ದ.ಕ.ಜಿಲ್ಲಾ ಮುಸ್ಲಿಂ ಲೀಗ್ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ

ಮಂಗಳೂರು: ಇಂಡಿಯನ್ ಯೂನಿಯನ್ ದ.ಕ.ಜಿಲ್ಲಾ ನೂತನ ಅಧ್ಯಕ್ಷ ಸಿ. ಅಬ್ದುಲ್ ರಹ್ಮಾನ್ ಅಧಿಕಾರ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು ಇಂದು ದೇಶವನ್ನು ಆಳುತ್ತಿರುವವರು ಸಂವಿಧಾನವನ್ನೇ ಬುಡಮೇಲು ಮಾಡುವ ಕೆಲಸದಲ್ಲಿ ನಿರಂತರಾಗಿದ್ದಾರೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ರಾಜ್ಯ ಮುಸ್ಲಿಂ ಲೀಗ್ ಸದಸ್ಯ ಎಎಸ್ಇ ಕರೀಂ ಕಡಬ, ಜಿಲ್ಲಾ ಕಾರ್ಯದರ್ಶಿ ರಿಯಾಝ್ ಹರೇಕಳ, ಹಾಜಿ ಆದಂ, ಹುಸೇನ್ ಹಾಜಿ , ಅಬ್ದುಲ್ ರಹ್ಮಾನ್, ಮುಹಮ್ಮದ್ ಬಶೀರ್ ಉಳ್ಳಾಲ, ಎಂಎಸ್ ಸಿದ್ದೀಕ್, ಪಿಕೆ ಸಯ್ಯದ್ ಬೆಳ್ತಂಗಡಿ, ಎಚ್.ಮುಹಮ್ಮದ್ ಇಸ್ಮಾಯಿಲ್, ರವೂಫ್ ಬಂದರ್, ಶಬೀರ್ ಅಝ್ಹರಿ ಉಪಸ್ಥಿತರಿದ್ದರು.
Next Story