Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಚೀನಾದಲ್ಲಿ ಉಯಿಗರ್‌ಗಳಿಗೆ ದೌರ್ಜನ್ಯ:...

ಚೀನಾದಲ್ಲಿ ಉಯಿಗರ್‌ಗಳಿಗೆ ದೌರ್ಜನ್ಯ: ಚಿತ್ರಹಿಂಸೆ ಹೇಳಿಕೆ ದಾಖಲಿಸಿಕೊಂಡ ಅಮೆರಿಕ ಸಂಸದೀಯ ಸಮಿತಿ

24 March 2023 10:39 PM IST
share
ಚೀನಾದಲ್ಲಿ ಉಯಿಗರ್‌ಗಳಿಗೆ ದೌರ್ಜನ್ಯ: ಚಿತ್ರಹಿಂಸೆ ಹೇಳಿಕೆ ದಾಖಲಿಸಿಕೊಂಡ ಅಮೆರಿಕ ಸಂಸದೀಯ ಸಮಿತಿ

ವಾಷಿಂಗ್ಟನ್, ಮಾ.24: ಚೀನಾದ ವ್ಯವಹಾರಗಳಿಗೆ ಸಂಬಂಧಿಸಿದ ಅಮೆರಿಕ ಸಂಸತ್ ನ ಸಮಿತಿಯು ಚೀನಾದ  ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಉಯಿಗರ್ ಹಾಗೂ ಇತರ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಎರಡನೇ ಹಂತದ ವಿಚಾರಣೆ ಆರಂಭಿಸಿದೆ ಎಂದು ವರದಿಯಾಗಿದೆ. 

‌ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಚೀನಾದ ಆಡಳಿತ ಉಯಿಗರ್ಗಳು ಹಾಗೂ ಇತರ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ನರಮೇಧ ನಡೆಸುತ್ತಿದೆ ಎಂಬ ಅಮೆರಿಕ ಆರೋಪವನ್ನು ಕೇಂದ್ರೀಕರಿಸಿ ಸಮಿತಿ ವಿಚಾರಣಾ ಪ್ರಕ್ರಿಯೆ ಮುಂದುವರಿದಿದೆ.

ವಿಚಾರಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನ ಸುದ್ಧಿಗಾರರ ಜತೆ ಮಾತನಾಡಿದ ಸದನ ಸಮಿತಿಯ ಅಧ್ಯಕ್ಷ ಮೈಕ್ ಗ್ಯಾಲಘರ್ `ಚೀನಾ ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ಜಗತ್ತು ಹೇಗಿರುತ್ತದೆ ಎಂಬುದಕ್ಕೆ ಕ್ಸಿನ್ಜಿಯಾಂಗ್ನ ಪರಿಸ್ಥಿತಿ ಎಚ್ಚರಿಕೆಯ ಕರೆಗಂಟೆಯಾಗಬೇಕಿದೆ' ಎಂದರು.

ಸಮಿತಿಯ ಎದುರು ಹೇಳಿಕೆ ನೀಡಿದ ಉಯಿಗರ್ ಮಹಿಳೆ ಗುಲ್ಬಹಾರ್ ಹೈತಿವಾಜಿ `ಕ್ಸಿನ್ಜಿಯಾಂಗ್ನ ನಿರಾಶ್ರಿತರ ಶಿಬಿರದಲ್ಲಿ ತಾನು 2 ವರ್ಷ ನೆಲೆಸಿದ್ದು ಈ ಸಂದರ್ಭ ಬಲವಂತದ ದೇಶಭಕ್ತಿ ಶಿಕ್ಷಣದ ಜತೆ ನಿಂದನೆಯನ್ನು ಎದುರಿಸಬೇಕಾಗಿತ್ತು' ಎಂದರು.

ಇದೇ ಶಿಬಿರದಲ್ಲಿ ಶಿಕ್ಷಕಿಯಾಗಿ ನಿಯೋಜನೆಗೊಂಡಿದ್ದ ಕ್ವೆಲ್ಬಿನೂರ್ ಸಿದಿಕ್ ಎಂಬ ಮಹಿಳೆ `ಶಿಬಿರದಲ್ಲಿನ ನಿವಾಸಿಗಳು ನಿರಂತರ ಚಿತ್ರಹಿಂಸೆ ಮತ್ತು ವಿಚಾರಣೆಗೆ ಒಳಗಾಗಬೇಕಿತ್ತು' ಎಂದಿದ್ದಾರೆ. ಈ ಇಬ್ಬರೂ ಮಹಿಳೆಯರು ಶಿಬಿರದಿಂದ ತಪ್ಪಿಸಿಕೊಂಡು ಯುರೋಪ್ಗೆ ತೆರಳಲು ಯಶಸ್ವಿಯಾಗಿದ್ದು ಈಗ ಯುರೋಪ್ನಲ್ಲಿ ನೆಲೆಸಿದ್ದಾರೆ. ಉಯಿಗರ್ ಅಮೆರಿಕನ್ ನ್ಯಾಯವಾದಿ ನೂರಿ ಟರ್ಕೆಲ್, ಕ್ಸಿನ್ಜಿಯಾಂಗ್ನಲ್ಲಿ ಬಂಧನ ಶಿಬಿರದ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಲು ಬಯಸಿದ್ದ ಜರ್ಮನ್ ಸಂಶೋಧಕ ಆಡ್ರಿಯನ್ ಝೆಂಜ್ ಮುಂತಾದವರ ಹೇಳಿಕೆಯನ್ನೂ ಸಮಿತಿ ದಾಖಲಿಸಿಕೊಂಡಿತು.

ಕ್ಸಿನ್ಜಿಯಾಂಗ್ನಲ್ಲಿ ಚೀನಾ ಆಡಳಿತ ಜಾರಿಗೊಳಿಸಿರುವ ಜನನ ನಿಯಂತ್ರಣ ಮತ್ತು ಸಾಮೂಹಿಕ ಬಂಧನ ನೀತಿಗಳು ನರಮೇಧಕ್ಕೆ ಸಮ ಎಂದು ಅಮೆರಿಕ, ಬ್ರಿಟನ್, ಕೆನಡಾ ಹಾಗೂ ಇತರ ಕೆಲವು ದೇಶಗಳು ಬಣ್ಣಿಸಿವೆ. ಸಾಮೂಹಿಕ ಕಣ್ಗಾವಲು ಮತ್ತು ಬಂಧನ, ಚಿತ್ರಹಿಂಸೆ, ಮಕ್ಕಳ ವರ್ಗಾವಣೆ, ಸಂತಾನೋತ್ಪತ್ತಿಯ ಮೇಲಿನ ಮಿತಿ ಸೇರಿದಂತೆ  ಉಯಿಗರ್ ಜನರನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಲು ಚೀನಾ ಸರಕಾರ ಸೂಕ್ಷ್ಮ ತಂತ್ರಗಳನ್ನು ಬಳಸುತ್ತಿದೆ ಎಂದು ಹಲವು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ವಲಯದಲ್ಲಿ ಚೀನಾವು ಮನುಕುಲದ ವಿರುದ್ಧದ ಅಪರಾಧ ಎಸಗಿರುವ ಸಾಧ್ಯತೆಯಿದೆ ಎಂದು ಕಳೆದ ವರ್ಷ ವಿಶ್ವಸಂಸ್ಥೆಯ ವರದಿ ಹೇಳಿತ್ತು.

ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂಬ ವರದಿಯನ್ನು ಉಗ್ರವಾಗಿ ಖಂಡಿಸುವ ಚೀನಾ `ತಾನು ಆ ಪ್ರಾಂತದಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ನಿಗ್ರಹಿಸಲು ವೃತ್ತಿಪರ ಕೇಂದ್ರಗಳನ್ನು ಸ್ಥಾಪಿಸಿರುವುದಾಗಿ' ಪ್ರತಿಪಾದಿಸುತ್ತಿದೆ. `ಅಮೆರಿಕದ ಸಂಸದೀಯ ಸಮಿತಿ ಯೋಜಿತ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡು, ಗುಪ್ತ ರಾಜಕೀಯ ಉದ್ದೇಶದ ಸಾಧನೆಗಾಗಿ ಕ್ಸಿನ್ಜಿಯಾಂಗ್ಗೆ ಸಂಬಂಧಿಸಿ ಸುಳ್ಳುಗಳ ಸರಮಾಲೆಯನ್ನು ಪೋಣಿಸುತ್ತಿದೆ' ಎಂದು ಅಮೆರಿಕದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ಪ್ರತಿಕ್ರಿಯಿಸಿದ್ದಾರೆ.

share
Next Story
X