Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿವೃತ್ತ ಗೂರ್ಖಾ ಸೈನಿಕನ ಪೌರತ್ವ...

ನಿವೃತ್ತ ಗೂರ್ಖಾ ಸೈನಿಕನ ಪೌರತ್ವ ಪ್ರಶ್ನಿಸಿದ ಚುನಾವಣಾಧಿಕಾರಿಗೆ ಗುವಾಹಟಿ ಹೈಕೋರ್ಟ್ ದಂಡ

24 Feb 2023 8:32 PM IST
share
ನಿವೃತ್ತ ಗೂರ್ಖಾ ಸೈನಿಕನ ಪೌರತ್ವ ಪ್ರಶ್ನಿಸಿದ ಚುನಾವಣಾಧಿಕಾರಿಗೆ ಗುವಾಹಟಿ ಹೈಕೋರ್ಟ್ ದಂಡ

ಗುವಾಹಟಿ, ಫೆ. 24: ನಿವೃತ್ತ ಗೂರ್ಖಾ ಸೈನಿಕರೊಬ್ಬರ ಪೌರತ್ವವನ್ನು ಪ್ರಶ್ನಿಸಿ ಅವರನ್ನು ವಿದೇಶೀಯರ ನ್ಯಾಯಮಂಡಳಿಯ ವಿಚಾರಣೆಗೆ ಶಿಫಾರಸು ಮಾಡಿರುವ ಚುನಾವಣಾ ನೋಂದಣಾಧಿಕಾರಿಗೆ ಗುವಾಹಟಿ ಹೈಕೋರ್ಟ್ 10,000 ರೂಪಾಯಿ ದಂಡ ವಿಧಿಸಿದೆ ಎಂದು ‘ಈಸ್ಟ್ ಮೋಜೊ’ ಗುರುವಾರ ವರದಿ ಮಾಡಿದೆ.

ಫೆಬ್ರವರಿ 20ರಂದು ತೀರ್ಪು ನೀಡಿರುವ ಹೈಕೋರ್ಟ್, ದಿಸ್ಪುರ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಛೀಮಾರಿ ಹಾಕಿತು ಮತ್ತು 85 ವರ್ಷದ ಜಗತ್ ಬಹಾದುರ್ ಚೇತ್ರಿಯನ್ನು ಅಕ್ರಮ ವಲಸಿಗ ಎಂಬುದಾಗಿ ಘೋಷಿಸಿದ ವಿದೇಶೀಯರ ನ್ಯಾಯಮಂಡಳಿಯ 2012ರ ತೀರ್ಪನ್ನು ರದ್ದುಪಡಿಸಿತು.

ಚೇತ್ರಿ ಗುವಾಹಟಿಯಲ್ಲಿರುವ ನರೆಂಗಿ ಸೇನಾ ಕಂಟೋನ್ಮಂಟರ್ ವ್ಯಾಪ್ತಿಯಲ್ಲಿ ಬರುವ ಸತ್ಗಾಂವ್ ಎಂಬಲ್ಲಿರುವ ಭಾರತೀಯ ಸೇನೆಯ 14 ಫೀಲ್ಡ್ ಸ್ಫೋಟಕ ಡಿಪೊದಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತಿ ಹೊಂದಿದ್ದರು. 1997ರಲ್ಲಿ ಪ್ರಕಟಗೊಂಡ ಮತದಾರರ ಪಟ್ಟಿಯಲ್ಲಿ ಅವರನ್ನು ‘ಡಿ-ವೋಟರ್’ ಅಂದರೆ ಸಂಶಯಾಸ್ಪದ ಮತದಾರ ಎಂಬುದಾಗಿ ಗುರುತಿಸಲಾಗಿತ್ತು.

ಚೇತ್ರಿ 1937ರಲ್ಲಿ ಅಸ್ಸಾಮ್ನ ದಿಬ್ರೂಗಢ್ನಲ್ಲಿ ಜನಿಸಿದರು ಎಂಬುದಾಗಿ ಇನ್ನೋರ್ವ ಸರಕಾರಿ ಅಧಿಕಾರಿ ಖಚಿತಪಡಿಸಿದ ಹೊರತಾಗಿಯೂ, ಚುನಾವಣಾಧಿಕಾರಿಯು ಅವರನ್ನು ‘ಡಿ-ವೋಟರ್’ ಎಂಬುದಾಗಿ ಗುರುತಿಸಿದ್ದರು.

‘‘ಅರ್ಜಿದಾರನನ್ನು ವಿದೇಶೀಯರ ನ್ಯಾಯಮಂಡಳಿಗೆ ಶಿಫಾರಸು ಮಾಡಿರುವುದು, 52 ದಿಸ್ಪುರ್ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಾಣಾಧಿಕಾರಿಯ ದಿವ್ಯ ನಿರ್ಲಕ್ಷವಾಗಿದೆ. ಆ ಅಧಿಕಾರಿಯು ತನ್ನ ತಲೆಯನ್ನು ಉಪಯೋಗಿಸಲೇ ಇಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ’’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

1985ರ ಅಸ್ಸಾಮ್ ಒಪ್ಪಂದದ ಪ್ರಕಾರ, 1971 ಮಾರ್ಚ್ 25ರ ಬಳಿಕ ಅಸ್ಸಾಮ್ ಪ್ರವೇಶಿಸಿದವರನ್ನು, ಅವರ ಬಳಿ ತಾವು ಅಕ್ರಮ ವಲಸಿಗರು ಅಲ್ಲ ಎನ್ನುವುದನ್ನು ಸಾಬೀತುಪಡಿಸುವ ದಾಖಲೆಗಳು ಇಲ್ಲದಿದ್ದರೆ ಅಕ್ರಮ ವಲಸಿಗರು ಎಂಬುದಾಗಿ ಘೋಷಿಸಬಹುದಾಗಿದೆ.

► ‘ವಿದೇಶೀಯರ ನ್ಯಾಯಮಂಡಳಿಯ ವಿಚಾರಣೆ ನನ್ನ ಗೂರ್ಖಾ ಜನಾಂಗಕ್ಕೆ ಮಾಡಿದ ಅವಮಾನ’

‘‘ನನ್ನನ್ನು ವಿದೇಶೀಯರ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಒಳಪಡಿಸಿರುವುದು ನನ್ನ ಗೂರ್ಖಾ ಜನಾಂಗೀಯ ಗುರುತಿಗೆ ಮಾಡಿದ ಅವಮಾನವಾಗಿದೆ. ನಾನು ಭಾರತೀಯನಾಗಿ ಜನಿಸಿದ್ದೇನೆ. ಇನ್ನು ಭಾರತೀಯನಾಗಿಯೇ ಸಾಯಲು ಸಂತೋಷಪಡುತ್ತೇನೆ’’ ಎಂದು ‘ಈಸ್ಟ್ ಮೋಜೊ’ ಜೊತೆಗೆ ಮಾತನಾಡಿದ ಚೇತ್ರಿ ಹೇಳಿದರು.

share
Next Story
X