Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಸಾಧಕ' ಎಂದು ಸನ್ಮಾನಿಸಿದ್ದ...

'ಸಾಧಕ' ಎಂದು ಸನ್ಮಾನಿಸಿದ್ದ ಉದ್ಯೋಗಿಯನ್ನೇ ವಜಾಗೊಳಿಸಿದ ಗೂಗಲ್: ತಬ್ಬಿಬ್ಬಾದ ನೌಕರನಿಂದ "ನಾನೇ ಏಕೆ?" ಎಂಬ ಪ್ರಶ್ನೆ

28 Feb 2023 7:41 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಸಾಧಕ ಎಂದು ಸನ್ಮಾನಿಸಿದ್ದ ಉದ್ಯೋಗಿಯನ್ನೇ ವಜಾಗೊಳಿಸಿದ ಗೂಗಲ್: ತಬ್ಬಿಬ್ಬಾದ ನೌಕರನಿಂದ ನಾನೇ ಏಕೆ? ಎಂಬ ಪ್ರಶ್ನೆ

ಹೊಸದಿಲ್ಲಿ: ಕಳೆದ ಕೆಲವು ತಿಂಗಳು ತಂತ್ರಜ್ಞಾನ ಸಂಸ್ಥೆಗಳ ಪಾಲಿಗೆ ಕರಾಳ ದಿನಗಳಾಗಿದ್ದು, ಈ ಅವಧಿಯಲ್ಲಿ ಹಲವಾರು ದೊಡ್ಡ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಿವೆ. ತಂತ್ರಜ್ಞಾನ ದೈತ್ಯ ಸಂಸ್ಥೆಯಾದ ಗೂಗಲ್, ಭಾರತದಲ್ಲೂ ಸುಮಾರು 450 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಗೂಗಲ್‌ನಿಂದ 'ತಾರಾ ಸಾಧಕ' ಎಂದು ಸನ್ಮಾನಕ್ಕೊಳಗಾಗಿದ್ದ ಹೈದರಾಬಾದ್ ಮೂಲದ ಡಿಜಿಟಲ್ ಮಾಧ್ಯಮದ ಹಿರಿಯ ಸಹಾಯಕ ಕೂಡಾ ಸೇರಿದ್ದಾರೆ ಎಂದು ndtv.com ವರದಿ ಮಾಡಿದೆ.

ಗೂಗಲ್‌ನಿಂದ ವಜಾಗೊಳಗಾಗಿರುವ ಆ ಉದ್ಯೋಗಿಯು ಲಿಂಕ್ಡ್‌ಇನ್‌ನಲ್ಲಿ ತನ್ನ ಅಳಲನ್ನು ಸುದೀರ್ಘವಾಗಿ ತೋಡಿಕೊಂಡಿದ್ದಾರೆ. "ಶನಿವಾರ ನನ್ನನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿ ಸ್ವೀಕರಿಸಿದ ಕೂಡಲೇ ನನ್ನ ಹೃದಯ ಬಡಿತ ನಿಂತಂತಾಯಿತು. ಗೂಗಲ್ ನನ್ನನ್ನು ತಿಂಗಳ " ತಾರಾ ಸಾಧಕ" ಎಂದು ಸನ್ಮಾನಿಸಿದ್ದರೂ, ಉದ್ಯೋಗದಿಂದ ವಜಾಗೊಳಿಸಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಶನಿವಾರದಂದು ನನ್ನ ಮೊಬೈಲ್‌ಗೆ ಗೂಗಲ್‌ನ ಕಾರ್ಯನಿರ್ವಹಣಾ ಕೇಂದ್ರದಿಂದ ಪಾಪ್‌-ಅಪ್ ಇಮೇಲ್ ಅಧಿಸೂಚನೆ ಬಂದಿತ್ತು. ಗೂಗಲ್ ಕಾರ್ಯನಿರ್ವಹಣಾ ಕೇಂದ್ರದ ಉದ್ಯೋಗ ಕಡಿತದ ಭಾಗವಾಗಿ ನಾನು ಸಂತ್ರಸ್ತನಾಗಿದ್ದೆ. ಗೂಗಲ್ ಅತ್ಯಂತ ಮೌಲ್ಯಯುತ, ಪ್ರತಿಷ್ಠಿತ ಸಂಸ್ಥೆಯಾಗಿದೆ. ನಾನು ಹೆಮ್ಮೆಯ #Googler ಆಗಿದ್ದು, ಎಂದಿಗೂ ಹಾಗೇ ಇರುತ್ತೇನೆ. ನನ್ನ ಮೊಟ್ಟಮೊದಲ ಪ್ರಶ್ನೆಯೆಂದರೆ, ನಾನು ತಿಂಗಳ ತಾರಾ ಸಾಧಕನಾಗಿದ್ದರೂ ನನ್ನನ್ನೇಕೆ ವಜಾಗೊಳಿಸಲಾಗಿದೆ ಮತ್ತು ನನ್ನನ್ನೇ ಏಕೆ? ಈ ಪ್ರಶ್ನೆಗೆ ನನಗೆ ಯಾವುದೇ ಉತ್ತರ ಕಾಣುತ್ತಿಲ್ಲ" ಎಂದು ಬರೆದುಕೊಂಡಿದ್ದಾರೆ.

ಉದ್ಯೋಗ ಕಡಿತ ಹೇಗೆ ತನ್ನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಹಂಚಿಕೊಂಡಿರುವ ಆ ಉದ್ಯೋಗಿಯು, "ಎರಡು ತಿಂಗಳ ಮಟ್ಟಿಗೆ ಅರ್ಧ ವೇತನ ನೀಡಲಾಯಿತು! ನನ್ನ ಹಣಕಾಸು ಯೋಜನೆಗಳು ಸಂಪೂರ್ಣ ನಾಶವಾದವು. ಇದು ಶನಿವಾರದಂದು ನಡೆದಿದ್ದು, ಈ ವಿಷಯವನ್ನು ಉಳಿದವರೊಂದಿಗೆ ಹಂಚಿಕೊಳ್ಳುವ ಶಕ್ತಿ ಪಡೆಯಲು ನನಗೆ ಎರಡು ದಿನ ಬೇಕಾಯಿತು ಮತ್ತು ನಾನೀಗ ಉಳಿಯಲು ಮತ್ತೆ ಹೋರಾಟ ಮಾಡಬೇಕಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ಜನವರಿಯಲ್ಲಿ ಆಲ್ಫಾಬೆಟ್ ಇಂಕ್ 12,000 ಉದ್ಯೋಗಿಗಳು ಅಥವಾ ತನ್ನ ಮಾನವ ಸಂಪನ್ಮೂಲದ ಶೇ. 6ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಪ್ರಕಟಿಸಿತ್ತು. ಕೆಲವು ಸಿಬ್ಬಂದಿಗಳಿಗೆ ಕಂಪ್ಯೂಟರ್‌ ಪ್ರವೇಶಿಸಲು ಸಾಧ್ಯವಾಗದಾದಾಗಲಷ್ಟೇ ತಾವು ಉದ್ಯೋಗ ಕಳೆದುಕೊಂಡಿದ್ದೇವೆ ಎಂದು ಮನದಟ್ಟಾಗಿತ್ತು. ಈ ಕುರಿತು ಗೂಗಲ್ ಸಿಬ್ಬಂದಿಗಳಿಗೆ ತಿಳಿವಳಿಕೆ ಪತ್ರವೊಂದನ್ನು ರವಾನಿಸಿದ್ದ ಗೂಗಲ್ ಸಿಇಒ ಸುಂದರ್ ಪಿಚ್ಚೈ, ಸಂಸ್ಥೆಯು ತನ್ನ ಉತ್ಪನ್ನಗಳು, ಉದ್ಯೋಗಿಗಳು ಹಾಗೂ ಆದ್ಯತೆಗಳನ್ನು ಮರುಪರಿಶೀಲಿಸಿದ್ದು, ಇದರಿಂದ ಜಗತ್ತು ಹಾಗೂ ತಂತ್ರಜ್ಞಾನ ವಲಯದಾದ್ಯಂತ ಉದ್ಯೋಗ ಕಡಿತಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X