ಪ್ರಿಯದರ್ಶಿನಿ ಸೋಷಿಯಲ್ ಸರ್ವಿಸ್ ಟ್ರಸ್ಟ್ನ ಕಚೇರಿ ಉದ್ಘಾಟನೆ

ಮಂಗಳೂರು: ಸಮಾಜ ಸೇವೆಯನ್ನು ಧ್ಯೇಯವಾಗಿರಿಸಿಕೊಂಡು ಸ್ಥಾಪಿಸಲಾದ ಪ್ರಿಯದರ್ಶಿನಿ ಸೋಷಿಯಲ್ ಸರ್ವಿಸ್ ಟ್ರಸ್ಟ್ ಮಂಗಳೂರು (ರಿ) ಇದರ ನೂತನ ಕಾರ್ಯಾಲಯ ನಗರದ ಬಿಜೈ ನ್ಯೂರೋಡ್ ಬಳಿಯ ಪಿ.ಎಲ್. ಎನ್ಕ್ಲೇವ್ನಲ್ಲಿ ರವಿವಾರ ಉದ್ಘಾಟನೆಗೊಂಡಿತು.
ಮುಡಾ ಮಾಜಿ ಅಧ್ಯಕ್ಷ ಕೆ.ಸುರೇಶ್ ಬಳ್ಳಾಲ್ ಕಚೇರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಿಸ್ವಾರ್ಥ ಸೇವಾ ಮಾನೋಭಾವನೆಯಿಂದ ಸಮಾಜದ ಒಗ್ಗಟ್ಟು, ಸಾಮರಸ್ಯ ಕಾಪಾಡಲು ಸ್ಥಾಪಿಸಿರುವ ಟ್ರಸ್ಟ್ನ ಉದ್ದೇಶ ಮತ್ತು ಸೇವೆ ಮಹತ್ವವಾದದ್ದು. ಟ್ರಸ್ಟ್ನ ಸಮಾಜಮುಖಿ ಕಾರ್ಯಗಳು ಇತರೆ ಟ್ರಸ್ಟ್ಗಳಿಗೆ ಮಾದರಿಯಾಗಲಿ. ನಗರದೆಲ್ಲೆಡೆ ಇನ್ನಷ್ಟು ಶಾಖೆಗಳನ್ನು ತೆರೆಯಲಿ. ಈ ನಿಟ್ಟಿನಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.
ಟ್ರಸ್ಟ್ನ ಲೋಗೊ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಇಂದಿರಾ ಗಾಂಧಿ ಅವರು ಜನಪರ ಹಾಗೂ ರಾಷ್ಟ್ರ ಕೇಂದ್ರೀಕೃತ ನೀತಿಗಳಿಂದ ಜನಪ್ರಿಯವಾಗಿದ್ದರು. ಬ್ಯಾಂಕುಗಳ ರಾಷ್ಟ್ರೀಕರಣ, ಹಸಿರು ಕ್ರಾಂತಿಯ ಮೂಲಕ ದೇಶದ ಆರ್ಥಿಕಾಭಿವೃದ್ಧಿಗೆ ಶಕ್ತಿ ತುಂಬಿದವರು. ಅವರ ಹೆಸರಿನಲ್ಲಿ ಸೇವಾ ಕಾರ್ಯದ ಉದ್ದೇಶವಿಟ್ಟು ಟ್ರಸ್ಟ್ ಸ್ಥಾಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭ ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಬಿ.ಜಿ. ಸುವರ್ಣ, ಪ್ರಭಾಕರ್ ಶ್ರೀಯಾನ್, ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್, ಮಾಜಿ ಮೇಯರ್ ಮಹಾಬಲ ಮಾರ್ಲ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ, ಮನಪಾ ಸದಸ್ಯರಾದ ಭಾಸ್ಕರ್ ಮೊಯ್ಲಿ, ಎ.ಸಿ.ವಿನಯರಾಜ್, ಮಾಜಿ ಉಪ ಮೇಯರ್ ಮುೂಹಮ್ಮದ್ ಕುಂಜತ್ತಬೈಲ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬಿ.ಪಿ. ಆಚಾರ್ಯ, ಯೂಸುಫ್ ಖಾದರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ವಿಪಕ್ಷ ನಾಯಕ ನವೀನ್ ಆರ್.ಡಿಸೋಜ, ಸದಸ್ಯರಾದ ಲ್ಯಾನ್ಸ್ ಲಾಟ್ ಪಿಂಟೊ, ಕೇಶವ ಮರೋಳಿ, ರಾಜೇಶ್ ಕದ್ರಿ, ಟ್ರಸ್ಟ್ನ ಕೋಶಾಧಿಕಾರಿ ರಾಕೇಶ್ ದೇವಾಡಿಗ, ಸದಸ್ಯ ಗಿರೀಶ್ ಶೆಟ್ಟಿ, ಸುನೀಲ್ ಪೂಜಾರಿ, ಮಂಜುಳಾ ನಾಯಕ್, ರೂಪಾ ಚೇತನ್, ಶಾಂತಲಾ ಗಟ್ಟಿ, ಮೀನಾ ಟೆಲ್ಲಿಸ್, ಯೋಗಿಶ್ ನಾಯಕ್, ಸಮರ್ಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಪ್ರಿಯದರ್ಶಿನಿ ಸೋಷಿಯಲ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಬಿ. ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ರಘುರಾಜ್ ಕದ್ರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ವಂದಿಸಿದರು.







