ಸಂತೆಕಟ್ಟೆಯ ಕೋಟಿಚೆನ್ನಯ್ಯ ವೃತ್ತಕ್ಕೆ ಗುದ್ದಲಿ ಪೂಜೆ

ಉಡುಪಿ, ಮಾ.8: ಸಂತೆಕಟ್ಟೆ ಕಲ್ಯಾಣಪುರ ಜಂಕ್ಷನ್ನಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೋಟಿ-ಚೆನ್ನಯ್ಯ ವೃತ್ತಕ್ಕೆ ಇಂದು ಗುದ್ದಲಿ ಪೂಜೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ಉಡುಪಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಗೋಪಾಲಪುರ ವಾರ್ಡಿನ ನಗರ ಸಭಾ ಸದಸ್ಯರಾದ ಮಂಜುಳಾ ನಾಯಕ್, ಕಲ್ಯಾಣಪುರ ಗ್ರಾಪಂ ಅಧ್ಯಕ್ಷ ಕೃಷ್ಣ ದೇವಾಡಿಗ, ಪಕ್ಕಿಬೆಟ್ಟು ಗರಡಿಯ ಅಧ್ಯಕ್ಷ ವಿಠಲ್ ಪೂಜಾರಿ, ಉಪಾಧ್ಯಕ್ಷ ಪ್ರಕಾಶ್ ಪಕ್ಕಿಬೆಟ್ಟು, ಪ್ರಧಾನ ಅರ್ಚಕ ಮೋಹನ್ ಪೂಜಾರಿ, ಹಿರಿಯರಾದ ರಾಮ ಪೂಜಾರಿ, ಅಪ್ಪುಜತ್ತನ್, ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ ಹಾಗೂ ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





