ಪಡು: ವೀರಮ್ಮ-ಕಾಂತಪ್ಪ ಪೂಜಾರಿ ಸ್ಮಾರಕ ಬಸ್ ತಂಗುದಾಣ ಉದ್ಘಾಟನೆ

ಮಂಗಳೂರು: ಜೀವನದಲ್ಲಿ ಸಮಾಜಮುಖಿ ಚಿಂತನೆಯೊಂದಿಗೆ ಬೆಳೆದಾಗ ನಮ್ಮಲ್ಲಿ ಧನಾತ್ಮಕ ಮನಸ್ಥಿತಿ, ಚೈತನ್ಯ ಜಾಗೃತವಾಗುತ್ತದೆ. ಈ ನಿಟ್ಟಿನಲ್ಲಿ ಮಂಡಲ ಪಂಚಾಯತ್ ಮಾಜಿ ಉಪಾಧ್ಯಕ್ಷ ದಿ.ಪಿ.ಕಾಂತಪ್ಪ ಪೂಜಾರಿ ಕುಟುಂಬಸ್ಥರು ಮಾಡಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ನಗರ ಹೊರವಲಯದ ನೀರುಮಾರ್ಗ ಸಮೀಪದ ಪಡುವಿನಲ್ಲಿ ದಿ. ವೀರಮ್ಮ ಮತ್ತು ಪಿ. ಕಾಂತಪ್ಪ ಪೂಜಾರಿ ಸ್ಮಾರಕ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯದಲ್ಲಿ ಹಿಂದಿನ ಸಂಕಷ್ಟ ಕಾಲದಲ್ಲಿ ಕಾಂತಪ್ಪ ಪೂಜಾರಿಯವರಂತಹ ಹಿರಿಯರು ಪರಿಶ್ರಮಪಟ್ಟು ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಅಂತಹ ವ್ಯಕ್ತಿಗಳು ನಮಗೆ ಮಾದರಿಯಾಗಿದ್ದಾರೆ. ಅವರ ಸ್ಮರಣಾರ್ಥ ಕುಟುಂಬ ವರ್ಗ ಸುವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಅತಿಥಿಗಳಾಗಿ ಉದ್ಯಮಿ ಶೈಲೇಂದ್ರ ವೈ. ಸುವರ್ಣ, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಗೋಕುಲ್ದಾಸ್ ಶೆಟ್ಟಿ, ಬದಿನಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಭಂಡಾರಿ ಮಜಲು, ವ್ಯವಸ್ಥಾಪನಾ ಸಮಿತಿ ಸದಸ್ಯ ಕೇಶವ ಪೂಜಾರಿ, ಶಶಿ ಕರಂದಾಡಿ, ಯುವ ವಾಹಿನಿ ಮಾಜಿ ಅಧ್ಯಕ್ಷ ಯಶವಂತ್ ಪೂಜಾರಿ, ಪತ್ರಕರ್ತ ವಿಜಯ್ ಕೋಟ್ಯಾನ್ ಪಡು, ಗ್ರಾಪಂ ಸದಸ್ಯರಾದ ಕಿಶೋರ್ ಕುಮಾರ್, ಸಚಿನ್ ಹೆಗ್ಡೆ ಹೊಸಮನೆ, ಹರೀಶ್ ಹೊಸಮನೆ, ಚೇತನ್ ನೀರುಮಾರ್ಗ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಯಶ್ವಿನ್ ಸತ್ತಿಕಲ್ಲು, ಕಾರ್ಯಕ್ರಮ ಸಂಯೋಜಕರಾದ ಬಾಲಕೃಷ್ಣ ಪಚ್ಚನಾಡಿ, ನಾಗೇಶ್ ಪಿಲ್ಚಂಡಿ, ಕೇಶವ ಪೂಜಾರಿ, ಶೈಲೇಶ್ ಕುಳೂರು, ದಿನಕರ್ ಅಬ್ಬೆಟ್ಟು, ತುಷಾರ್ ಸುರತ್ಕಲ್ ಉಪಸ್ಥಿತರಿದ್ದರು.