Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಉಡುಪಿ ರೈಲು ನಿಲ್ದಾಣದಲ್ಲಿ ವೇಳಾಪಟ್ಟಿ...

ಉಡುಪಿ ರೈಲು ನಿಲ್ದಾಣದಲ್ಲಿ ವೇಳಾಪಟ್ಟಿ ಫಲಕವಿಲ್ಲ

ಅಮೃತ್ ಪ್ರಭು, ಗಂಜಿಮಠಅಮೃತ್ ಪ್ರಭು, ಗಂಜಿಮಠ1 March 2023 1:27 PM IST
share
ಉಡುಪಿ ರೈಲು ನಿಲ್ದಾಣದಲ್ಲಿ  ವೇಳಾಪಟ್ಟಿ ಫಲಕವಿಲ್ಲ

ಕೊಂಕಣ ರೈಲ್ವೆಯ ಎಲ್ಲಾ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್ ಪಕ್ಕದಲ್ಲಿಯೇ ನಿಲ್ದಾಣಕ್ಕೆ ಬರುವ ಹಾಗೂ ಹೋಗುವ (ಉತ್ತರದಿಂದ ದಕ್ಷಿಣಕ್ಕೆ ಹಾಗೂ ದಕ್ಷಿಣದಿಂದ ಉತ್ತರಕ್ಕೆ) ಎಲ್ಲಾ ರೈಲುಗಳ ವಿವರವು ಇರುವ ವೇಳಾಪಟ್ಟಿಯನ್ನು ಹಾಕಿದ್ದಾರೆ. ಆದರೆ ಪ್ರತಿದಿನ ೩೨ ಜೋಡಿ ರೈಲುಗಳು ನಿಲುಗಡೆ ಹೊಂದಿರುವ ಉಡುಪಿ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣವಾದ ಉಡುಪಿಯಲ್ಲಿ ಈ ವೇಳಾಪಟ್ಟಿ ಫಲಕವೇ ಇಲ್ಲ.

ಪ್ರತೀ ವೇಳಾಪಟ್ಟಿ ಫಲಕದಲ್ಲಿ ರೈಲು ಸಂಖ್ಯೆ,  ಹೊರಡುವ ಹಾಗೂ ತಲುಪುವ ಸ್ಥಾನದ ನಿಲ್ದಾಣಗಳ ಹೆಸರು, ಸ್ಟೇಷನ್‌ಗೆ ಆಗಮನ-ನಿರ್ಗಮನ ವೇಳೆ, ರೈಲಿನ ಹೆಸರು, ವಾರದ ಯಾವ ದಿನಗಳಂದು ಬರುತ್ತದೆ, ಯಾವ ಪ್ಲ್ಯಾಟ್ ಫಾರ್ಮಿಗೆ ಬರುತ್ತದೆ,  ನಿಲ್ದಾಣದಿಂದ ಇರುವ ದೂರ, ವಿಶೇಷ ರೈಲುಗಳ ವಿವರ, ರದ್ದಾದ ರೈಲುಗಳ ಸೂಚಿ ಇತ್ಯಾದಿ ಇರುತ್ತದೆ.

ಈ ವೇಳಾಪಟ್ಟಿ ಫಲಕವನ್ನು ನೋಡಿ, ನಾಲ್ಕು ತಿಂಗಳ ಮುಂಚೆಯೇ ರೈಲು ಪ್ರಯಾಣಿಕರು ಮುಂಗಡ ಕಾದಿರಿಸಬೇಕಾದ ಟಿಕೆಟ್ ವಿವರಗಳನ್ನು ಅರ್ಜಿಯಲ್ಲಿ ತುಂಬಿ ಟಿಕೆಟ್ ಬುಕಿಂಗ್ ಮಾಡುತ್ತಾರೆ.

ಅಂತರ್ಜಾಲದ ಮೂಲಕ ಟಿಕೆಟ್ ಕಾದಿರಿಸಬಹುದಾದರೂ, ತಮಗೆ ಬೇಕಾದ ಕೋಚ್ ಹಾಗೂ ಸೀಟುಗಳನ್ನು ಪ್ರಯಾಣಿಕರು ಆರಿಸಲು ಸಾಧ್ಯವಿಲ್ಲ. ಯಾಕೆಂದರೆ ಅಂತರ್ಜಾಲದಲ್ಲಿ ಮೊದಲು ವಿವರಗಳನ್ನು ತುಂಬಿ, ಹಣ ಜಮೆ ಮಾಡಿದ ನಂತರ ಕೋಚ್ ಹಾಗೂ ಸೀಟುಗಳನ್ನು ನಮಗೆ ತಿಳಿಸಲಾಗುತ್ತದೆ. ಅಲ್ಲದೆ ಅಂತರ್ಜಾಲದಲ್ಲಿ ಬುಕಿಂಗ್ ಮಾಡುವಾಗ ನಾವು ವೃದ್ಧರು, ಗರ್ಭಿಣಿಯರು, ರೋಗಿಗಳು ಆಗಿದ್ದಲ್ಲಿ ಕೆಳ ಬರ್ತ್ ಎಂದು ನಮೂದಿಸಿದರೂ, ಅದು ಖಾಲಿ ಇದ್ದರೆ ಮಾತ್ರ ಸಿಗುತ್ತದೆ. ಇಲ್ಲವಾದಲ್ಲಿ ಮಧ್ಯಮ ಅಥವಾ ಮೇಲಿನ ಬರ್ತ್ ಸಿಗುತ್ತದೆ.

ಆದರೆ ಕೌಂಟರ್ ಟಿಕೆಟ್‌ನಲ್ಲಿ, ರೈಲ್ವೆ ಗಣಕಯಂತ್ರದ ಆ್ಯಪ್‌ಗಳಲ್ಲಿ, ಟಿಕೆಟಿಗೆ ಹಣ ನೀಡುವ ಮೊದಲೇ ನಮ್ಮ ಪ್ರಾಶಸ್ತ್ಯದ ಟಿಕೆಟ್ ನಮಗೆ ಸಿಗುತ್ತದೆಯೋ ಇಲ್ಲವೋ ಎಂದು ಮೊದಲೇ ಬುಕಿಂಗ್ ಮಾಸ್ಟರ್‌ನಲ್ಲಿ ಕೇಳಿ ತಿಳಿದುಕೊಳ್ಳಬಹುದಾಗಿದೆ.

ಹೀಗೆ ತೀರಾ ಅಗತ್ಯವಾದ ರೈಲು ವೇಳಾಪಟ್ಟಿಯನ್ನು, ಉಡುಪಿ ರೈಲು ನಿಲ್ದಾಣದಲ್ಲಿ ಪ್ರದರ್ಶಿಸದೆ ಇರುವುದು ರೈಲು ನಿಯಮಾವಳಿಗಳ ಪ್ರಕಾರ ಅಕ್ಷಮ್ಯ ಅಪರಾಧ.

ಉಡುಪಿ ರೈಲು ನಿಲ್ದಾಣವು ಇನ್ನಂಜೆಯಲ್ಲಿದ್ದು, ಉಡುಪಿ ಬಸ್ ನಿಲ್ದಾಣವು ದೂರದಲ್ಲಿರುವುದರಿಂದ, ಉಡುಪಿಯ ಬಸ್ಸು ನಿಲ್ದಾಣದಲ್ಲಿ ಕೂಡ, ರೈಲು ವೇಳಾಪಟ್ಟಿಯನ್ನು ಪ್ರದರ್ಶಿಸಿದರೆ ಉಡುಪಿ ರೈಲು ಪ್ರಯಾಣಿಕರಿಗೆ ತುಂಬಾ ಉಪಯೋಗವಾಗುತ್ತದೆ.

ಅಲ್ಲದೆ ಉಡುಪಿ ರೈಲು ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಕಾರ್ಯಾಚರಿಸುವುದು ಹೊರೆಯಾಗುತ್ತದೆಂದು; ಬೆಳಗ್ಗೆ ಎಂಟರಿಂದ ಮಧ್ಯಾಹ್ನ ಎರಡರ ತನಕ ಕೇವಲ ಒಂದೇ ಒಂದು ಕೌಂಟರನ್ನು ನಡೆಸುತ್ತಿದೆ.

ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ಉಡುಪಿ ರೈಲು ಪ್ರಯಾಣಿಕರ ಇಂತಹ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಕೂಡಲೇ ಪರಿಹಾರ ಒದಗಿಸಲು ಕಾರ್ಯಪ್ರವೃತ್ತರಾಗ ಬೇಕಾಗಿದೆ.

share
ಅಮೃತ್ ಪ್ರಭು, ಗಂಜಿಮಠ
ಅಮೃತ್ ಪ್ರಭು, ಗಂಜಿಮಠ
Next Story
X