Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ ...

ಓ ಮೆಣಸೇ ...

ಪಿ.ಎ. ರೈಪಿ.ಎ. ರೈ13 March 2023 12:01 AM IST
share
ಓ ಮೆಣಸೇ ...

ಬಿಜೆಪಿ ವಂಚಕರ ಪಕ್ಷ, ತಾರತಮ್ಯದ ಮೂಟೆ - ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಆದರೂ ಅದು ನಿಮ್ಮ ಭವಿಷ್ಯದ ಆಶ್ರಯ ಎಂಬ ವದಂತಿಗಳಿರುವುದೇಕೆ?

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ- ಬಸವರಾಜ ಬೊಮ್ಮಾಯಿ, ಸಿಎಂ
ಎಲ್ಲವೂ ಪುರಾವೆ ಸಹಿತ ಬಹಿರಂಗವಾಗಿ ಬಿಟ್ಟ ಮೇಲೆ ಮತ್ತೆ ಇನ್ನೇನು ಉಳಿದಿರುತ್ತದೆ, ಮುಚ್ಚಿಡುವುದಕ್ಕೆ?

ಗೋವುಗಳನ್ನು ಹತ್ಯೆ ಮಾಡುವವರು ನರಕದಲ್ಲಿ ಕೊಳೆಯುತ್ತಾರೆ- ಶಮೀಮ್ ಅಹ್ಮದ್, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ
ಭಾರತದಿಂದ ನಡೆದಿರುವ ವಿಪರೀತ ಪ್ರಮಾಣ ಬೀಫ್ ರಫ್ತಿನ ಕುರಿತು ಅವರು ಈ ರೀತಿ ಆಕ್ರೋಶ ಪ್ರಕಟಿಸಿದ್ದಾರೆ. ಸರಕಾರಕ್ಕೆ ಗೊತ್ತಾದರೆ ಭಡ್ತಿಗೆ ಕತ್ತರಿ ಖಚಿತ.

ಜೆಡಿಎಸ್ ತಮ್ಮ ಕುಟುಂಬದಲ್ಲಿ ಟಿಕೆಟ್ ಹಂಚಿಕೊಂಡು ಪರಿವಾರ ವಾದಕ್ಕೆ ಜೋತು ಬಿದ್ದಿರುವ ಪಕ್ಷ- ಅಮಿತ್ ಶಾ, ಕೇಂದ್ರ ಸಚಿವ
ಜಯ್ ಶಾ ಅವರಿಗೆ ಈ ಬಗ್ಗೆ ಭಿನ್ನಾಭಿಪ್ರಾಯ ಇದೆಯೇ?

ಸದ್ಯದಲ್ಲೇ ಗಾಣದಿಂದ ಎಣ್ಣೆ ತೆಗೆಯುವ ಸ್ಟಾರ್ಟ್ ಅಪ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಎಲ್ಲದರಿಂದ ದ್ವೇಷ ಉತ್ಪಾದಿಸುವ ಉದ್ದಿಮೆಯ ಅನಿಯಂತ್ರಿತ ವೃದ್ಧಿಯ ನಿಯಂತ್ರಣಕ್ಕೆ ಏನಾದರೂ ಸ್ಕೀಮ್ ಇದೆಯೇ?

ಮನಸ್ಸು ಮಾಡಿದ್ದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವನ್ನು ನಮಗೆ ಮುಚ್ಚಿ ಹಾಕಬಹುದಾಗಿತ್ತು- ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮುಚ್ಚಿಹಾಕುವ ಯೋಜನೆಯನ್ನು ವೈಯಕ್ತಿಕ ದ್ವೇಷದಿಂದ ಕ್ಯಾನ್ಸೆಲ್ ಮಾಡಿಬಿಟ್ರಾ?

ರಾಜ್ಯ ಸರಕಾರದ ಭ್ರಷ್ಟಾಚಾರದಿಂದ ಜನತೆ ಬೇಸತ್ತು ಸರಕಾರದ ಬದಲಾವಣೆಗಾಗಿ ಕಾಯುತ್ತಿದ್ದಾರೆ- ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಬೇರೊಂದು ಪಕ್ಷ ಬಂದು ಭ್ರಷ್ಟಾಚಾರ ನಡೆಸಲಿ ಎಂಬುದು ಜನರ ಇಂಗಿತವೇ?

ಕಾಂಗ್ರೆಸ್‌ನಲ್ಲಿ ಭಯೋತ್ಪಾದಕರು ಇರುವುದು ಸ್ಪಷ್ಟ- ನಳಿನ್ ಕುಮಾರ್ ಕಟೀಲು, ಸಂಸದ
ಆದರೆ ಅವರಿಗೆ ನಿಮ್ಮಂತಹ ನಾಯಕರು ಸಿಕ್ಕಿಲ್ಲ.

ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಪ್ರತಿಪಕ್ಷದ ಸ್ಥಾನ ನಿರ್ವಹಿಸುವಂತೆ ಯಾರೂ ಒತ್ತಡ ಹೇರಬಾರದು - ಕಿರಣ್ ರಿಜಿಜು, ಕೇಂದ್ರ ಸಚಿವ
ಅಂದರೆ ಅದು ಆಡಳಿತ ಪಕ್ಷದ ಕೈಗೊಂಬೆಯಾಗುವುದನ್ನು ಯಾರೂ ಆಕ್ಷೇಪಿಸಬಾರದು?

ಬ್ರಿಟಿಷರಿಗೇ ಹೆದರದ ನಾವು ಪ್ರಧಾನಿ ಮೋದಿಗೆ ಹೆದರುತ್ತೇವಾ?- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಸದ್ಯ ನೀವು ಹೆದರಬೇಕಾಗಿರುವುದು ಯಾವುದೇ ಸೈದ್ಧಾಂತಿಕ ಪ್ರಜ್ಞೆಯಾಗಲಿ ಉತ್ಸಾಹವಾಗಲಿ ಇಲ್ಲದ ನಿಮ್ಮದೇ ಪಕ್ಷದ ಕಾರ್ಯಕರ್ತರ ಬಗ್ಗೆ.

ನನಗೆ ಟೋಪಿ ಹಾಕಿದವರೆಲ್ಲ ಶೀಘ್ರ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ- ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
  ನಿಮ್ಮಿಂದ ಟೋಪಿ ಹಾಕಿಸಿಕೊಂಡವರು?

ಕಾಂಗ್ರೆಸ್‌ನವರು ಬುಟ್ಟಿಯಲ್ಲಿರುವ ಹಲ್ಲು ಕಿತ್ತ ಹಾವಿನಂಥವರು - ಡಾ.ಸುಧಾಕರ್, ಸಚಿವ
ವಿಷವೆಲ್ಲಾ ನಿಮ್ಮ ಬಳಿ ಇರುವಾಗ ಅವರಿಗೆ ಹಲ್ಲಿನ ಅಗತ್ಯವೇನಿದೆ?

ಜೆಡಿಎಸ್‌ಗೆ ಓಟು ಹಾಕುವುದೆಂದರೆ ಅದು ಬಿಜೆಪಿಗೆ ಹಾಕಿದಂತೆ- ಸಿದ್ದರಾಮಯ್ಯ, ಮಾಜಿ ಸಿಎಂ
ಆದ್ದರಿಂದ ಅವರ ಮೂಲಕ ಬಿಜೆಯಿಯನ್ನು ಬೆಂಬಲಿಸುವುದಕ್ಕಿಂತ ನೇರವಾಗಿ ಬಿಜೆಪಿಗೆ ಓಟು ಹಾಕಿದರೆ ಹೇಗೆ ಎಂದು ಹಲವರು ತರ್ಕಿಸುತ್ತಿದ್ದಾರೆ.

ನಾನು ಹುಟ್ಟಿದ್ದೇ ಚಡ್ಡಿಗಳು, ಕರಿಟೋಪಿ, ದೊಣ್ಣೆಯವರಿಗೆ ಉತ್ತರ ಕೊಡಲು- ಬಿ.ಕೆ.ಹರಿಪ್ರಸಾದ್, ವಿ.ಪ. ವಿ.ನಾಯಕ
ಅದರ ಜೊತೆಗೆ ಒಂದಷ್ಟು ಜನಸೇವೆಯ ಚಟುವಟಿಕೆಗಳ ಕಡೆಗೂ ಗಮನವಿರಲಿ.

ಜನಸಂಖ್ಯೆ ಹೆಚ್ಚಿಸದಿದ್ದರೆ ಮುಂದೊಂದು ದಿನ ಜಪಾನ್ ಎಂಬ ದೇಶವೇ ಮಾಯವಾಗಿ ಹೋಗಬಹುದು- ಮಸಾಕೊ ಮೊರಿ, ಜಪಾನ್ ಪ್ರಧಾನಿ ಸಲಹೆಗಾರ್ತಿ
ಬಹಳಷ್ಟನ್ನು ಎಕ್ಸ್ ಪೋರ್ಟ್ ಮಾಡುವ ನೀವು ನಮ್ಮ ಭೂಭಾಗದಿಂದ ಒಂದಷ್ಟು ಜನರನ್ನು ಇಂಪೋರ್ಟ್ ಮಾಡುವ ಬಗ್ಗೆ ಯಾಕೆ ಆಲೋಚಿಸುತ್ತಿಲ್ಲ?

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ- ಅಖಿಲೇಶ್ ಯಾದವ್, ಎಸ್‌ಪಿ ಅಧ್ಯಕ್ಷ
ಸೋತ ನಂತರ ಮೈತ್ರಿ ಮಾಡಿಕೊಳ್ಳಿ. ಅವರೂ ಅದೇ ಮೂಡ್ ನಲ್ಲಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲು ಬಿಜೆಪಿಯವರ ಭ್ರಷ್ಟಾಚಾರವೇ ಕಾರಣ- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆದರೆ ಅದಕ್ಕೆ ಇನ್ನೊಂದು ಪಕ್ಷದವರ ಭ್ರಷ್ಟಾಚಾರ ಪರಿಹಾರವಲ್ಲ.

ಬಿಜೆಪಿಯ ಸಿದ್ಧಾಂತದ ಹೃದಯ ಭಾಗದಲ್ಲಿ ಹೇಡಿತನ, ಅಂಜು ಬುರುಕುತನವಿದೆ- ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ನಿಮ್ಮ ರಾಜಕೀಯ ನಡವಳಿಕೆಯಲ್ಲೂ ಎದ್ದು ಕಾಣುವುದು ಅವೇ ಗುಣಗಳು.

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದ್ದೇ ನಾನು- ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ನೀವು ಹಾಗೆಲ್ಲಾ ಮಾತನಾಡಿದರೆ ನಿಮ್ಮನ್ನು ಹುಟ್ಟಿಸಿದ್ದೇ ತಾನೆಂದು ಅವರು ವಾದಿಸಬಹುದು

ಬಿಜೆಪಿಯಿಂದ ಇಬ್ಬರು ಹೊರಗೆ ಹೋದರೆ 20 ಜನ ಒಳಗೆ ಬರುತ್ತಾರೆ- ಬಿ.ಸಿ.ಪಾಟೀಲ, ಸಚಿವ
ಆದ್ದರಿಂದ ಇನ್ನೂರು ಮಂದಿಯನ್ನು ಹೊರಕಳಿಸಿ, ಎರಡು ಸಾವಿರ ಮಂದಿ ಒಳಬರಲಿ

ನಮ್ಮ ದೇಶದ ಆರ್ಥಿಕ ಶಿಸ್ತು ಅನ್ಯ ದೇಶಗಳಿಗೆ ದಾರಿ ದೀಪ- ಹಾಲಪ್ಪ ಆಚಾರ್, ಸಚಿವ
ನಿಮ್ಮ ದಾರಿದೀಪದ ಬೆಳಕಲ್ಲಿ ನಡೆದರೆ ಅವರ ವಿನಾಶವೂ ಖಚಿತ.

ರಾಜ್ಯ ಬಿಜೆಪಿಯಲ್ಲಿ ಗಂಡಸರು ಇಲ್ಲದೇ ಇರುವುದರಿಂದ ಪ್ರತೀ ಬಾರಿಯೂ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾರನ್ನು ಚುನಾವಣಾ ಪ್ರಚಾರಕ್ಕಾಗಿ ಕರೆಸಲಾಗುತ್ತದೆ- ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಜೆಡಿಎಸ್‌ನಲ್ಲಿ ಯಾರ ಬದಲಿಗೆ ನಿಮ್ಮನ್ನು ಕರೆಸಲಾಯಿತು?

ಅಮೆರಿಕ ಈವರೆಗೆ ಎದುರಿಸಿದ ಅತ್ಯಂತ ಬಲಿಷ್ಠ ಹಾಗೂ ಚತುರ ಶತ್ರುವೆಂದರೆ ಅದು ಚೀನಾ- ನಿಕ್ಕಿ ಹ್ಯಾಲೆ, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ
ದುರ್ಬಲ ದೇಶಗಳ ಮೇಲೆ ಅಕ್ರಮ ಎಸಗುವುದೇ ನಿಮ್ಮ ಬಲಿಷ್ಠ ಮತ್ತು ಚತುರತೆಯ ಮಾನದಂಡವಿರಬೇಕು.

ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳಿಗೆ ಬಿಜೆಪಿ ಹೆದರಿದೆ- ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಪ್ರ. ಕಾರ್ಯದರ್ಶಿ
ಬಿಜೆಪಿಯ ಕಾಲ್ಪನಿಕ ನಂಜೇಗೌಡ, ಉರಿಗೌಡರಿಗೆ ಕಾಂಗ್ರೆಸ್ ಹೆದರಿದೆ ಎಂದು ಬಿಜೆಪಿ ನಾಯಕರು ಸಂಭ್ರಮದಲ್ಲಿದ್ದಾರೆ

share
ಪಿ.ಎ. ರೈ
ಪಿ.ಎ. ರೈ
Next Story
X