Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಟಿಪ್ಪು ಹಿಂದೂ ವಿರೋಧಿಯೂ ಅಲ್ಲ,...

ಟಿಪ್ಪು ಹಿಂದೂ ವಿರೋಧಿಯೂ ಅಲ್ಲ, ಬ್ರಾಹ್ಮಣ ವಿರೋಧಿಯೂ ಅಲ್ಲ: ಡಾ.ಕೆ.ಮರುಳಸಿದ್ದಪ್ಪ

''ವಿವಾದದ ಮೂಲಕ ಸಮುದಾಯವನ್ನು ಕೀಳರಿಮೆಗೆ ತಳ್ಳುವ ಸಂಚು''

9 March 2023 9:29 PM IST
share
ಟಿಪ್ಪು ಹಿಂದೂ ವಿರೋಧಿಯೂ ಅಲ್ಲ, ಬ್ರಾಹ್ಮಣ ವಿರೋಧಿಯೂ ಅಲ್ಲ: ಡಾ.ಕೆ.ಮರುಳಸಿದ್ದಪ್ಪ
''ವಿವಾದದ ಮೂಲಕ ಸಮುದಾಯವನ್ನು ಕೀಳರಿಮೆಗೆ ತಳ್ಳುವ ಸಂಚು''

ಬೆಂಗಳೂರು, ಮಾ.9: ‘ಒಂದು ಗುಂಪಿನ ಜನರು ಈ ದೇಶವನ್ನು ಗುತ್ತಿಗೆ ಹಿಡಿದುಕೊಂಡು ಟಿಪ್ಪುವಿನ ಬಗೆಗಿನ ಆಗಿಂದಾಗ್ಗೆ ವಿವಾದವನ್ನು ಸೃಷ್ಟಿಸುತ್ತಾರೆ. ಇದು ಕೇವಲ ಮತಕ್ಕಾಗಿ ಅಷ್ಟೇ ಅಲ್ಲ. ವಿವಾದದ ಮೂಲಕ ಸಮುದಾಯವನ್ನು ಕೀಳರಿಮೆಗೆ ತಳ್ಳುವ  ಸಂಚು’ ಎಂದು ಹಿರಿಯ ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ತಿಳಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಎನ್.ಕೆ.ಮೋಹನ್‍ರಾಂ ಅವರ ‘21ನೆ ಶತಮಾನದ ಭಾರತೀಯ ಮುಸ್ಲಿಮರ ಅನಾಥ ಪ್ರಜ್ಞೆ’ ಎಂಬ ಕನ್ನಡ ಪುಸ್ತಕದ ಉರ್ದು ಅನುವಾದವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಒಮ್ಮೊಮ್ಮೆ ಅಧಿಕೃತ ದಾಖಲೆಗಳು ಸುಳ್ಳಾಗಬಹುದು. ಆದರೆ, ಟಿಪ್ಪುವಿನ ಕುರಿತಾಗಿರುವ ಜನ ಸಾಮಾನ್ಯರ ಕತೆ, ಲಾವಣಿಗಳು ಸುಳ್ಳಾಗುವುದಿಲ್ಲ ಎಂದರು.

ಟಿಪ್ಪು ಮತಾಂದನಲ್ಲ, ರಾಜರ ಆಳ್ವಿಕೆಯನ್ನು ವಿರೋಧಿಸಿದವವರಿಗೆ ಶಿಕ್ಷೆಯ ರೂಪದಲ್ಲಿ ಮತಾಂತರ ಪ್ರಕ್ರಿಯೆ ಹುಟ್ಟಿಕೊಂಡಿತು. ಟಿಪ್ಪು ಕಾಲದಲ್ಲಿ ನ್ಯಾಯಯುತವಾಗಿ, ಸ್ವಇಚ್ಛೆಯಿಂದ ಮತಾಂತರಗಳಾಗಿವೆ. ಕೇವಲ ಮುಸ್ಲಿಮ್ ರಾಜರಷ್ಟೇ  ಮತಾಂತರ ಮಾಡಿಲ್ಲ. ಎಲ್ಲ ಧರ್ಮದಲ್ಲೂ ಮತಾಂತರ ನಡೆದಿದೆ ಎಂದರು.

ಟಿಪ್ಪು ಹಿಂದೂ ಧರ್ಮ ವಿರೋಧಿಯೂ ಅಲ್ಲ, ಬ್ರಾಹ್ಮಣ ವಿರೋಧಿಯೂ ಆಗಿರಲಿಲ್ಲ. ಅವನ ಆಳ್ವಿಕೆಯ 9 ಮಂತ್ರಿಗಳಲ್ಲಿ 7 ಮಂದಿ ಬ್ರಾಹ್ಮಣರಿದ್ದರು. ಅವರಲ್ಲಿ ದಿವಾನ್ ಪೂರ್ಣಯ್ಯ ಒಬ್ಬ ಬ್ರಾಹ್ಮಣ. ಹೀಗಿದ್ದರೂ ಇತಿಹಾಸ ಸರಿಯಾಗಿ ಅರಿಯದೆ ಟಿಪ್ಪುವನ್ನು ಮತಾಂದ ಎಂದು ಟೀಕಿಸುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದಲ್ಲಿ ಮುಸ್ಲಿಮ್ ಸಮುದಾಯ ಅನಾಥವಾಗುತ್ತಿದೆ. ಸಮುದಾಯದಲ್ಲಿ ಅಸಹಾಯಕತೆ, ಹತಾಶೆ, ನಿಟ್ಟುಸಿರು ತಾಂಡವವಾಡುತ್ತಿದೆ ಎಂದ ಅವರು, ಎಲ್ಲ ಸಮುದಾಯದೊಳಗೂ ಅಲ್ಪಸಂಖ್ಯಾತರಿದ್ದಾರೆ. ವೈವಿಧ್ಯತೆಯಲ್ಲಿರುವ ಏಕತೆಯ ದೇಶವಾಗಿದ್ದು, ಇಲ್ಲಿ ಯಾರೂ ಹೆಚ್ಚಿಲ್ಲ ಯಾರೂ ಕಡಿಮೆಯಿಲ್ಲ ಎಂದರು.

ಸಿಮೀತ ವರ್ಗವೊಂದು ಅಕ್ಬರ್, ಬಾಬರ್ ನ ಬಗ್ಗೆ ಮಾತನಾಡದೆ ಕ್ರೂರಿ ಔರಂಗಜೇಬನ ಬಗ್ಗೆ ಮಾತನಾಡುತ್ತದೆ. ಅಕ್ಬರ್, ಬಾಬರ್ ನಂತಹ ಉತ್ತಮ ಮುಸ್ಲಿಮ್ ರಾಜರ ಬಗ್ಗೆ ಯಾರೂ ಮಾತನಾಡುವ ಪ್ರಯತ್ನ ಮಾಡುವುದಿಲ್ಲ. ಅಂತೆಯೇ ಅನ್ಯ ಧರ್ಮದ ಬಗ್ಗೆ ಕ್ರೂರವಾಗಿ ನಡೆದುಕೊಂಡ ಹಿಂದೂಗಳು ಇದ್ದಾರೆ. ಆದರೆ ಅದನ್ನೆಲ್ಲ ಮುಚ್ಚಿ ಹಾಕುವ ಯತ್ನ ನಡೆಯುತ್ತದೆ. ಕ್ರೌರ್ಯವನ್ನು ಎಲ್ಲ ಧರ್ಮಗಳೂ ಮಾಡಿವೆ ಆದರೆ ಸೋ ಕಾಲ್ಡ್ ಮನಸ್ಥಿತಿಗಳು ಕೇವಲ ಮುಸ್ಲಿಮರನ್ನು ಮಾತ್ರ ವಿವಾದಕ್ಕೆ ಎಳೆದು ತರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಜಯ್‍ಕುಮಾರ್ ಸಿಂಗ್, ಉರ್ದು ಲೇಖಕ ಮುಹಮ್ಮದ್ ಆಝಂ ಶಾಹಿದ್, ಲೇಖಕ ಎನ್.ಕೆ.ಮೋಹನ್‍ರಾಂ, ಪುಸ್ತಕದ ಉರ್ದು ಅನುವಾದಕ ಅನ್ವರ್‍ದಾಗ್ ಉಪಸ್ಥಿತರಿದ್ದರು.

share
Next Story
X