Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಮಾರ್ಚ್ 25ನ್ನು ವಿಶ್ವ ನರಮೇಧ ದಿನವೆಂದು...

ಮಾರ್ಚ್ 25ನ್ನು ವಿಶ್ವ ನರಮೇಧ ದಿನವೆಂದು ಘೋಷಿಸಿ: ವಿಶ್ವಸಂಸ್ಥೆಗೆ ಬಾಂಗ್ಲಾ ಆಗ್ರಹ

26 March 2023 10:21 PM IST
share
ಮಾರ್ಚ್ 25ನ್ನು ವಿಶ್ವ ನರಮೇಧ ದಿನವೆಂದು ಘೋಷಿಸಿ: ವಿಶ್ವಸಂಸ್ಥೆಗೆ ಬಾಂಗ್ಲಾ ಆಗ್ರಹ

ಢಾಕಾ, ಮಾ.26: ಮಾರ್ಚ್ 25ನ್ನು ವಿಶ್ವ ನರಮೇಧ ದಿನವೆಂದು ಘೋಷಿಸುವಂತೆ ಬಾಂಗ್ಲಾದೇಶ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.

1971ರ ಮಾರ್ಚ್ 25ರ ಮಧ್ಯರಾತ್ರಿ ಪಾಕಿಸ್ತಾನದ ಸೇನೆ ಬಾಂಗ್ಲಾದ ನಿರಾಯುಧ ಜನರ ಮೇಲೆ ದಾಳಿ ನಡೆಸಿ 1000 ಜನರನ್ನು ಕೊಂದು ಹಾಕಿತ್ತು. ನಂತರದ 9 ತಿಂಗಳಲ್ಲಿ 9 ದಶಲಕ್ಷ ಜನರನ್ನು ಹತ್ಯೆ ಮಾಡಿದೆ. ಇದು ಅತ್ಯಂತ ಕ್ರೂರ ನರಮೇಧಗಳಲ್ಲಿ ಒಂದಾಗಿದೆ. 2017ರಿಂದ ಮಾರ್ಚ್ 25ನ್ನು ಬಾಂಗ್ಲಾದೇಶದ ನರಮೇಧ ದಿನವಾಗಿ ನಾವು ಪರಿಗಣಿಸಿದ್ದೇವೆ. ಇದೀಗ ವಿಶ್ವಸಂಸ್ಥೆಯಿಂದ ಎರಡು ವಿಷಯಗಳನ್ನು ನಾವು ಬಯಸುತ್ತಿದ್ದೇವೆ.

1971ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿರುವುದು ನರಮೇಧವಾಗಿದೆ ಎಂದು ಪರಿಗಣಿಸಬೇಕು ಹಾಗೂ ಈ ದಿನವನ್ನು ವಿಶ್ವ ನರಮೇಧ ದಿನವೆಂದು ಘೋಷಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನರ್ ಅಂದಾಲಿಬ್ ಇಲಿಯಾಸ್ ಒತ್ತಾಯಿಸಿದ್ದಾರೆ.

ಈ ಮಧ್ಯೆ, ಇಂಟರ್ನ್ಯಾಷನಲ್ ಫೋರಂ ಫಾರ್ ಸೆಕ್ಯುಲರ್ ಬಾಂಗ್ಲಾದೇಶ(ಐಎಫ್ಎಸ್ಬಿ)ದ ಸ್ವಿಝರ್ಲ್ಯಾಂಡ್ ಘಟಕವು ಜಿನೆವಾದಲ್ಲಿನ ಬ್ರೋಕನ್ಚೇರ್ ವೃತ್ತದ ಬಳಿಯಿರುವ ವಿಶ್ವಸಂಸ್ಥೆ ಕಟ್ಟಡದ ಎದುರು ಪ್ರದರ್ಶನ ನಡೆಸಿ, 1971ರಲ್ಲಿ ಪಾಕಿಸ್ತಾನದ ಸೇನೆ ನಡೆಸಿದ ಬಾಂಗ್ಲಾದೇಶದ ನರಮೇಧವನ್ನು ಗುರುತಿಸುವಂತೆ ಆಗ್ರಹಿಸಿದೆ. ಯುರೋಪ್ನ ಬಾಂಗ್ಲಾದೇಶ ಸಮುದಾಯದವರು ವಿಶ್ವಸಂಸ್ಥೆ ಕಚೇರಿಯೆದುರು ಗುಂಪುಸೇರಿ 1971ರಲ್ಲಿ ಪಾಕಿಸ್ತಾನ ನಡೆಸಿದ ನರಮೇಧಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ. 

`ಆಲ್ ಯುರೋಪಿಯನ್ ಫ್ರೀಡಂ ಫೈಟರ್ ಸಂಗ್ಸದ್ ಆಫ್ ಬಾಂಗ್ಲಾದೇಶ'ದ ಮುಖಂಡರು, ಸ್ವಿಝರ್ಲ್ಯಾಂಡಿನಲ್ಲಿರುವ ಅವಾಮಿ ಲೀಗ್ ಸದಸ್ಯರು ಹಾಗೂ ಇತರ ಅಂತರಾಷ್ಟ್ರೀಯ ಎನ್ಜಿಒಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ(ಬಿಎನ್ಪಿ) ಮತ್ತು ಜಮಾತೆ ಇಸ್ಲಾಮಿ ಬಾಂಗ್ಲಾದೇಶ್ ಪಕ್ಷಗಳು ಪಾಕಿಸ್ತಾನ ಸೇನೆ ನಡೆಸಿದ ದೌರ್ಜನ್ಯದಲ್ಲಿ ಸಹಭಾಗಿಗಳಾಗಿದ್ದವು ಎಂದು ಅವಾಮಿ ಲೀಗ್ ಮುಖಂಡರು ಘೋಷಣೆ ಕೂಗಿದರು ಎಂದು ವರದಿಯಾಗಿದೆ.  

ಬಂಗಾಳಿ ರಾಷ್ಟ್ರೀಯತಾವಾದಿ ಚಳವಳಿಯನ್ನು ಹತ್ತಿಕ್ಕಲು 1971ರ ಮಾರ್ಚ್ 25ರಂದು ಪಾಕಿಸ್ತಾನ ಸೇನೆ ಢಾಕಾದಲ್ಲಿ `ಆಪರೇಷನ್ ಸರ್ಚ್ಲೈಟ್' ಎಂಬ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. 1971ರ ಡಿಸೆಂಬರ್ 16ರಂದು ಪಾಕಿಸ್ತಾನ ಸೇನೆಯು ಭಾರತ-ಬಾಂಗ್ಲಾದೇಶದ ಜಂಟಿ ಸೇನಾಪಡೆಗೆ ಶರಣಾಗಿತ್ತು ಮತ್ತು ಶೇಖ್ ಮುಜಿಬುರ್ ರೆಹ್ಮಾನ್ ನಾಯಕತ್ವದಡಿ ಬಾಂಗ್ಲಾದೇಶವು ಹೊಸ ದೇಶವಾಗಿ ಉದಯಿಸಿತ್ತು.

share
Next Story
X