ಇಂಡಿಯಾನಾ ಆಸ್ಪತ್ರೆಯ ಹೊಸ ಸಾಧನೆ: ಒಂದೇ ದಿನ ಎರಡು ಅತ್ಯಾಧುನಿಕ ಹೃದ್ರೋಗ ಚಿಕಿತ್ಸೆ

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯು ಒಂದೇ ದಿನದಲ್ಲಿ ಟ್ರಾನ್ಸ್ಕಾತಿಟರ್ ಮಹಾಪಧಮನಿಯ ಕವಾಟದ ಅಳವಡಿಕೆ ಹಾಗೂ ಟ್ರಾನ್ಸ್ಕ್ಯಾತಿಟರ್ ಹೃದಯ ಕವಟು ಬದಲಿ (TAVI/TAVR)ಯ ಅತ್ಯಾಧುನಿಕ ಚಿಕಿತ್ಸೆಯನ್ನು ಒಂದೇ ದಿನದಲ್ಲಿ ಯಶಸ್ವಿಯಾಗಿ ಮುಗಿಸಿದೆ.
ಈ ಎರಡು ಅತ್ಯಾಧುನಿಕ ಚಿಕಿತ್ಸೆಗಳನ್ನು ಆರಂಭಿಸಿ ನಾಲ್ಕು ವರ್ಷ ಪೂರ್ಣಗೊಂಡ ಸಂಕೇತವಾಗಿ ಒಂದೇ ದಿನದಲ್ಲಿ ಇವೆರಡೂ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿರುವುದು ವಿಶೇಷ.
ಹೃದ್ರೋಗದ ಶಸ್ತ್ರಚಿಕಿತ್ಸೆಗೆ ಪರ್ಯಾಯ ಚಿಕಿತ್ಸೆಗಳಾಗಿ ಇದನ್ನು ಇಂಡಿಯಾನ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಇವು ಹೆಚ್ಚು ಸರಳ ಮತ್ತು ಕಡಿಮೆ ನೋವಿನಿಂದ ಕೂಡಿದ ಚಿಕಿತ್ಸೆಯಾಗಿದ್ದು, ಹೃದಯ ಶಸ್ತ್ರಚಿಕಿತ್ಸೆ (ಓಪನ್ ಹಾರ್ಟ್ ಸರ್ಜರಿ)ಗೆ ಹೋಲಿಸಿದರೆ ತೀರಾ ಕಡಿಮೆ ಖರ್ಚಿನದ್ದಾಗಿದೆ.
TAVI/TAVR ಹೃದಯ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ 2019ರಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಇಂಡಿಯಾನ ಆಸ್ಪತ್ರೆಯಲ್ಲಿ ಆರಂಭಿಸಲಾಗಿತ್ತು. ಆ ಬಳಿಕ 2020ರಲ್ಲಿ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಮಿಟ್ರಲ್ ರಿಪ್ಲೇಸ್ಮೆಂಟ್ ಅನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಶ್ರೇಯಸ್ಸನ್ನು ಕೂಡ ಇಂಡಿಯಾನ ಆಸ್ಪತ್ರೆ ತನ್ನದಾಗಿಸಿಕೊಂಡಿತು.
ಭಾರತದಲ್ಲಿ ಹೃದ್ರೋಗದ ಹೆಚ್ಚಳವು ಜನರನ್ನು ಹೆಚ್ಚು ಆತಂಕಕ್ಕೀಡು ಮಾಡಿತ್ತು. ಆದರೆ ಇದೀಗ ಅತ್ಯಾಧುನಿಕ ಚಿಕಿತ್ಸೆಯಿಂದಾಗಿ ಸನ್ನಿವೇಶ ಬದಲಾಗಿದೆ. ಜನರು ಮೊದಲಿನಂತೆ ಆತಂಕ ಪಡುತ್ತಿಲ್ಲ. ಹೃದ್ರೋಗಕ್ಕೆ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಇಂಡಿಯಾನ ಆಸ್ಪತ್ರೆಯು ಸದಾ ಮುಂದಿದೆ. ನಮ್ಮಲ್ಲಿ ಈವರೆಗೆ ಶಸ್ತ್ರ TAVI/TAVR ಹೃದಯದ ಅಪಧಮನಿ, ಕವಾಟು ಬದಲಿ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್ ಮುಂತಾದ ಹೃದಯ ಶಸ್ತ್ರಚಿಕಿತ್ಸೆಯ ಬದಲಿಗೆ ಈ ಎಲ್ಲ ಪರ್ಯಾಯ ಚಿಕಿತ್ಸೆಗಳೆಲ್ಲವೂ ಶೇ.100 ಯಶಸ್ಸಿನೊಂದಿಗೆ ಕಾರ್ಯಾಚರಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಯೂಸುಫ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯಾನ ಹೃದ್ರೋಗ ಪರಿಣಿತ ವೈದ್ಯರ ತಂಡವು ಅತ್ಯಾಧುನಿಕ ಚಿಕಿತ್ಸೆಗಳ ತಂತ್ರಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಂಡಿದೆ. ಮೆಟ್ರೋ ನಗರಗಳಿಗೆ ಹೋಲಿಸಿದರೆ ತೀರಾ ಕಡಿಮೆ ವೆಚ್ಚದಲ್ಲಿ ಈ ಪ್ರದೇಶದಲ್ಲಿ ರೋಗಿಗಳು ಶಸ್ತ್ರಚಿಕಿತ್ಸೆಯಿಲ್ಲದೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಿದೆ. ಹೀಗಾಗಿಯೇ, ಇಂಡಿಯಾನಾ ಆಸ್ಪತ್ರೆಯು TAVI/TAVR ನಂತಹ ಅತ್ಯಾಧುನಿಕ ಕಾರ್ಯವಿಧಾನಗಳಿಗೆ ಹೆಚ್ಚು ಬೇಡಿಕೆಯಿರುವ ಆಸ್ಪತ್ರೆಯಾಗಿ ಪ್ರಸಿದ್ಧಿ ಪಡೆದಿದೆ ಎಂದು ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.







