಸಾಲದ ಸಮರ್ಥನೀಯತೆಯ ವಿಶ್ಲೇಷಣಾ ವರದಿ(DSA)'ಯನ್ನು ಐಎಂಎಫ್ ಕೇಳಿದೆ. ಈ ದೇಶಗಳು ನೀಡುವ ಡಿಎಸ್ಎ ಆಧಾರದ ಮೇಲೆ ಶ್ರೀಲಂಕಾಕ್ಕೆ ಸಾಲ ನೀಡಬೇಕೇ, ಎಷ್ಟು ಮೊತ್ತ ನೀಡಬಹುದು ಇತ್ಯಾದಿಗಳನ್ನು ಐಎಂಎಫ್ ನಿರ್ಧರಿಸಲಿದೆ. 

ಭಾರತ ಮತ್ತು ಜಪಾನ್ ಈಗಾಗಲೇ ಶ್ರೀಲಂಕಾಕ್ಕೆ ನೆರವು ನೀಡುವುದಾಗಿ ಐಎಂಎಫ್ಗೆ ಖಾತರಿ ಒದಗಿಸಿವೆ. ಆದರೆ ಚೀನಾ ಮಾತ್ರ ಹಿಂದೇಟು ಹಾಕುತ್ತಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಲಂಕಾ, ಐಎಂಎಫ್ನಿಂದ 4 ವರ್ಷಾವಧಿಗೆ, 8 ಕಂತುಗಳಲ್ಲಿ 2.9 ಶತಕೋಟಿ ಡಾಲರ್ನಷ್ಟು ಸಾಲದ ನೆರವನ್ನು ಎದುರುನೋಡುತ್ತಿದೆ.

ಸಾಲದ ಕಂತಿನ ಅವಧಿ ಮತ್ತು ಸಾಲದ ಮರುರಚನೆಯ ವಿಷಯದಲ್ಲಿ ಚೀನಾವು ಐಎಂಎಫ್ ಜತೆ ಭಿನ್ನಾಭಿಪ್ರಾಯ ಹೊಂದಿದೆ. ಶ್ರೀಲಂಕಾಕ್ಕೆ ತಾನು ನೀಡಿರುವ ಸಾಲವನ್ನು 2 ವರ್ಷದ ಅವಧಿಗೆ ಮರುರಚಿಸಲು ಸಿದ್ಧ ಎಂದು ಚೀನಾ ವಾದಿಸುತ್ತಿದೆ. ಆದರೆ ಐಎಂಎಫ್ 4 ವರ್ಷದ ಅವಧಿಗೆ ಆಗ್ರಹಿಸುತ್ತಿದೆ. ಮುಂದಿನ ತಿಂಗಳು ನಿಗಧಿಯಾಗಿರುವ ಐಎಂಎಫ್ ಕಾರ್ಯಕಾರಿ ಸಮಿತಿಯ ಸಭೆಗೂ ಮುನ್ನ ಚೀನಾ ಅನುಕೂಲಕರ ನಿರ್ಧಾರಕ್ಕೆ ಬರಬಹುದು ಎಂದು ಶ್ರೀಲಂಕಾ ನಿರೀಕ್ಷಿಸುತ್ತಿದೆ.

ಶ್ರೀಲಂಕಾವು ಸುಮಾರು 7.8 ಶತಕೋಟಿ ಡಾಲರ್ನಷ್ಟು (ಚೀನಾ ಸರಕಾರದಿಂದ ಪಡೆದ ದ್ವಿಪಕ್ಷೀಯ ಸಾಲ, ಎಕ್ಸಿಮ್ ಬ್ಯಾಂಕ್ನಿಂದ  ಮತ್ತು ಚೀನೀ ಅಭಿವೃದ್ಧಿ ಬ್ಯಾಂಕ್ನಿಂದ ಪಡೆದ  ಸಾಲ ಸೇರಿ) ಸಾಲವನ್ನು ಚೀನಾಕ್ಕೆ ಪಾವತಿಸಬೇಕಿದೆ. ಗೊತಬಯ ಅಧ್ಯಕ್ಷರಾಗಿದ್ದ ಸಂದರ್ಭ ಪಡೆದಿದ್ದ ಈ ಸಾಲವನ್ನು ಹಂಬನ್ತೋಟ ಬಂದರು, ಮತ್ತಾಲ ವಿಮಾನನಿಲ್ದಾಣ ನವೀಕರಣ, ನೊರೊಚೊಲೈ ವಿದ್ಯುತ್ಸ್ಥಾವರ, ಕೊಲಂಬೊ ಬಂದರು ನಗರ ನಿರ್ಮಾಣ ಮುಂತಾದ ಬಿಳಿಯಾನೆ ಯೋಜನೆಗಳಿಗೆ ವಿನಿಯೋಗಿಸಿರುವುದು ಶ್ರೀಲಂಕಾದ ಈಗಿನ ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣವಾಗಿದೆ.  

ಶ್ರೀಲಂಕಾಕ್ಕೆ ಐಎಂಎಫ್ ಸಾಲದ ನೆರವು ಮುಂದೂಡಿಕೆಯಾದರೆ ಆ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಜತೆಗೆ ರಾಜಕೀಯ ಅಸ್ಥಿರತೆಯೂ ಪರಾಕಾಷ್ಟೆಗೆ ಏರಲಿದೆ. ಜನತಾ ವಿಮುಕ್ತಿ ಪೆರುಮುನ(JVP)ದಂತಹ ಶ್ರೀಲಂಕಾದ ಕಮ್ಯುನಿಸ್ಟ್ ಪಕ್ಷಗಳು ಈ ಪರಿಸ್ಥಿತಿಯ ಫಲಾನುಭವಿಗಳಾಗಲಿದ್ದಾರೆ. ಈ ಸಾಧ್ಯತೆಯನ್ನು ಮನಗಂಡಿರುವ ಚೀನಾ ಸಾಲ ಮರುರಚನೆಯ ನಿರ್ಧಾರವನ್ನು ಅನಿಶ್ಚಿತತೆಯಲ್ಲಿ ಇರಿಸಿದೆ ಎಂದು ವಿಶ್ಲೇಷಿಸಲಾಗಿದೆ.

share
Next Story
X