ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಹೀಮಿ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು ಗುಲ್ಶನ್ ಶಾದಿ ಮಹಲ್ ಶಿವಾಜಿನಗರ ದಲ್ಲಿ ಜಿಲ್ಲಾ ಅಧ್ಯಕ್ಷ ಶಂಶುದ್ದೀನ್ ಅಝ್ಅರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.
ಎಸ್ವೈಎಸ್ ದಹ್ವಾ ಜಿಲ್ಲಾ ಕಾರ್ಯದರ್ಶಿ ತಾಜುದ್ದೀನ್ ಫಾಳಿಲಿ ಕಾರ್ಯಕ್ರಮ ಉದ್ಘಾಟಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀಬ್ ರವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಮಜೀದ್ ಮಾರ್ಥಹಳ್ಳಿರವರು ಲೆಕ್ಕಪತ್ರ ಮಂಡಿಸಿದರು.
ಬಳಿಕ ಅಲ್ತಾಫ್ ಅಲಿ ಕ್ಯೂಡಿ, ಜಮಾಲುದ್ದೀನ್ ಸಖಾಫಿ ರೈಂಬೋ ಳ, ಸ್ವಾದಿಕ್ ಸಖಾಫಿ ಸಿಸಿ, ಶರೀಫ್ ಮಡಿವಾಳ ಪಬ್ಲಿಕೇಶನ್, ಅಬೂಬಕ್ಕರ್ ಅಹ್ಸನಿ ದವಾ, ಫಾರೂಕ್ ಅಮಾನಿ ಮೀಡಿಯಾ, ಸಿನಾನ್ ಕ್ಯಾಂಪಸ್ ವರದಿ ವಾಚಿಸಿದರು.
ನಿರೀಕ್ಷಕರಾಗಿ ಆಗಮಿಸಿದ ರಾಜ್ಯ ಸಮಿತಿಯ ದವಾ ಕಾರ್ಯದರ್ಶಿ ಮುನೀರ್ ಸಖಾಫಿ ಸಭೆಯನ್ನು ನಿಯಂತ್ರಿಸಿದರು .
ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೇರ್ಮಾನ್ ಮೌಲಾನಾ ಶಾಫಿ ಸಹದಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ನಹೀಮಿ , ಪ್ರಧಾನ ಕಾರ್ಯದರ್ಶಿ ಯಾಗಿ ಶಬೀಬ್ ಹಲ್ಸೂರು, ಕೋಶಾಧಿಕಾರಿಯಾಗಿ ಅಕ್ತರ್ ಹುಸೈನ್ , ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸಿನಾನ್ , ಕ್ಯೂಡಿ ಕಾರ್ಯದರ್ಶಿಯಾಗಿ ಫಾರೂಕ್ ಅಮಾನಿ, ಸಿಸಿ ಕಾರ್ಯದರ್ಶಿ ಳಯಾಗಿ ಅಲ್ತಾಫ್ ಅಲಿ, ದವಾ ಕಾರ್ಯದರ್ಶಿಯಾಗಿ ಹೈದರ್ ಎಲೆಕ್ಟ್ರಾನಿಕ್ ಸಿಟಿ, ಕ್ಯಾಂಪಸ್ ಕಾರ್ಯದರ್ಶಿ ಯಾಗಿ ನಿಝಾರ್ ಖಾದ್ರಿ ಮೆಜೆಸ್ಟಿಕ್, ಐಟಿ ಕಾರ್ಯದರ್ಶಿಯಾಗಿ ನೌಫಲ್ ಮೆಜೆಸ್ಟಿಕ್ , ರೈನ್ಬೋ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಅಹ್ಸನಿ , ಪಬ್ಲಿಕೇಶನ್ ಕಾರ್ಯದರ್ಶಿಯಾಗಿ ಸಿದ್ದೀಕ್ ಟಿಸಿ ಪಾಲ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಸಂಶುದ್ದೀನ್ ಜೆ.ಪಿ ನಗರ, ವಿಸ್ಢಂ ಕಾರ್ಯದರ್ಶಿಯಾಗಿ ಖಲೀಲ್ ಹೆಗ್ಡೆ ನಗರ್, ಉರ್ದು ಕಾರ್ಯದರ್ಶಿಯಾಗಿ ಯೂಸುಫ್ ಮತ್ತು ಸೆಕ್ರೆಟರಿಯೆಟ್ ಸದಸ್ಯರಾಗಿ ಶಂಶುದ್ದೀನ್ ಅಝ್ಅರಿ, ಮಜೀದ್ ಮಾರ್ಥಹಲ್ಲಿ, ಶಾಪಿ ಸಅದಿ ಮೆಜೆಸ್ಟಿಕ್, ಶಿಹಾಬ್ ಮಡಿವಾಳ ಹಾಗೂ 13 ಕಾರ್ಯಕಾರಿಣಿ ಸದಸ್ಯರನ್ನೊಳಗೊಂಡ ಸಮಿತಿಯನ್ನು ಆರಿಸಲಾಯಿತು.
ಮುಂದುವರಿದ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮುನೀರ್ ಸಖಾಫಿ ಪ್ರಾಸ್ತಾವಿಕ ಮಾತನಾಡಿದರು. ಎಸ್ವೈಎಸ್
ಜಿಲ್ಲಾ ಅಧ್ಯಕ್ಷರಾದ ಜಾಫರ್ ನೂರಾನಿ ಳ, ಉಪಾಧ್ಯಕ್ಷ ಅನಸ್ ಸಿದ್ದೀಕಿ ಶಿರಿಯ, ಸ್ವಾಲಿಹ್, ಶಿಹಾಬ್ ಮಡಿವಾಳ ಮುಂತಾದ ಹಲವು ನಾಯಕರು ಉಪಸ್ಥಿತಿದ್ದರು.
ಜಿಲ್ಲಾ ಕಾರ್ಯದರ್ಶಿ ಶಬೀಬ್ ಸ್ವಾಗತಿಸಿ ಸಿನಾನ್ ಧನ್ಯವಾದ ಸಮರ್ಪಿಸಿದರು.