Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಅಂಬೇಡ್ಕರ್‌ ಕುರಿತ ವಿವಾದಿತ ನಾಟಕ...

ಅಂಬೇಡ್ಕರ್‌ ಕುರಿತ ವಿವಾದಿತ ನಾಟಕ ಎಂಸಿಸಿ ಫೆಸ್ಟ್‌ನಲ್ಲೂ ಪ್ರದರ್ಶನಗೊಂಡು ಮೊದಲ ಸ್ಥಾನ ಪಡೆದಿತ್ತು: ವರದಿ

17 Feb 2023 3:03 PM IST
share
ಅಂಬೇಡ್ಕರ್‌ ಕುರಿತ ವಿವಾದಿತ ನಾಟಕ ಎಂಸಿಸಿ ಫೆಸ್ಟ್‌ನಲ್ಲೂ ಪ್ರದರ್ಶನಗೊಂಡು ಮೊದಲ ಸ್ಥಾನ ಪಡೆದಿತ್ತು: ವರದಿ

ಬೆಂಗಳೂರು: ಡಾ. ಬಿ. ಆರ್‌ ಅಂಬೇಡ್ಕರ್‌ ಮತ್ತು ದಲಿತ ಸಮುದಾಯವನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಿದೆಯೆಂದು ಆರೋಪಿಸಲಾದ ವಿವಾದಿತ ಮ್ಯಾಡ್‌ಆಡ್ಸ್‌ ನಾಟಕವನ್ನು ಎಂಸಿಸಿ ಫೆಸ್ಟ್‌ ʻಕಲ್-ಆಹ್‌ʼನಲ್ಲೂ ಪ್ರದರ್ಶಿಸಲಾಗಿತ್ತು ಎಂದು ಮೌಂಟ್‌ ಕಾರ್ಮೆಲ್‌ ಕಾಲೇಜು (ಎಂಸಿಸಿ) ಮೂಲಗಳು ತಿಳಿಸಿವೆ. ಈ ನಾಟಕ ಪ್ರದರ್ಶಿಸಿದ್ದ ಜೈನ್‌ ಯುನಿವರ್ಸಿಟಿ ಸಿಎಂಎಸ್‌ ಇದರ ಡೆಲ್ರಾಯ್ಸ್‌ ಬಾಯ್ಸ್‌ ಈ ನಾಟಕಕ್ಕೆ ಪ್ರಥಮ ಸ್ಥಾನ ಪಡೆದಿತ್ತು ಎಂದು indianexpress.com ವರದಿ ಮಾಡಿದೆ.

ಮ್ಯಾಡ್‌ಆಡ್ಸ್‌ ಸ್ಪರ್ಧೆಯನ್ನು ಫೆಬ್ರವರಿ 4 ರಂದು ಎಂಸಿಸಿಯ ವಿದ್ಯಾರ್ಥಿ ಸಂಘಟನೆ ಅಂಡರ್‌ 25 ಆಯೋಜಿಸಿತ್ತು. ಈ ಸ್ಪರ್ಧೆಯಲ್ಲೂ ಜೈನ್‌ ವಿವಿ ಸಿಎಂಎಸ್‌ ನ ಡೆಲ್ರಾಯ್ಸ್‌ ಬಾಯ್ಸ್‌ ಈ ನಾಟಕ ಪ್ರದರ್ಶಿಸಿತ್ತು.

ಅದನ್ನು ಅನರ್ಹಗೊಳಿಸುವ ಯತ್ನಗಳ ಹೊರತಾಗಿಯೂ ನಾಟಕ ಮೊದಲ ಸ್ಥಾನ ಪಡೆದಿತ್ತು. ಅಷ್ಟೇ ಅಲ್ಲದೆ ಇನ್ನೂ ಎರಡು ಇತರ ಫೆಸ್ಟ್‌ಗಳಲ್ಲಿ ಈ ನಾಟಕ ಪ್ರದರ್ಶಿಸಲಾಗಿತ್ತು ಎಂದು ಸಿಎಂಎಸ್‌ ಅಧಿಕಾರಿಯೊಬ್ಬರೂ ಹೇಳಿದ್ದರು.

ಅಂಡರ್‌25 ನ ಇನ್‌ಸ್ಟಾಗ್ರಾಂ ಪುಟದ ಪ್ರಕಾರ ಮ್ಯಾಡ್‌ಆಡ್ಸ್‌ ಸ್ಪರ್ಧೆಯ ತೀರ್ಪುಗಾರರಲ್ಲಿ ಸೈಂಟ್‌ ಜೋಸೆಫ್‌ ಕಾಲೇಜ್‌ ಆಫ್‌ ಕಾಮರ್ಸ್‌ ಇದರ ಆಡಳಿತ ಮಂಡಳಿಯ ಮಾಜಿ ಉಪಾಧ್ಯಕ್ಷೆ ರೆಬೆಕ್ಕಾ ಫ್ಲೋರೆನ್ಸ್‌, ಬಾಲ್ಡ್ವಿನ್‌ ಮೆಥಾಡಿಸ್ಟ್‌ ಕಾಲೇಜಿನ ಮಾಜಿ ವಿದ್ಯಾರ್ಥಿ ಕೌನ್ಸಿಲ್‌ ಅಧ್ಯಕ್ಷ ನಿಸ್‌ ಜಿಯೋ ಮತ್ತು ಡೆಲ್ರಾಯ್ಸ್‌ ಬಾಯ್ಸ್‌ ಗ್ರೂಪ್‌ ಇದರಲ್ಲಿ ಈ ಹಿಂದೆ ಇದ್ದ ಹರ್ಷಿಲ್‌ ಜೆ ಶಾ ಇದ್ದರು.

ಆದರೆ ಈ ನಾಟಕವನ್ನು ಎಂಸಿಸಿ ಶಿಕ್ಷಕರ ಮುಂದೆ ಪ್ರದರ್ಶಿಸಲಾಗಿತ್ತೇ ಎಂಬುದು ತಿಳಿದಿಲ್ಲ. ಈ ನಾಟಕದ ಪ್ರದರ್ಶಕರನ್ನು ಅನರ್ಹಗೊಳಿಸುವಂತೆ ಅಂಡರ್‌25 ತೀರ್ಪುಗಾರರ ಬಳಿ ಕೇಳಿದಾಗ ಈ ನಾಟಕ ʼಡಾರ್ಕ್‌ ಹ್ಯೂಮರ್‌ʼ ಆಗಿದೆ ಹಾಗೂ ಅದರಲ್ಲಿ ತಪ್ಪೇನಿಲ್ಲ ಎಂದಿದ್ದರೆಂದು ಹೇಳಲಾಗಿದೆ. ಆದರೆ ನಾಟಕವನ್ನು ವಿರೋಧಿಸಿ ಸಂಸ್ಥೆಯನ್ನು ಕೆಲ ಸದಸ್ಯರು ತೊರೆದಿದ್ದರೆಂದು ಹೇಳಲಾಗಿದೆ.

ಈ ನಾಟಕ ಪ್ರದರ್ಶನದ ಹಿಂದೆ ಮೌಂಟ್‌ ಕಾರ್ಮೆಲ್‌ ಕಾಲೇಜು ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರೂ ಪ್ರತಿಕ್ರಿಯಿಸಿಲ್ಲ.

ಈ ಸಂಬಂಧ ಸೋಮವಾರ ಬಂಧಿತರಾಗಿರುವ ಜೈನ್‌ ಯುನಿವರ್ಸಿಟಿ ಪ್ರಾಂಶುಪಾಲ ಡಾ ದಿನೇಶ್‌ ನೀಲಕಂಠ, ವಿದ್ಯಾರ್ಥಿಗಳು ಹಾಗೂ ಯುವಜನೋತ್ಸವ ಆಯೋಜಕರ ಸಹಿತ ಒಂಬತ್ತು ಮಂದಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

share
Next Story
X