ಫೆ.18ರಂದು ಮಾಣಿ - ನೇರಳಕಟ್ಟೆಯಲ್ಲಿ ಮಿಹ್ರಾಜ್ ಮಜ್ಲಿಸ್, ಸುನ್ನಿ ಸಮಾವೇಶ

ಬಂಟ್ವಾಳ : ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಫೆ 18 ರಂದು ಸಂಜೆ ಮಾಣಿ ಸಮೀಪದ ಜನಪ್ರಿಯ ಗಾರ್ಡನ್ ನಲ್ಲಿ ಬೃಹತ್ ಮಿಹ್ರಾಜ್ ಮಜ್ಲಿಸ್ ಹಾಗೂ ಸುನ್ನೀ ಸಮಾವೇಶವು ನಡೆಯಲಿದೆ ಎಂದು ದಾರಿಮಿ ಉಲಮಾ ಒಕ್ಕೂಟದ ಮುಖ್ಯಸ್ಥ ಎಸ್.ಬಿ. ಮುಹಮ್ಮದ್ ದಾರಿಮಿ ತಿಳಿಸಿದರು.
ಗುರುವಾರ ಬಿ.ಸಿ.ರೋಡ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವೋತ್ತರ ಧಾರ್ಮಿಕ ಪಂಡಿತ ಶೈಖುನಾ ಶಂಸುಲ್ ಉಲಮಾರ ಜ್ಞಾನ ಧಾರೆಯಿಂದ ಧನ್ಯ ಗೊಂಡ ದಕ್ಷಿಣ ಭಾರತದ ಪ್ರಸಿದ್ಧ ವಿದ್ಯಾ ಕೇಂದ್ರ ಕಲ್ಲಿಕೋಟೆಯ ಜಾಮಿಯಾ ದಾರುಸ್ಸಲಾಮ್ ನಂದಿ ಇದರ 47 ನೇ ವಾರ್ಷಿಕ 15 ನೇ ಘಟಿಕೋತ್ಸವ ಫೆ.24 ರಿಂದ 26ರ ತನಕ ವೈವಿದ್ಯಪೂರ್ಣವಾಗಿ "ಶಾಂತಿಯೇ ಧರ್ಮ ಸಂಘರ್ಷವೇ ಅಧರ್ಮ" ಎಂಬ ಪ್ರಮೇಯ ದೊಂದಿಗೆ ನಡೆಯಲಿದ್ದು ಇದರ ಪೂರ್ವ ಪ್ರಚಾರವು ರಾಜ್ಯಾದ್ಯಂತ ನಡೆಯುತ್ತಿದೆ ಎಂದರು.
ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನಡೆಯಲಿದ್ದು ಹಾಜಿ ಇಸ್ಮಾಯಿಲ್ ಕಂಬಳಬೆಟ್ಟು ಧ್ವಜಾರೋಹಣಗೈಯ್ಯಲಿದ್ದಾರೆ.
ದಾರುಸ್ಸಲಾಂ ಕಾಲೇಜಿನ ಕುಲಪತಿ ಶೈಖುನಾ ಏವಿ ಉಸ್ತಾದರು ಸಮಾರಂಭದ ಉದ್ಘಾಟಿಸಲಿದ್ದು, ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಆಲಿಕುಟ್ಟಿ ಉಸ್ತಾದ್ ದುಅಃ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ.
ಸಯ್ಯಿದ್ ಅಲೀ ತಂಙಳ್ ಕುಂಬೋಳ್, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ಕರ್ನಾಟಕ ಜಂಇಯ್ಯತುಲ್ ಉಲಮಾ, ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಶೈಖುನಾ ಮಾಹಿನ್ ಉಸ್ತಾದ್, ಅಬ್ದುಲ್ಲ ಉಸ್ತಾದ್ ಕೊಡಗು, ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ಮಾನುಲ್ ಫೈಝಿ, ಉಳ್ಳಾಲ, ಪಾತೂರು ಖಾಝಿ ಅಹ್ಮದ್ ಮುಸ್ಲಿಯಾರ್, ಬೊಳ್ಳೂರು ಅಲ್ ಅಝ್ಹರ್ ಫೈಝಿ ಮೊದಲಾದವರು ಭಾಗವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಮ್. ಫಾರೂಕ್ , ಶಾಸಕ ಯು.ಟಿ. ಖಾದರ್, ಅಲ್ ಮುಝೈನ್ ಝಕರಿಯಾ ಹಾಜಿ ಜೋಕಟ್ಟೆ , ವೈಟ್ ಸ್ಟೋನ್ ಶರೀಫ್ ಜೋಕಟ್ಟೆ , ಅಬ್ದುರ್ರವೂಫ್ ಸುಲ್ತಾನ್ ಗೋಲ್ಡ್ , ಬಿ.ಎಮ್. ಉಮರ್ ಹಾಜಿ ಉದ್ಯಮಿ ಬೆಂಗಳೂರು, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಶಬೇ ಮಿಹ್ರಾಜ್ ದುಅಃ ಮಜ್ಲಿಸ್ ಸಾದಾತುಗಳ ಸಮಕ್ಷಮದಲ್ಲಿ ನಡೆಯಲಿದ್ದು, ಅಮೀರ್ ತಂಙಳ್ ಕಿನ್ಯ, ಮಹ್ಮೂದ್ ತಂಙಳ್, ಹಬೀಬುರ್ರಹ್ಮಾನ್ ತಂಙಳ್ , ಅನಸ್ ತಂಙಳ್, ಶರಫುದ್ದೀನ್ ತಂಙಳ್, ಯಹ್ಯಾ ತಂಙಳ್, ಕುಕ್ಕಾಜೆ ಹುಸೇನ್ ತಂಙಳ್, ಜುನೈದ್ ಜಿಫ್ರಿ ತಂಙಳ್, ಅಕ್ರಮ್ ಅಲಿ ತಂಙಳ್, ಬಾತಿಷ್ ತಂಙಳ್, ತ್ವಾಹಾ ತಂಙಳ್ ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿಗಳಾದ ಆಶಿಕ್ ದಾರಿಮಿ ಆಲಪ್ಪುಯ , ಮತ್ತು ಶುಹೈಬ್ ಹೈತಮಿ ದಾರಿಮಿ ಮುಖ್ಯ ಭಾಷಣ ಗೈಯಲಿದ್ದಾರೆ. ಇದೇ ವೇಳೆ ಈ ವರ್ಷ ಸನದು ಪಡೆಯುವ ಯುವ ದಾರಿಮಿಗಳನ್ನು ಸಭೆಯಲ್ಲಿ ಸನ್ಮಾನಿಸಲಾಗುವುದು ಎಂದವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಚಾರ ಸಮಿತಿ ಚೇರ್ಮನ್ ಎಲ್.ಟಿ ರಝಾಕ್ ಹಾಜಿ, ಪ್ರಚಾರ ಸಮಿತಿ ಕನ್ವೀನರ್ ಕೆ.ಎಲ್. ಉಮರ್ ದಾರಿಮಿ, ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಉಪಸ್ಥಿತರಿದ್ದರು.







