Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೇಂದ್ರ ಪುರಸ್ಕೃತ ಯೋಜನೆಗಳ 20,111.36...

ಕೇಂದ್ರ ಪುರಸ್ಕೃತ ಯೋಜನೆಗಳ 20,111.36 ಕೋ.ರೂ. ಅನುದಾನ ಬಿಡುಗಡೆಗೆ ಬಾಕಿ

ಜಿ.ಮಹಾಂತೇಶ್ಜಿ.ಮಹಾಂತೇಶ್20 March 2023 4:21 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕೇಂದ್ರ ಪುರಸ್ಕೃತ ಯೋಜನೆಗಳ 20,111.36 ಕೋ.ರೂ. ಅನುದಾನ ಬಿಡುಗಡೆಗೆ ಬಾಕಿ

ಬೆಂಗಳೂರು: 2022-23ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯ ಮತ್ತು ಕೇಂದ್ರ ಸರಕಾರವು ತನ್ನ ಪಾಲಿನ ಅನುದಾನದಲ್ಲಿ 20,111.36 ಕೋಟಿ ರೂ. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ.

ವಿಧಾನಸಭೆ ಚುನಾವಣೆಯನ್ನು ಮುಂದಿರಿಸಿಕೊಂಡು ರಾಜ್ಯಾದ್ಯಂತ ಸಮಾವೇಶ ನಡೆಸುತ್ತಿರುವ ರಾಜ್ಯ ಬಿಜೆಪಿ ಸರಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರವು ನಿರೀಕ್ಷೆಗೂ ಮೀರಿ ಅನುದಾನ ಬಿಡುಗಡೆ ಮಾಡಿದೆ ಎಂದು ಜಾಹೀರಾತು ನೀಡುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸರಕಾರವು ತನ್ನ ಪಾಲಿನ 6,510.76 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಮುನ್ನೆಲೆಗೆ ಬಂದಿದೆ.

ಯೋಜನಾ ಇಲಾಖೆಯು 2022-23ನೇ ಸಾಲಿನ ಪ್ರಮುಖ ಕಾರ್ಯಕ್ರಮಗಳ ಕುರಿತು ಕೆಡಿಪಿ ಸಭೆಗೆ ಒದಗಿಸಿರುವ ಅಂಕಿ ಅಂಶಗಳ ಸಮಗ್ರ ಮಾಹಿತಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಆರ್ಥಿಕ ಪ್ರಗತಿಯ ಕುರಿತೂ ವಿವರಗಳಿವೆ. ಈ ಮಾಹಿತಿಯು ‘the-file.in’ಗೆ ಲಭ್ಯವಾಗಿದೆ.

ಕೇಂದ್ರವು ತನ್ನ ಪಾಲಿನ ಅನುದಾನದ ಪೈಕಿ ಅರ್ಧಕ್ಕರ್ಧ ಬಾಕಿ ಉಳಿಸಿಕೊಂಡಿದ್ದರೂ ಕೇಂದ್ರದ ಅನುದಾನವನ್ನು ನಿರೀಕ್ಷಿಸಿ ಬಿಡುಗಡೆಯಾಗಿರುವ ಅನುದಾನಕ್ಕೆ ಎದುರಾಗಿ ಹೆಚ್ಚುವರಿ ಖರ್ಚು ಮಾಡಿದೆ.

ಪ್ರಾಥಮಿಕ ಶಿಲ್ಕು 8,518.61 ಕೋಟಿ ರೂ. ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಒಟ್ಟಾರೆ 49,515.29 ಕೋಟಿ ರೂ. ಅನುದಾನದಲ್ಲಿ 29,403.93 ಕೋಟಿ ರೂ. ಖರ್ಚಾಗಿದ್ದು ಇನ್ನೂ 20,111.36 ಕೋಟಿ ರೂ. ಬಿಡುಗಡೆ ಅಗಬೇಕಿದೆ. ಕೇಂದ್ರವು ನೀಡಬೇಕಿದ್ದ 20,229.70 ಕೋಟಿ ರೂ. ಪೈಕಿ 13,718.94 ಕೋಟಿ ರೂ. ಬಿಡುಗಡೆ ಮಾಡಿದ್ದು ಇನ್ನೂ 6,510.76 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.

ರಾಜ್ಯವು 20,766.97 ಕೋಟಿ ರೂ. ಅನುದಾನದ ಪೈಕಿ 15,684.99 ಕೋಟಿ ರೂ. ಬಿಡುಗಡೆ ಮಾಡಿದ್ದು ಇನ್ನೂ 5,081.98 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.

ಉನ್ನತ ಶಿಕ್ಷಣ ಇಲಾಖೆಗೆ ರಾಜ್ಯದ ಪಾಲು 39.48 ಕೋಟಿ ರೂ. ಕೇಂದ್ರವು 59.22 ಕೋಟಿ ರೂ. ಸೇರಿ ಒಟ್ಟು 98.70 ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ಆದರೆ ಈ ಪೈಕಿ ರಾಜ್ಯ ಮತ್ತು ಕೇಂದ್ರ ಸರಕಾರವು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಒಟ್ಟು ಅನುದಾನಕ್ಕೆ ವೆಚ್ಚವು ಶೂನ್ಯ ಎಂದು ತೋರಿಸಿದೆ.

ಜಲಸಂಪನ್ಮೂಲ ಇಲಾಖೆಗೆ ರಾಜ್ಯವು 343.67 ಕೋಟಿ ರೂ. ಕೇಂದ್ರವು 66.10 ಕೋಟಿ ರೂ. ಸೇರಿ ಒಟ್ಟು 409.77 ಕೋಟಿ ರೂ. ಅನುದಾನವಿತ್ತು. ಈ ಪೈಕಿ ರಾಜ್ಯ ಮತ್ತು ಕೇಂದ್ರ ಸರಕಾರವು ಬಿಡಿಗಾಸನ್ನೂ ನೀಡಿಲ್ಲ. ಆದರೆ ಒಟ್ಟು ವೆಚ್ಚವೆಂದು 155.01 ಕೋಟಿ ರೂ. ಎಂದು ತೋರಿಸಿದೆ. ಒಟ್ಟು ಅನುದಾನಕ್ಕೆ ಶೇ.37.83ರಷ್ಟು ಆರ್ಥಿಕ ಪ್ರಗತಿಯಾಗಿದೆ ಎಂದು ನಮೂದಿಸಿರುವುದು ಗೊತ್ತಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ರಾಜ್ಯವು 118.51 ಕೋಟಿ ರೂ. ಮತ್ತು ಕೇಂದ್ರವು 315.66 ಕೋಟಿ ರೂ. ಸೇರಿ ಒಟ್ಟು 434.17 ಕೋಟಿ ರೂ. ಅನುದಾನವಿತ್ತು. ಈ ಪೈಕಿ ಕೇಂದ್ರ ಸರಕಾರವು 315.66 ಕೋಟಿ ರೂ. ಪೈಕಿ 36.46 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿ 279.2 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಒಟ್ಟು ಅನುದಾನಕ್ಕೆ ಶೇ.22.85ರಷ್ಟು ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ.

ಅರಣ್ಯ ಇಲಾಖೆಗೆ ರಾಜ್ಯ ಸರಕಾರವು 66.15 ಕೋಟಿ ರೂ., ಕೇಂದ್ರ ಸರಕಾರವು 78 ಕೋಟಿ ರೂ. ಸೇರಿ ಒಟ್ಟು 144.15 ಕೋಟಿ ರೂ. ಅನುದಾನವಿದೆ. ಈ ಪೈಕಿ ರಾಜ್ಯವು 12.87 ಕೋಟಿ ಮತ್ತು ಕೇಂದ್ರವು ಕೇವಲ 9.93 ಕೋಟಿ ರೂ. ಬಿಡುಗಡೆ ಸೇರಿ ಒಟ್ಟಾರೆ 22.80 ಕೋಟಿ ರೂ. ಬಂದಿದೆ. ರಾಜ್ಯ ಸರಕಾರವು 53.28 ಕೋಟಿ ರೂ. ಕೇಂದ್ರವು 68.07 ಕೋಟಿ ರೂ. ಸೇರಿದಂತೆ 121.35 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರು ವುದು ತಿಳಿದು ಬಂದಿದೆ. ತೋಟಗಾರಿಕೆ ಇಲಾಖೆಗೆ ರಾಜ್ಯ ಸರಕಾರವು 205.38 ಕೋಟಿ ರೂ. ಕೇಂದ್ರವು 524.55 ಕೋಟಿ ರೂ., ಪ್ರಾಥಮಿಕ ಶಿಲ್ಕು ಸೇರಿ ಒಟ್ಟು 958.27 ಕೋಟಿ ರೂ. ಅನುದಾನ ಲಭ್ಯವಾಗಿತ್ತು. ಈ ಪೈಕಿ ರಾಜ್ಯ ಸರಕಾರವು 156.62 ಕೋಟಿ ರೂ., ಕೇಂದ್ರವು 245.72 ಕೋಟಿ ರೂ. ಸೇರಿ ಒಟ್ಟು 402.34 ಕೋಟಿ ರೂ. ಬಿಡುಗಡೆ ಮಾಡಿತ್ತು.

ರಾಜ್ಯವು ತನ್ನ ಪಾಲಿನಲ್ಲಿ 48.76 ಕೋಟಿ ರೂ., ಕೇಂದ್ರವು 278.83 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ವಿಶೇಷವೆಂದರೆ ಬಿಡುಗಡೆಯಾಗಿರುವ 402.34 ಕೋಟಿ ರೂ.ಗಿಂತಲೂ 450.66 ಕೋಟಿ ರೂ. ಒಟ್ಟು ವೆಚ್ಚವಾಗಿದೆ ಎಂದು ತೋರಿಸಿದೆ. ಬಿಡುಗಡೆಗಿಂತಲೂ 48.32 ಕೋಟಿ ರೂ. ಅಧಿಕ ವೆಚ್ಚ ಮಾಡಿರುವುದು ಗೊತ್ತಾಗಿದೆ.

ಕೃಷಿ ಇಲಾಖೆಗೆ ರಾಜ್ಯ ಸರಕಾರವು 437.63 ಕೋಟಿ ರೂ., ಕೇಂದ್ರವು 611.42 ಕೋಟಿ ರೂ., ಪ್ರಾಥಮಿಕ ಶಿಲ್ಕು 236.56 ಕೋಟಿ ರೂ. ಸೇರಿ ಒಟ್ಟಾರೆ 1,285.61 ಕೋಟಿ ರೂ. ಅನುದಾನ ಲಭ್ಯವಿತ್ತು. ಈ ಪೈಕಿ ರಾಜ್ಯ ಸರಕಾರವು 437.63 ಕೋಟಿ ರೂ. ನಲ್ಲಿ 205.10 ಕೋಟಿ ರೂ., ಕೇಂದ್ರವು 611.42 ಕೋಟಿ ರೂ.ನಲ್ಲಿ 308.32 ಕೋಟಿ ರೂ. ಸೇರಿ ಒಟ್ಟು 513.41 ಕೋಟಿ ರೂ. ಬಿಡುಗಡೆ ಮಾಡಿತ್ತು. ರಾಜ್ಯವು 232.53 ಕೋಟಿ ರೂ., ಕೇಂದ್ರವು

303.01 ಕೋಟಿ ರೂ. ಸೇರಿ 535.54 ಕೋಟಿ ರೂ. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ.

ಆರೋಗ್ಯ ಇಲಾಖೆಗೆ ರಾಜ್ಯವು 1,010.69 ಕೋಟಿ ರೂ., ಕೇಂದ್ರವು 1,112.25 ಕೋಟಿ ರೂ., ಪ್ರಾಥಮಿಕ ಶಿಲ್ಕು 732.32 ಕೋಟಿ ರೂ. ಸೇರಿ ಒಟ್ಟು 2,855.26 ಕೋಟಿ ರೂ. ಅನುದಾನ ಲಭ್ಯವಾಗಿರಿಸಿಕೊಂಡಿತ್ತು. ಈ ಪೈಕಿ ರಾಜ್ಯ ಸರಕಾರವು ತನ್ನ ಪಾಲಿನ 1,010.69 ಕೋಟಿ ರೂ. ಪೈಕಿ 601.18 ಕೋಟಿ ರೂ. ಬಿಡುಗಡೆ ಮಾಡಿ 409.51 ಕೋಟಿ ರೂ., ಕೇಂದ್ರವು 495.12 ಕೋಟಿ ರೂ. ಸೇರಿ ಒಟ್ಟಾರೆ 904.63 ಕೋಟಿ ರೂ. ಬಾಕಿ ಉಳಿಸಿ ಕೊಂಡಿದೆ. ಬಿಡುಗಡೆಯಾಗಿದ್ದ 1,218.31 ಕೋಟಿ ರೂ. ಪೈಕಿ 1,212.92 ಕೋಟಿ ರೂ. ಖರ್ಚು ಮಾಡಿ 5.39 ಕೋಟಿ ರೂ. ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ರಾಜ್ಯವು 4,405.02 ಕೋಟಿ ರೂ., ಕೇಂದ್ರವು 1,444.47 ಕೋಟಿ ರೂ., ಪ್ರಾಥಮಿಕ ಶಿಲ್ಕು 136.35 ಕೋಟಿ ರೂ. ಸೇರಿ ಒಟ್ಟು 5,985.84 ಕೋಟಿ ರೂ. ಅನುದಾನ ಲಭ್ಯವಿತ್ತು. ಈ ಪೈಕಿ ಒಟ್ಟಾರೆ 3,580.73 ಕೋಟಿ ರೂ. ಬಿಡುಗಡೆ ಆಗಿದೆ. ರಾಜ್ಯವು ತನ್ನ ಪಾಲಿನ 4,405.02 ಕೋಟಿ ರೂ. ನಲ್ಲಿ 3,580.73 ಕೋಟಿ ರೂ. ಬಿಡುಗಡೆ ಮಾಡಿ 824.29 ಕೋಟಿ ರೂ. ಬಾಕಿ ಇರಿಸಿಕೊಂಡಿದೆ. ಕೇಂದ್ರವು ಸಹ ತನ್ನ ಪಾಲಿನಲ್ಲಿ ಬಿಡುಗಡೆಗೆ 540.84 ಕೋಟಿ ರೂ. ಬಾಕಿ ಇರಿಸಿಕೊಂಡಿದೆ.

ಗ್ರಾಮೀಣಾಭಿವೃದ್ಧ್ದಿ ಇಲಾಖೆಗೆ ರಾಜ್ಯವು 4,580.08 ಕೋಟಿ ರೂ., ಕೇಂದ್ರವು 9,812. 80 ಕೋಟಿ ರೂ., ಪ್ರಾಥಮಿಕ ಶಿಲ್ಕು 4,211.76 ಕೋಟಿ ರೂ. ಸೇರಿ 18,605.07 ಕೋಟಿ ರೂ. ಅನುದಾನ ಲಭ್ಯವಿದೆ. ರಾಜ್ಯವು ತನ್ನ ಪಾಲಿನಲ್ಲಿ 2,338.78 ಕೋಟಿ ರೂ., ಕೇಂದ್ರದ 3,165.44 ಕೋಟಿ ರೂ. ಸೇರಿ ಒಟ್ಟಾರೆ 5,504.22 ಕೋಟಿ ರೂ. ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆ. ವಿಶೇಷವೆಂದರೆ ಬಿಡುಗಡೆಯಾಗಿರುವ 8,889.09 ಕೋಟಿ ರೂ.ಗಿಂತಲೂ 11,298.86 ಕೋಟಿ ರೂ. ಒಟ್ಟು ವೆಚ್ಚವಾಗಿದೆ ಎಂದು ತೋರಿಸಿದೆ. ಇದು ಬಿಡುಗಡೆಯಾಗಿದ್ದ ಅನುದಾನಕ್ಕೆ ಎದುರಾಗಿ 2,409.77 ಕೋಟಿ ರೂ. ಹೆಚ್ಚುವರಿ ವೆಚ್ಚ ಮಾಡಿದಂತಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ರಾಜ್ಯವು 2,325.06 ಕೋಟಿ ರೂ. ಕೇಂದ್ರವು 1,189.18 ಕೋಟಿ ರೂ., ಪ್ರಾಥಮಿಕ ಶಿಲ್ಕು 11.53 ಕೋಟಿ ರೂ. ಸೇರಿ ಒಟ್ಟಾರೆ 3,525.77 ಕೋಟಿ ರೂ. ಅನುದಾನ ಲಭ್ಯವಿದೆ. ಈ ಪೈಕಿ ರಾಜ್ಯವು ತನ್ನ ಪಾಲಿನ 560.64 ಕೋಟಿ ರೂ., 154.73 ಕೋಟಿ ರೂ. ಸೇರಿ 715.37 ಕೋಟಿ ರೂ. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ.

ಪರಿಶಿಷ್ಟ ಪಂಗಡಗಳ ಇಲಾಖೆಗೆ ರಾಜ್ಯ ಸರಕಾರವು ನಯಾಪೈಸೆಯನ್ನೂ ನೀಡಿಲ್ಲ. ಕೇಂದ್ರ ಸರಕಾರವು 261.05 ಕೋಟಿ ರೂ. ಅನುದಾನದ ಪೈಕಿ 93.53 ಕೋಟಿ ರೂ. ಬಿಡುಗಡೆ ಮಾಡಿತ್ತು. ಬಿಡುಗಡೆಗೆ 167.52 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಇದು ಒಟ್ಟು ಅನುದಾನಕ್ಕೆ ಶೇ.34.57ರಷ್ಟು ಆರ್ಥಿಕ ಪ್ರಗತಿ ಸಾಧಿಸಿದಂತಾಗಿದೆ. ಹಿಂದುಳಿದ ವರ್ಗಗಳ ಇಲಾಖೆಗೆ ರಾಜ್ಯ ಸರಕಾರವು 28.33 ಕೋಟಿ ರೂ. ಮತ್ತು ಕೇಂದ್ರವು 84.25 ಕೋಟಿ ರೂ. ಸೇರಿ 112.58 ಕೋಟಿ ರೂ. ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ ರಾಜ್ಯ ಸರಕಾರವು ನಯಾಪೈಸೆಯನ್ನೂ ನೀಡಿಲ್ಲ. ಕೇಂದ್ರವು 45.46 ಕೋಟಿ ರೂ.ಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿದೆಯಾದರೂ ಬಿಡುಗಡೆಯಾಗಿರುವ ಅನುದಾನದಲ್ಲಿ ವೆಚ್ಚವನ್ನು ಶೂನ್ಯವೆಂದು ತೋರಿಸಿದೆ.

ವಿಶೇಷವೆಂದರೆ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯವು 100 ಕೋಟಿ ರೂ. ಕೇಂದ್ರವು 300 ಕೋಟಿ ರೂ. ಸೇರಿ ಒಟ್ಟು 400 ಕೋಟಿ ರೂ. ಅನುದಾನ ಲಭ್ಯವಾಗಿಸಿಕೊಂಡಿತ್ತು. ಈ ಪೈಕಿ ರಾಜ್ಯವು 25 ಕೋಟಿ ರೂ. ಮತ್ತು ಕೇಂದ್ರವು ಕೇವಲ 75 ಕೋಟಿ ರೂ. ಸೇರಿ 100 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದ್ದು ಬಿಡುಗಡೆಗೆ ಇನ್ನೂ 300 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿರುವ 100 ಕೋಟಿ ರೂ.ನಲ್ಲಿ ಖರ್ಚು ಮಾಡಿರುವುದು ಕೇವಲ 1.91 ಕೋಟಿ ರೂ.ಯಷ್ಟೇ. ಹೀಗಾಗಿ ಒಟ್ಟು ಅನುದಾನಕ್ಕೆ ಶೇ.0.48ರಷ್ಟು ಮಾತ್ರ ಆರ್ಥಿಕ ಪ್ರಗತಿ ಸಾಧಿಸಿದೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X