Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟೊರಾಂಟೊದ ಶಾಲೆಗಳಲ್ಲಿ ಜಾತಿ ದೌರ್ಜನ್ಯ...

ಟೊರಾಂಟೊದ ಶಾಲೆಗಳಲ್ಲಿ ಜಾತಿ ದೌರ್ಜನ್ಯ ಅಸ್ತಿತ್ವದಲ್ಲಿ: ಒಪ್ಪಿಕೊಂಡ ಜಿಲ್ಲಾ ಶಾಲಾ ಮಂಡಳಿ

9 March 2023 11:09 PM IST
share
ಟೊರಾಂಟೊದ ಶಾಲೆಗಳಲ್ಲಿ ಜಾತಿ ದೌರ್ಜನ್ಯ ಅಸ್ತಿತ್ವದಲ್ಲಿ: ಒಪ್ಪಿಕೊಂಡ ಜಿಲ್ಲಾ ಶಾಲಾ ಮಂಡಳಿ

ಟೊರಾಂಟೊ (ಕೆನಡ), ಮಾ. 9: ಕೆನಡದ ಅತಿ ದೊಡ್ಡ ನಗರ ಟೊರಾಂಟೊದ ಶಾಲೆಗಳಲ್ಲಿ ಜಾತಿ ತಾರತಮ್ಯ ಚಾಲ್ತಿಯಲ್ಲಿದೆ ಎನ್ನುವುದನ್ನು ನಗರದ ಜಿಲ್ಲಾ ಶಾಲಾ ಮಂಡಳಿ ಒಪ್ಪಿಕೊಂಡಿದೆ ಎಂದು ‘ಗ್ಲೋಬ್ ಆ್ಯಂಡ್ ಮೇಲ್’ ವರದಿ ಮಾಡಿದೆ.

ಜಾತಿ ತಾರತಮ್ಯ ಮತ್ತು ದೌರ್ಜನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕಾರ್ಯಕ್ರಮವೊಂದನ್ನು ರೂಪಿಸಲು ನೆರವು ನೀಡುವಂತೆ ಅದು ಓಂಟಾರಿಯೊ ಮಾನವಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದೆ ಎಂದು ವರದಿ ತಿಳಿಸಿದೆ.

ಶಾಲೆಗಳಲ್ಲಿ ಜಾತಿ ತಾರತಮ್ಯ ಇದೆ ಎನ್ನುವ ನಿರ್ಣಯದ ಬಗ್ಗೆ ಬುಧವಾರ ರಾತ್ರಿ ಮತದಾನ ನಡೆಯಿತು. 16 ಟ್ರಸ್ಟೀಗಳು ತಾರತಮ್ಯ ಇದೆ ಎನ್ನುವುದರ ಪರವಾಗಿ ಮತ ಹಾಕಿದರೆ, ಐವರು ಇಲ್ಲ ಎನ್ನುವುದರ ಪರವಾಗಿ ಮತ ಹಾಕಿದರು.

ಇದೇ ಸಂದರ್ಭದಲ್ಲಿ, ದಲಿತರ ಕ್ರಿಯಾ ಗುಂಪೊಂದನ್ನು ರಚಿಸಲು ಕೂಡ ಮಂಡಳಿಯು ಒಪ್ಪಿಕೊಂಡಿತು ಎಂದು ಪತ್ರಿಕೆ ವರದಿ ಮಾಡಿದೆ. ಕೆನಡದಲ್ಲಿ ಜಾತಿ ದೌರ್ಜನ್ಯ ಇದೆ ಎನ್ನುವುದನ್ನು ಶಾಲಾ ಆಡಳಿತ ಮಂಡಳಿಯೊಂದು ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ಮಕ್ಕಳಿಗೆ ದೈಹಿಕ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ದಲಿತ ಹೆತ್ತವರು ಹೇಳಿದ್ದಾರೆ: ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯ ಟ್ರಸ್ಟೀ ಯಾಲಿನಿ ರಾಜಕುಲಸಿಂಗಮ್

ಜಾತಿ ದೌರ್ಜನ್ಯಕ್ಕೆ ಒಳಗಾದ ಜನರು ತಮ್ಮ ದೌರ್ಜನ್ಯದ ವಿಷಯಗಳನ್ನು ಹೇಳಲು ಮುಂದೆ ಬರುವುದಿಲ್ಲ, ಯಾಕೆಂದರೆ ಈ ಸಮಸ್ಯೆಯನ್ನು ನಿಭಾಯಿಸುವ ಯಾವ ವ್ಯವಸ್ಥೆಯೂ ಚಾಲ್ತಿಯಲ್ಲಿಲ್ಲ ಎಂದು ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯ ಟ್ರಸ್ಟೀ ಯಾಲಿನಿ ರಾಜಕುಲಸಿಂಗಮ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದರು. ‘‘ಜಾತಿ ದೌರ್ಜನ್ಯವನ್ನು ದಾಖಲಿಸಲು ಯಾವುದೇ ವ್ಯವಸ್ಥೆಯಿಲ್ಲ. ಹಾಗಾಗಿ, ಅಂಥ ದೌರ್ಜನ್ಯಗಳು ಜಾತಿ ದೌರ್ಜನ್ಯಗಳಾಗಿ ದಾಖಲಾಗುವುದಿಲ್ಲ. ಆದರೆ, ಇದರ ಅರ್ಥ ಜಾತಿ ದೌರ್ಜನ್ಯಗಳು ನಡೆಯುವುದಿಲ್ಲವೆಂದಲ್ಲ’’ ಎಂದರು.

ಮಾನವಹಕ್ಕುಗಳ ಆಯೋಗದೊಂದಿಗೆ ಮಂಡಳಿಯ ಭಾಗೀದಾರಿಕೆಯು ಈಗ ಈ ನಿಟ್ಟಿನಲ್ಲಿ ಪರಿಹಾರವೊಂದನ್ನು ನೀಡಲಿದೆ ಎಂದು ಯಾಲಿನಿ ಹೇಳಿದರು.
ಸಿಯಾಟಲ್ ನಗರದಲ್ಲಿ ಜಾತಿ ತಾರತಮ್ಯವನ್ನು ನಿಷೇಧಿಸಲು ಆ ನಗರದ ನಗರಪಾಲಿಕೆಯು ಮತದಾನ ನಡೆಸಿದ ಸುಮಾರು ಎರಡು ವಾರಗಳ ಬಳಿಕ ಕೆನಡದಲ್ಲಿ ಈ ಬೆಳವಣಿಗೆ ನಡೆದಿದೆ.

‘‘ಈ ನಿರ್ಣಯವು ವಿಭಜನೆಯಲ್ಲ. ಇದು ತೃಪ್ತಿದಾಯಕ ಮತ್ತು ಸಶಕ್ತ ಸಮಾಜಗಳನ್ನು ನಿರ್ಮಿಸುವ ಮತ್ತು ಅವುಗಳಿಗೆ ಸುರಕ್ಷಿತ ಶಾಲೆಗಳನ್ನು ಒದಗಿಸುವ ಕ್ರಮವಾಗಿದೆ’’ ಎಂದು ಯಾಲಿನಿ ‘ಗ್ಲೋಬ್ ಆ್ಯಂಡ್ ಮೇಲ್’ನೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಸಿಯಾಟಲ್‌ನ 4 ಶೇಕಡ ಜನಸಂಖ್ಯೆ ದಕ್ಷಿಣ ಏಶ್ಯನ್ನರಾಗಿದ್ದಾರೆ. ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯಲ್ಲಿ 22 ಶೇಕಡ ದಕ್ಷಿಣ ಏಶ್ಯನ್ನರಿದ್ದೇವೆ’’ ಎಂದು ಅವರು ತಿಳಿಸಿದರು.
ತಮ್ಮ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ದಲಿತ ಹೆತ್ತವರು ನನ್ನಲ್ಲಿ ಹೇಳಿಕೊಂಡಿದ್ದಾರೆ ಎಂದರು.

ಟೊರಾಂಟೊ ಜಿಲ್ಲಾ ಶಾಲಾ ಮಂಡಳಿಯು ಕೆನಡದ ಅತಿ ದೊಡ್ಡ ಶಾಲಾ ಮಂಡಳಿಯಾಗಿದೆ. ಅದು 583 ಶಾಲೆಗಳನ್ನು ಹೊಂದಿದ್ದು, ಸುಮಾರು 2,35,000 ವಿದ್ಯಾರ್ಥಿಗಳಿದ್ದಾರೆ.

ಐತಿಹಾಸಿಕ ಕ್ಷಣ: ಸೌತ್ ಏಶ್ಯನ್ ದಲಿತ್ ಆದಿವಾಸಿ ನೆಟ್‌ವರ್ಕ್ 

‘‘ಈ ರೀತಿಯ ಕಾರ್ಯಕ್ರಮವನ್ನು ಶಾಲಾ ಮಂಡಳಿಯೊಂದೇ ರೂಪಿಸಲು ಅಸಾಧ್ಯವಾದ ಕಾರಣ ಮೂಲ ನಿರ್ಣಯವನ್ನು ಕೊಂಚ ಬದಲಿಸಲಾಗಿದೆ. ನಮ್ಮಂದಿಗೆ ಓಂಟಾರಿಯೊ ಮಾನವಹಕ್ಕುಗಳ ಆಯೋಗವು ಕೆಲಸ ಮಾಡಲಿದೆ’’ ಎಂದು ಕಾರ್ಲ್‌ಟನ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಕೆನಡದಲ್ಲಿರುವ ಸೌತ್ ಏಶ್ಯನ್ ದಲಿತ್ ಆದಿವಾಸಿ ನೆಟ್‌ವರ್ಕ್‌ನ ಸಹ-ಸಂಸ್ಥಾಪಕ ಚಿನ್ನಯ್ಯ ಜಂಗಮ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಇದು ಐತಿಹಾಸಿಕ ಕ್ಷಣವಾಗಿದೆ. ಕೇವಲ ಶಾಲೆಗಳಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಬಗ್ಗೆ ಚರ್ಚೆ ನಡೆಸಲು ಮಂಡಳಿಯು ಬಾಗಿಲುಗಳನ್ನು ತೆರೆದಿದೆ’’ ಎಂದು ಅವರು ಹೇಳಿದರು.

share
Next Story
X