Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. PFI ಪ್ರತಿಭಟನೆ, ಜನಸಂಖ್ಯೆ ಏರಿಕೆ ಕುರಿತ...

PFI ಪ್ರತಿಭಟನೆ, ಜನಸಂಖ್ಯೆ ಏರಿಕೆ ಕುರಿತ ವರದಿಗಳನ್ನು ತೆಗೆಯಲು Times Now, Zee Newsಗೆ ಎನ್ ಬಿಡಿಎಸ್ಎ ಆದೇಶ

ವರದಿ ಮಾಡುವಾಗ ಹೆಚ್ಚು ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿದ ಪ್ರಾಧಿಕಾರ

1 March 2023 6:52 PM IST
share
PFI ಪ್ರತಿಭಟನೆ, ಜನಸಂಖ್ಯೆ ಏರಿಕೆ ಕುರಿತ ವರದಿಗಳನ್ನು ತೆಗೆಯಲು Times Now, Zee Newsಗೆ ಎನ್ ಬಿಡಿಎಸ್ಎ ಆದೇಶ
ವರದಿ ಮಾಡುವಾಗ ಹೆಚ್ಚು ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಿದ ಪ್ರಾಧಿಕಾರ

ಹೊಸದಿಲ್ಲಿ: ಪಿಎಫ್ಐನಿಂದ ಪ್ರತಿಭಟನೆ ಮತ್ತು ದೇಶದ ಜನಸಂಖ್ಯೆ ಏರಿಕೆ ಕುರಿತು ವರದಿಗಾಗಿ ಸುದ್ದಿಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್ಬಿಡಿಎಸ್ಎ)ವು ಸುದ್ದಿ ವಾಹಿನಿಗಳಾದ ಟೈಮ್ಸ್ ನೌ ಮತ್ತು ಝೀ ನ್ಯೂಸ್ ವಿರುದ್ಧ ಆದೇಶಗಳನ್ನು ಹೊರಡಿಸಿದೆ.

ಭವಿಷ್ಯದಲ್ಲಿ ಇಂತಹ ವಿಷಯಗಳ ಮೇಲೆ ವರದಿ ಮಾಡುವಾಗ ಹೆಚ್ಚು ಜಾಗರೂಕವಾಗಿರುವಂತೆ ಟೈಮ್ಸ್ ನೌಗೆ ಎಚ್ಚರಿಕೆಯನ್ನು ನೀಡಿರುವ ಪ್ರಾಧಿಕಾರವು, ಪ್ರಸಾರದ ವೀಡಿಯೊ ಮತ್ತು ಅದಕ್ಕೆ ಎಲ್ಲ ಹೈಪರ್ಲಿಂಕ್ ಗಳನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.

ಟೈಮ್ಸ್ ನೌ ಸೆ.24ರಂದು ಪ್ರಸಾರ ಮಾಡಿದ್ದ ಸುದ್ದಿ ವರದಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಈ ಆದೇಶವನ್ನು ಹೊರಡಿಸಿದೆ. ಪುಣೆಯಲ್ಲಿ ಪಿಎಫ್ಐ ಪ್ರತಿಭಟನೆ ಸಂದರ್ಭದಲ್ಲಿ ‘ಪಾಕಿಸ್ತಾನ ಜಿಂದಾಬಾದ್ ’ಘೋಷಣೆಗಳನ್ನು ಕೂಗಲಾಗಿತ್ತು ಎಂದು ಟೈಮ್ಸ್ ನೌ ವರದಿ ಮಾಡಿತ್ತು, ಆದರೆ ಇದು ಸುಳ್ಳು ಎನ್ನುವುದನ್ನು ನಂತರ ಬಯಲಿಗೆಳೆಯಲಾಗಿತ್ತು.

ದೂರಿಗೆ ನೀಡಿದ್ದ ಉತ್ತರದಲ್ಲಿ ಟೈಮ್ಸ್ ನೌ, ತನ್ನ ವರದಿಯು ಎಎನ್ಐ ಮತ್ತು ಪಿಟಿಐ ಸೇರಿದಂತೆ ಸುದ್ದಿಸಂಸ್ಥೆಗಳು ಮತ್ತು ಇತರ ಫ್ರೀಲಾನ್ಸ್ ವರದಿಗಾರರು ಸೇರಿದಂತೆ ವಿವಿಧ ಮೂಲಗಳಿಂದ ಸ್ವೀಕರಿಸಿದ್ದ ಮಾಹಿತಿಗಳನ್ನು ಆಧರಿಸಿತ್ತು ಮತ್ತು ಸ್ಥಳದಲ್ಲಿ ತನ್ನ ಸ್ವಂತ ವರದಿಗಾರ ಉಪಸ್ಥಿತನಿರಲಿಲ್ಲ ಎಂದು ತಿಳಿಸಿತ್ತು.

ಆದರೆ ಸೆ.24ರಂದು ಬೆಳಿಗ್ಗೆ 10:06 ಘಂಟೆಗೆ ವಿಷಯವನ್ನು ತಾನೇ ಮೊದಲು ವರದಿ ಮಾಡಿದ್ದಾಗಿ ಸ್ವತಃ ವಾಹಿನಿಯೇ ತನ್ನ ವರದಿಯಲ್ಲಿ ಮತ್ತು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾಗಿ ಪ್ರಾಧಿಕಾರವು ಹೇಳಿದೆ.

ಪ್ರತಿಭಟನೆ ಸಂದರ್ಭದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗಳನ್ನು ಕೂಗಿರಲಿಲ್ಲ,‘ಪಿಎಫ್ಐ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಹಲವಾರು ಸತ್ಯ ಪರಿಶೀಲನೆ ವೆಬ್ಸೈಟ್ಗಳ ವರದಿಗಳನ್ನೂ ಪ್ರಾಧಿಕಾರವು ಗಮನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೀಡಿಯೊದಲ್ಲಿ ತೋರಿಸಲಾಗಿದ್ದ ಘೋಷಣೆಗಳ ಕುರಿತು ತನಗೆ ಖಚಿತವಿಲ್ಲದಿದ್ದರೆ ವಿಷಯವನ್ನು ವರದಿ ಮಾಡುವಾಗ ಟೈಮ್ಸ್ ನೌ ಜಾಗ್ರತೆಯನ್ನು ವಹಿಸಬೇಕಿತ್ತು ಮತ್ತು ವೀಡಿಯೊದ ಅಧಿಕೃತತೆಗೆ ಸಂಬಂಧಿಸಿದಂತೆ ಡಿಸ್ಕ್ಲೇಮರ್ ಅಥವಾ ಹಕ್ಕು ನಿರಾಕರಣೆಯನ್ನು ಪ್ರದರ್ಶಿಸಬೇಕಿತ್ತು ಎಂದು ಪ್ರಾಧಿಕಾರವು ಹೇಳಿದೆ.
        
ಜನಸಂಖ್ಯೆ ಏರಿಕೆಗೆ ಕೋಮುಬಣ್ಣ ನೀಡಿದ್ದ ಝೀ ನ್ಯೂಸ್ 
ದೇಶದಲ್ಲಿ ಜನಸಂಖ್ಯೆ ಏರಿಕೆ ಕುರಿತು ತನ್ನ ವರದಿಯಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಮತ್ತು ವಿಷಯಕ್ಕೆ ಕೋಮುಬಣ್ಣ ನೀಡಲು ಆಯ್ದ ಅಂಕಿಅಂಶಗಳನ್ನು ಪ್ರಸಾರ ಮಾಡಿದ್ದಕ್ಕೆ ಪ್ರಾಧಿಕಾರವು ಝೀ ನ್ಯೂಸ್ ಅನ್ನು ಕಟುವಾಗಿ ಟೀಕಿಸಿದೆ.

ವರದಿಯ ಪ್ರಸಾರದಲ್ಲಿ ವಸ್ತುನಿಷ್ಠತೆ ಮತ್ತು ತಟಸ್ಥತೆಯ ಕೊರತೆಯಿತ್ತು. ಅದು ಜನಸಂಖ್ಯೆ ಬೆಳವಣಿಗೆಗೆ ಕೇವಲ ಒಂದು ಧರ್ಮವು ಹೊಣೆಗಾರನಾಗಿದೆ ಎಂದು ಬಿಂಬಿಸಿತ್ತು ಎಂದು ತನ್ನ ಆದೇಶದಲ್ಲಿ ಹೇಳಿರುವ ಪ್ರಾಧಿಕಾರವು, ಮುಸ್ಲಿಮ್ ಸಮಾವೇಶಗಳ ಸಂಬಂಧವಿಲ್ಲದ ದೃಶ್ಯಗಳನ್ನು ಪ್ರಸಾರ ಮಾಡುವ ಮತ್ತು ಹಿಂದು-ಮುಸ್ಲಿಮ್ ಜನಸಂಖ್ಯೆಯ ಕುರಿತು ಅಂಕಿಅಂಶಗಳನ್ನು ಆಯ್ದು ಹಂಚಿಕೊಳ್ಳುವ ಮೂಲಕ ಝೀ ನ್ಯೂಸ್ ಜನಸಂಖ್ಯಾ ಸ್ಫೋಟಕ್ಕೆ ಕೋಮುಬಣ್ಣವನ್ನು ನೀಡಿತ್ತು ಎಂದು ಬೆಟ್ಟು ಮಾಡಿದೆ.

ಭವಿಷ್ಯದಲ್ಲಿ ಇಂತಹ ವರದಿಗಳನ್ನು ಪ್ರಸಾರ ಮಾಡದಂತೆ ಝೀ ನ್ಯೂಸ್ಗೆ ಎಚ್ಚರಿಕೆಯನ್ನು ನೀಡಿರುವ ಪ್ರಾಧಿಕಾರವು, ತನ್ನ ವರದಿಯು ನೀತಿ ಸಂಹಿತೆಯನ್ನು ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದು ಕಂಡು ಬಂದಿದೆ ಎಂಬ ಸಂದೇಶವನ್ನು ಪ್ರಸಾರಿಸುವಂತೆ ಅದಕ್ಕೆ ಆದೇಶಿಸಿದೆ. ಕಾರ್ಯಕ್ರಮದ ವೀಡಿಯೊ ಮತ್ತು ಅದಕ್ಕೆ ಎಲ್ಲ ಹೈಪರ್ಲಿಂಕ್ಗಳನ್ನು ತೆಗೆದುಹಾಕುವಂತೆಯೂ ಅದು ವಾಹಿನಿಗೆ ನಿರ್ದೇಶನ ನೀಡಿದೆ.

ನ್ಯೂಸ್18ಗೆ ದಂಡ
ಸುದ್ದಿ ನಿರೂಪಕ ಅಮನ್ ಚೋಪ್ರಾರ ನಾಲ್ಕು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಕುರಿತು ಆಕ್ಷೇಪಾರ್ಹ ಹೇಳಿಕೆಗಳಿಗಾಗಿ ಪ್ರಾಧಿಕಾರವು ಸೋಮವಾರ ನ್ಯೂಸ್18 ಇಂಡಿಯಾ ಹಿಂದಿ ಸುದ್ದಿವಾಹಿನಿಗೂ ದಂಡವನ್ನು ವಿಧಿಸಿದೆ. ಈ ಕಾರ್ಯಕ್ರಮಗಳು ಮುಸ್ಲಿಮರನ್ನು ಸಾರ್ವಜನಿಕವಾಗಿ ಥಳಿಸಿದ್ದನ್ನು ವೈಭವೀಕರಿಸಿದ್ದರಿಂದ ಹಿಡಿದು ಸಮುದಾಯದ ಜನಸಂಖ್ಯೆಯಲ್ಲಿ ಏರಿಕೆಯ ಕುರಿತು ಸುಳ್ಳು ಹೇಳಿಕೆಗಳವರೆಗೆ ವಿಷಯಗಳನ್ನು ಒಳಗೊಂಡಿದ್ದವು ಎಂದು ಪ್ರಾಧಿಕಾರವು ಹೇಳಿದೆ.

share
Next Story
X