ಮಂಗಳೂರು: ಶಿವರಾತ್ರಿ ಪ್ರಯುಕ್ತ ಮುಸ್ಲಿಮರಿಂದ ಸಿಹಿತಿಂಡಿ ವಿತರಣೆ

ಮಂಗಳೂರು: ನಗರದ ಬಂದರ್ ಕಂದಕ್ ಪ್ರದೇಶದ ಬದ್ರಿಯಾ ಜಂಕ್ಷನ್ ವಠಾರದಲ್ಲಿ ಶಿವರಾತ್ರಿ ಪ್ರಯುಕ್ತ ನಿತ್ಯಾನಂದ ಆಶ್ರಮದ ವತಿಯಿಂದ ವರ್ಷಂಪ್ರತಿ ನಡೆಯುವ ಶೋಭಾಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಕಂದಕ್ ಪ್ರದೇಶದ ಮುಸ್ಲಿಂ ಜಮಾತಿನ ಸದಸ್ಯರು ಸಿಹಿತಿಂಡಿ ಹಾಗೂ ತಂಪು ಪಾನೀಯವನ್ನು ವಿತರಿಸಿದರು.
ಶನಿವಾರ ರಾತ್ರಿ ನಡೆದ ಈ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಅಬ್ದುಲ್ ಲತೀಫ್, ಕಂದಕ್ ಮುಸ್ಲಿಂ ಜಮಾತಿನ ಸದಸ್ಯರಾದ ಆಸೀಫ್, ಅಶ್ರಫ್, ಅಲ್ತಾಫ್ ಕೆಪಿ, ಮುಸ್ತಫಾ, ಕಾಸಿಂ ಸಾಲಿ, ಇರ್ಫಾನ್, ಫಯಾಝ್, ಮುಖ್ತಾರ್, ಸಫ್ವಾನ್, ಯಾಸೀರ್, ಇಬ್ರಾಹಿಂ ಉಸ್ಮಾನ್ ಹಕೀಂ, ಫಾರೂಕ್, ನಿಝಾಮುದ್ದೀನ್, ಶಾಝ್, ರಿಲ್ವಾನ್ ಅವರೊಂದಿಗೆ ಶ್ರೀ ನಿತ್ಯಾನಂದ ಆಶ್ರಮ ಸಮಿತಿಯ ಹನುಮಂತ ಕಾಮತ್, ರೋಹಿತ್, ಸದಾಶಿವ ಶೆಟ್ಟಿ, ಹರೀಶ್, ರಾಜ, ಕಮಲಾಕ್ಷ, ರವಿ, ಶೈಲೇಶ್, ಕಾರ್ತಿಕ್ ಉಪಸ್ಥಿತರಿದ್ದರು.