Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. 550 ಗಂಟೆ ಯಶಸ್ವಿಯಾಗಿ ವಿಮಾನ ಹಾರಿಸಿದ...

550 ಗಂಟೆ ಯಶಸ್ವಿಯಾಗಿ ವಿಮಾನ ಹಾರಿಸಿದ ಹಿಜಾಬ್‌ ಧಾರಿ ಸಯೀದಾ ಸಲ್ವಾ ಫಾತಿಮಾ

ಹಳೆ ಹೈದರಾಬಾದ್ ನಲ್ಲಿ ಶಿಕ್ಷಣಕ್ಕಾಗಿ ಹೋರಾಟದಿಂದ ಏರ್‌ಬಸ್-320 ಹಾರಾಟದ ವರೆಗಿನ ಯಶೋಗಾಥೆ

28 Feb 2023 12:52 PM IST
share
550 ಗಂಟೆ ಯಶಸ್ವಿಯಾಗಿ ವಿಮಾನ  ಹಾರಿಸಿದ ಹಿಜಾಬ್‌ ಧಾರಿ ಸಯೀದಾ ಸಲ್ವಾ ಫಾತಿಮಾ
ಹಳೆ ಹೈದರಾಬಾದ್ ನಲ್ಲಿ ಶಿಕ್ಷಣಕ್ಕಾಗಿ ಹೋರಾಟದಿಂದ ಏರ್‌ಬಸ್-320 ಹಾರಾಟದ ವರೆಗಿನ ಯಶೋಗಾಥೆ

ಹೈದರಾಬಾದ್: ಕೆಲ ತಿಂಗಳ ಹಿಂದೆ ಹಿಜಾಬ್ ಧರಿಸಿ ಶಾಲೆಗೆ ಹಾಜರಾಗುವುದು ದೇಶಾದ್ಯಂತ ವಿವಾದದ ಸ್ವರೂಪ ಪಡೆದಿತ್ತು. ಆದರೆ, ಇಲ್ಲೊಬ್ಬ ಹಿಜಾಬ್‌ಧಾರಿ ಮಹಿಳೆಯು ಎರಡು ಸೀಟುಗಳ ಸೆಸ್ನಾದಿಂದ ಪ್ರಾರಂಭಿಸಿ, ಇದೀಗ ಏರ್‌ಬಸ್-320 ವಿಮಾನವನ್ನು 550 ಗಂಟೆಗಳ ಕಾಲ ಯಶಸ್ವಿಯಾಗಿ ಹಾರಿಸಿರುವ ಸಾಧನೆ ಹೈದರಾಬಾದ್‌ನಿಂದ ವರದಿಯಾಗಿದೆ. 2015-16ರಲ್ಲೇ ಸಲ್ವಾ ಪೈಲಟ್‌ ಆಗಿ ಆಯ್ಕೆಯಾಗಿದ್ದರು.

34 ವರ್ಷದ ಸೈಯೀದಾ ಸಲ್ವಾ ಫಾತಿಮಾರ ಈ ಸಾಧನೆ ಸುಲಭ ಸಾಧ್ಯವೇನೂ ಆಗಿರಲಿಲ್ಲ. ಹಳೆಯ ಹೈದರಾಬಾದ್ ಮೂಲದ ಫಾತಿಮಾ ಈ ಹಾದಿಯಲ್ಲಿ ಹೋರಾಟ ನಡೆಸಿ, ಈಗ ಆಕಾಶವೇ ಮಿತಿ ಎಂಬಂತೆ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾರೆ ಎಂದು timesofindia.com ವರದಿ ಮಾಡಿದೆ.

ಹಳೆಯ ಹೈದರಾಬಾದ್‌ನಲ್ಲಿ ಜನಿಸಿದ ಫಾತಿಮಾ ಬೇಕರಿ ಉದ್ಯೋಗಿಯೊಬ್ಬರ ಮಗಳಾಗಿ ಕಡು ಬಡತನದಲ್ಲೇ ಬೆಳೆದು ಬಂದವರು. ಈಗಲೂ ಕೊಳಾಯಿ ನೀರು ಮರೀಚಿಕೆಯೇ ಆಗಿರುವ ಮೊಘಲ್‌ಪುರದ ನೆರೆ ಊರಿನವರಾದ ಫಾತಿಮಾರ ಕನಸಿಗೆ ಮಾತ್ರ ಯಾವುದೇ ಮಿತಿ ಇರಲಿಲ್ಲ. ಇಂತಹ ಫಾತಿಮಾ ವಾಣಿಜ್ಯ ವಿಮಾನಗಳ ಪೈಲಟ್ ಪರವಾನಗಿ ಹೊಂದಿರುವ ಕೆಲವೇ ಮುಸ್ಲಿಂ ಮಹಿಳೆಯರ ಪೈಕಿ ಒಬ್ಬರಾಗಿ ಹೊಮ್ಮಿದ್ದಾರೆ.

ಈ ಹಿಜಾಬ್‌ಧಾರಿ ಪೈಲಟ್ ಮಹಿಳೆಯು ತನ್ನ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದರು ಮತ್ತು ಸಮಾಜದ ತೀವ್ರ ಸಾಂಪ್ರದಾಯಿಕತೆಗೆ ಹಿಂಜರಿಯಲು ನಿರಾಕರಿಸಿದರು ಅಥವಾ ಆರ್ಥಿಕ ಮುಗ್ಗಟ್ಟಿಗೆ ತಲೆ ಬಾಗಲಿಲ್ಲ. ಇಂತಹ ಫಾತಿಮಾರ ತಂದೆ ಸೈಯದ್ ಅಶ್ಫಾಕ್ ಅಹಮದ್ ತಮ್ಮ ಮಗಳನ್ನು ಪ್ರೀತಿಯಿಂದ "ಅದ್ಭುತ ಹುಡುಗಿ" ಎಂದು ಶ್ಲಾಘಿಸುತ್ತಾರೆ ಮತ್ತು ಆ ಮಾತಿನಲ್ಲಿ ಅರ್ಥವೂ ಇದೆ. 

ಮಾಲಕ್‌ಪೇಟೆಯ ಐಝಾದ ನಿಯೊ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಶುಲ್ಕ ತೆರಲು ಸಾಧ್ಯವಾಗದೆ ಫಾತಿಮಾ ಶಾಲೆ ತೊರೆಯುವ ಹಂತದಲ್ಲಿದ್ದರು. ಆದರೆ, ಆ ಶಾಲೆಯ ಪ್ರಾಂಶುಪಾಲೆ ಅಲಿಫಾ ಹುಸೇನ್, ಆಕೆಯ ಪಾಲಿಗೆ ರಕ್ಷಕಿಯಾದರು ಮತ್ತು ಅತ್ಯಂತ ಪ್ರಮುಖವಾಗಿದ್ದ ಎರಡು ವರ್ಷಗಳ ವ್ಯಾಸಂಗಕ್ಕೆ ಹಣ ಒದಗಿಸಿದರು.

ಫಾತಿಮಾ ತನ್ನ ಪೋಷಕರಿಗೆ ಹಿರಿಯ ಮಗಳಾಗಿದ್ದು, ಸ್ಥಳೀಯ ಬೇಕರಿಯಲ್ಲಿ ಕಾರ್ಯನಿರ್ವಹಿಸುವ ಆಕೆಯ ತಂದೆಯ ಗಳಿಕೆ ತೀರಾ ಗೌಣವಾಗಿದೆ. ಫಾತಿಮಾ ಮೆಹ್ದಿಪಟ್ನಂನ ಸೇಂಟ್ ಆ್ಯನ್ಸ್ ಜೂನಿಯರ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ವ್ಯಾಸಂಗ ಮಾಡುವಾಗ ಮತ್ತೆ ಸಂಕಷ್ಟಕ್ಕೆ ತುತ್ತಾದರು. ಕಾಲೇಜಿನ ಶುಲ್ಕವನ್ನು ಭರಿಸಲಾಗದ ಆಕೆ ಮತ್ತೆ ಕಾಲೇಜು ತೊರೆಯುವ ಹಂತದಲ್ಲಿದ್ದರು.

ಶುಲ್ಕ ಪಾವತಿಸದ ಸರತಿಯಲ್ಲಿ ಬಿರುಬಿಸಿಲಿನಲ್ಲಿ ನಿಂತಿದ್ದ ಫಾತಿಮಾರನ್ನು ಸಸ್ಯಶಾಸ್ತ್ರ ಪ್ರಾಧ್ಯಾಪಕಿ ಸಂಗೀತಾ ಗಮನಿಸಿದರು ಮತ್ತು ಆಕೆಯ ಶುಲ್ಕ ಭರಿಸುವ ಹೊಣೆ ಹೊತ್ತುಕೊಂಡರು. ಈ ಕುರಿತು ಪ್ರತಿಕ್ರಿಯಿಸುವ ಫಾತಿಮಾ, "ಆಕೆ ದೇವರೇ ಕಳಿಸಿದ ಅಪದ್ಬಾಂಧವಿ. ನನಗೆ ಆ ಪ್ರಾಧ್ಯಾಪಕಿ ವೈಯಕ್ತಿಕವಾಗಿ ಪರಿಚಯವಿರಲಿಲ್ಲ ಅಥವಾ ಅವರು ನನಗೆ ಬೋಧಿಸಿಯೂ ಇರಲಿಲ್ಲ" ಎಂದು ಸ್ಮರಿಸುತ್ತಾರೆ.

ನಾನು ಕಠಿಣ ದುಡಿಮೆ ಮಾಡುತ್ತೇನೆ ಮತ್ತು ನಾನು ಎದುರಿಸಿದ ಸಂಕಷ್ಟಗಳನ್ನು ನನ್ನ ಮಕ್ಕಳು ಎದುರಿಸದಂತೆ ಖಾತ್ರಿಪಡಿಸಿಕೊಳ್ಳುತ್ತೇನೆ. ನಾನು ನನ್ನ ಹಳೆ ಹೈದರಾಬಾದ್ ಅನ್ನು ತೊರೆದು ಬಂಜಾರಾ ಅಥವಾ ಜ್ಯುಬಿಲಿ ಹಿಲ್ಸ್‌ಗೆ ಸ್ಥಳಾಂತರಗೊಳ್ಳುವುದಿಲ್ಲ ಎಂದು ದೃಢವಾಗಿ ಹೇಳುತ್ತಾರೆ ಫಾತಿಮಾ.

share
Next Story
X