ದಿಲ್ಲಿ ಕ್ಯಾಬಿನೆಟ್ ತೊರೆದ ಬಂಧಿತ ಆಪ್ ಸಚಿವರಾದ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್

ಹೊಸದಿಲ್ಲಿ: ಇತ್ತೀಚೆಗೆ ಸಿಬಿಐನಿಂದ ಬಂಧಿತರಾಗಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಸಚಿವರಾದ ಸತ್ಯೇಂದ್ರ ಜೈನ್ ದಿಲ್ಲಿ ಕ್ಯಾಬಿನೆಟ್ ತೊರೆದಿದ್ದಾರೆ ಎಂದು ndtv.com ವರದಿ ಮಾಡಿದೆ.
ಮನೀಶ್ ಸಿಸೋಡಿಯಾರನ್ನು ಸಿಬಿಐ ಕಸ್ಟಡಿಗೆ ಪಡೆದುಕೊಂಡ ಬಳಿಕ, ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದೆ. ಈ ಬೆಳವಣಿಗೆಯ ಬಳಿಕ ಸಿಸೋಡಿಯಾ ಕ್ಯಾಬಿನೆಟ್ ತೊರೆದಿದ್ದಾರೆ.
Next Story





