ಮಂಗಳೂರು: ಫೆ.22ರಿಂದ ರಾಜಹಂಸ ಹೊಸ ಸಾರಿಗೆ ಪ್ರಾರಂಭ

ಮಂಗಳೂರು, ಫೆ.20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನಗರದಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಪೊಲೆಂಕಾನ ಕೋನ, ಮಡಗಾಂವ್, ಪೋಂಡ, ಮಂಗೇಶಿ, ಪಣಜಿಗೆ ತೆರಳುವ ಹಾಗೂ ಬರುವ ಪಣಜಿ, ಕೊರ್ಟಾಲಿಂ, ಮಡಗಾಂವ್, ಕಾನಕೋನ, ಪೊಲೆಂ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಮಣಿಪಾಲ, ಉಡುಪಿ ಮಾರ್ಗವಾಗಿ ರಾಜಹಂಸ ಹೊಸ ಸಾರಿಗೆಯನ್ನು ಫೆ.22ರಿಂದ ಪ್ರಾರಂಭಿಸಲಿದೆ.
ಸಾರಿಗೆಯು ಮಂಗಳೂರು ಬಸ್ ನಿಲ್ದಾಣದಿಂದ ರಾತ್ರಿ 9ಕ್ಕೆ ಹೊರಟು ಉಡುಪಿಯಲ್ಲಿ 10:15ರಿಂದ 10:30ರವರೆಗೆ, ಕುಂದಾಪುರಕ್ಕೆ 11:15ಕ್ಕೆ ತಲುಪಲಿದೆ. ಭಟ್ಕಳಕ್ಕೆ 12:15ಕ್ಕೆ ಹೊರಟು ಹೊನ್ನಾವರ 12:45, ಅಂಕೋಲಾಕ್ಕೆ ರಾತ್ರಿ 2ಕ್ಕೆ ತಲುಪಲಿದೆ. ಕಾರವಾರದಲ್ಲಿ 2:30 ರಿಂದ 2:45ರವರೆಗೆ, ಪಣಜಿಗೆ ಮುಂಜಾವ 5:30ಕ್ಕೆ ತಲುಪಲಿದೆ.
ಮರು ಪ್ರಯಾಣದಲ್ಲಿ ಪಣಜಿಯಿಂದ ರಾತ್ರಿ 8ಕ್ಕೆ ಹೊರಟು ಮಡಗಾಂವ್ಗೆ 8:45, ಕಾರವಾರಕ್ಕೆ 9:45, ಕುಮಟಾಕ್ಕೆ 1145, ಭಟ್ಕಳಕ್ಕೆ 1:15ಕ್ಕೆ ತಲುಪಲಿದೆ. ಕುಂದಾಪುರಕ್ಕೆ 2, ಉಡುಪಿಗೆ 3, ಮಂಗಳೂರಿಗೆ ಮುಂಜಾನೆ 4ಕ್ಕೆ ತಲುಪಲಿದೆ.
ಮಂಗಳೂರಿನಿಂದ ಪಣಜಿಗೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ದರ 620 ರೂ., ಉಡುಪಿಯಿಂದ ಪಣಜಿಗೆ 590 ರೂ., ಕುಂದಾಪುರದಿಂದ ಪಣಜಿಗೆ 570 ರೂ.ಗಳಾಗಿದೆ. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆಯೂ ಇದೆ.
ಮಾಹಿತಿಗೆ ಹತ್ತಿರದ ರಿಸರ್ವೇಶನ್ ಕೌಂಟರ್ ಹಾಗೂ ಮೊ.ಸಂ: ಮಂಗಳೂರು ಬಸ್ಸು ನಿಲ್ದಾಣ- 7760990720, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್-9663211553, ಉಡುಪಿ ಡಾ.ವಿ.ಎಸ್. ಆಚಾರ್ಯ ಬಸ್ ನಿಲ್ದಾಣ- 7795984182, ಉಡುಪಿ ಬಸ್ ನಿಲ್ದಾಣ-9663266400 ಹಾಗೂ ಕುಂದಾಪುರ ಬಸ್ ನಿಲ್ದಾಣ- 9663266009ನ್ನು ಸಂಪರ್ಕಿಸುವಂತೆ ಕರಾರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟನೆ ತಿಳಿಸಿದೆ.