Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕಪ್ಪು ಸಮುದ್ರದ ಮೇಲೆ‌ ಅಮೆರಿಕದ...

ಕಪ್ಪು ಸಮುದ್ರದ ಮೇಲೆ‌ ಅಮೆರಿಕದ ಡ್ರೋನ್‌ಗೆ ಢಿಕ್ಕಿ ಹೊಡೆದ ರಷ್ಯಾ ಜೆಟ್: ಈವರೆಗಿನ ಮಾಹಿತಿ ಹೀಗಿದೆ...

15 March 2023 12:20 PM IST
share
ಕಪ್ಪು ಸಮುದ್ರದ ಮೇಲೆ‌ ಅಮೆರಿಕದ ಡ್ರೋನ್‌ಗೆ ಢಿಕ್ಕಿ ಹೊಡೆದ ರಷ್ಯಾ ಜೆಟ್: ಈವರೆಗಿನ ಮಾಹಿತಿ ಹೀಗಿದೆ...

ವಾಷಿಂಗ್ಟನ್: ರಷ್ಯಾದ ಸುಖೋಯ್-27 (Russia Jet) ಯುದ್ಧ ವಿಮಾನವೊಂದು ಕಪ್ಪು ಸಮುದ್ರದ ಮೇಲೆ ಹಾರಾಡುತ್ತಿದ್ದ ಅಮೆರಿಕಾದ ಎಂಕ್ಯೂ-9 ರೀಪರ್ ಡ್ರೋನ್ (US Drone) ಮೇಲೆ ಇಂಧನ ಸುರಿದು ನಂತರ ಅದಕ್ಕೆ ಢಿಕ್ಕಿ ಹೊಡೆಯುವ ಮೂಲಕ ಅದನ್ನು ಪತನಗೊಳಿಸಿದೆ ಎಂದು ndtv.com ವರದಿ ಮಾಡಿದೆ.

ಈ ಕೃತ್ಯವನ್ನು "ಅಜಾಗರೂಕ" ಎಂದು ಬಣ್ಣಿಸಿರುವ ಅಮೆರಿಕಾ ಸೇನೆಯು, "ಡಿಕ್ಕಿ ಹೊಡೆಯುವ ಮುನ್ನ ಹಲವಾರು ಬಾರಿ ಸುಖೋಯ್-27 ಯುದ್ಧ ವಿಮಾನವು ಎಂಕ್ಯೂ-9 ಡ್ರೋನ್ ಮೇಲೆ ಅಜಾಗರೂಕ, ಪರಿಸರಕ್ಕೆ ಹಾನಿಕಾರಕ ಹಾಗೂ ವೃತ್ತಿಪರವಲ್ಲದ ರೀತಿಯಲ್ಲಿ ಇಂಧನ ಸುರಿದು, ಅದರ ಸುತ್ತ ಸುತ್ತಾಡಿದ ನಂತರ ಢಿಕ್ಕಿ ಹೊಡೆದು ಪತನಗೊಳಿಸಿದೆ" ಎಂದು ಆರೋಪಿಸಿದೆ.

ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ರಷ್ಯಾ ರಕ್ಷಣಾ ಸಚಿವಾಲಯವು, "ತೀಕ್ಷ್ಣ ಕೌಶಲ ಹೊಂದಿರುವ ಅನಾಮಿಕ ವಾಯು ಮಾರ್ಗದ ವಾಹನ ಎಂಕ್ಯೂ-9 ಡ್ರೋಣ್, ದಿಕ್ಕಿನ ನಿಯಂತ್ರಣವಿಲ್ಲದೆ ಚಾಲಕರಹಿತ ಯುದ್ಧವಿಮಾನದ ಒಳ ಪ್ರವೇಶಿಸಿದ್ದರಿಂದ ಸಮುದ್ರದ ನೀರಿನ ಮೇಲ್ಪದರಕ್ಕೆ ಢಿಕ್ಕಿ ಹೊಡೆಯಿತು" ಎಂದು ಸ್ಪಷ್ಟನೆ ನೀಡಿದೆ.

ಈ ನಡುವೆ ಅಮೆರಿಕಾ ವಿದೇಶಾಂಗ ಇಲಾಖೆಯು ರಷ್ಯಾದ ರಾಯಭಾರಿ ಅನತೊಲಿ ಆ್ಯಂಟನೋವ್ ಅವರಿಗೆ ಯೂರೋಪ್ ದೇಶಗಳ ಸಹಾಯಕ ಕಾರ್ಯದರ್ಶಿ ಕೇರೆನ್ ಡಾನ್‌ಫ್ರೈಡ್ ಅವರೊಂದಿಗಿನ ಸಭೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆ್ಯಂಟನೋವ್, "ನಮ್ಮ ಮಟ್ಟಿಗೆ ಅಮೆರಿಕಾ ಹಾಗೂ ರಷ್ಯಾ ನಡುವೆ ಯಾವುದೇ ಬಗೆಯ ಸಂಘರ್ಷ ಉದ್ಭವಿಸುವುದು ಬೇಕಿಲ್ಲ" ಎಂದಿದ್ದಾರೆ.

ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ, ಅಮೆರಿಕಾವು ರಷ್ಯಾದ ನಿರಾಕರಣೆಯನ್ನು ಖಚಿತವಾಗಿ ನಿರಾಕರಿಸುತ್ತದೆ. ಅಲ್ಲದೆ ಅಮೆರಿಕಾವು ಪತನಗೊಂಡಿರುವ ಡ್ರೋನ್ ಅನ್ನು ವಶಪಡಿಸಿಕೊಳ್ಳಲು ಯತ್ನಿಸಲಿದೆ ಎಂದು ಹೇಳಿದ್ದು, "ಹೆಚ್ಚಿನ ವಿವರಗಳ ಆಳಕ್ಕೆ ಇಳಿಯದೆ, ನಾವು ಆ ನಿರ್ದಿಷ್ಟ ಡ್ರೋನ್ ಹಾಗೂ ವಿಮಾನಕ್ಕೆ ಸಂಬಂಧಿಸಿದಂತೆ ನಮ್ಮ ಸಮಾನ ಪಾಲನ್ನು ರಕ್ಷಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಹೇಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ ಎಂದು CNN ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಅನಾಮಿಕ ಅಮೆರಿಕಾ ಡ್ರೋನ್ ಪತನಕ್ಕೆ ಕಾರಣವಾದ ಅಸುರಕ್ಷಿತ, ವೃತ್ತಿಪರವಲ್ಲದ ಛೇದಕದ ಕುರಿತು ನಮ್ಮ ಪ್ರಬಲ ಆಕ್ಷೇಪಣೆಯನ್ನು ಮಂಡಿಸಲು ಮತ್ತೆ ರಷ್ಯಾದೊಂದಿಗೆ ಉನ್ನತ ಮಟ್ಟದಲ್ಲಿ ನೇರ ಮಾತುಕತೆ ನಡೆಸಲಿದ್ದೇವೆ" ಎಂದು ಅಮೆರಿಕಾ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಪ್ರಕರಣ:  ಲಾಲು ಪ್ರಸಾದ್, ರಾಬ್ರಿ ದೇವಿ, ಮಿಸಾ ಭಾರ್ತಿಗೆ ಜಾಮೀನು

share
Next Story
X