Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಹುಲ್‌ ಗಾಂಧಿಯನ್ನು ನಿಂದಿಸಲು 'ಕಳ್ಳನ...

ರಾಹುಲ್‌ ಗಾಂಧಿಯನ್ನು ನಿಂದಿಸಲು 'ಕಳ್ಳನ ಕಥೆ' ಹೇಳಿದ ಸುಧೀರ್‌ ಚೌಧರಿ: ಯುವ ಕಾಂಗ್ರೆಸ್‌ ನಿಂದ ಕಾನೂನು ನೋಟಿಸ್‌

27 March 2023 5:49 PM IST
share
ರಾಹುಲ್‌ ಗಾಂಧಿಯನ್ನು ನಿಂದಿಸಲು ಕಳ್ಳನ ಕಥೆ ಹೇಳಿದ ಸುಧೀರ್‌ ಚೌಧರಿ: ಯುವ ಕಾಂಗ್ರೆಸ್‌ ನಿಂದ ಕಾನೂನು ನೋಟಿಸ್‌

ಹೊಸದಿಲ್ಲಿ: 'ಆಜ್‌ ತಕ್‌' (Aaj Tak) ವಾಹಿನಿ ಮತ್ತದರ ಪ್ರಮುಖ ನಿರೂಪಕ ಸುಧೀರ್‌ ಚೌಧರಿ (Sudhir Chaudhary) ಅವರ ವಿರುದ್ಧ ಯುವ ಕಾಂಗ್ರೆಸ್‌ ನೋಟಿಸ್‌ ಜಾರಿಗೊಳಿಸಿದೆ. ಪ್ರೈಮ್‌ ಟೈಮ್‌ ಶೋ ಬ್ಲ್ಯಾಕ್‌ ಎಂಡ್‌ ವೈಟ್‌ನಲ್ಲಿ ಕಳೆದ ವಾರ ಪ್ರಸಾರಗೊಂಡ ʼಇಮ್ಯಾಜಿನರಿ ಸ್ಟೋರಿʼಯಲ್ಲಿ ರಾಹುಲ್‌ ಗಾಂಧಿ ಅವರನ್ನು ಅವಮಾನಿಸಲಾಗಿದೆ ಎಂದು ಯುವ ಕಾಂಗ್ರೆಸ್‌ ಆರೋಪಿಸಿದೆ.

ಈ ನಿರ್ದಿಷ್ಟ ವೀಡಿಯೋವನ್ನು  ಆಜ್‌ ತಕ್‌ ವಾಹಿನಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕದ ಹೊರತು ವಾಹಿನಿ ಮತ್ತು ನಿರೂಪಕ ಚೌಧುರಿ ವಿರುದ್ಧ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

"ರಾಹುಲ್‌ ಗಾಂಧಿ ಅವರು ನೀರವ್‌ ಮೋದಿ ಮಾಡಿದ ತಪ್ಪಿಗೆ ಆಕ್ಷೇಪಿಸಿ ಈ ಕುರಿತು ಸರಕಾರದ ಹೊಣೆಗಾರಿಕೆ ಬಗ್ಗೆ ಮಾತನಾಡಿದ್ದರೆಂದು ತಿಳಿದಿರುವ ಹೊರತಾಗಿ ಕಳ್ಳತನದ ಅಪರಾಧಕ್ಕಾಗಿ ಸೆರೆಹಿಡಿಯಲಾದ ಯಾರೊಂದಿಗೋ ರಾಹುಲ್‌ ಗಾಂಧಿಯನ್ನು ದುರುದ್ದೇಶದಿಂದ ಹೋಲಿಕೆ ಮಾಡಿದ್ದಾರೆ," ಎಂದು ವಕೀಲ ಕಪಿಲ್‌ ಮದನ್‌ ಅವರ ಮೂಲಕ ಯುವ ಕಾಂಗ್ರೆಸ್‌ ಕಾನೂನು ಘಟಕ ಕಳುಹಿಸಿದ  ನೋಟಿಸ್‌ ತಿಳಿಸಿದೆ.

ರಾಹುಲ್‌ ಗಾಂಧಿ ಅವರನ್ನು 'ಮೋದಿ ಉಪನಾಮೆ' ಕುರಿತು ಅವರು ಆಡಿದ ಮಾತುಗಳಿಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ದೋಷಿಯೆಂದು ಘೋಷಿಸಲಾದ ಬೆನ್ನಲ್ಲೇ ಸಂಸದರಾಗಿ ಅವರನ್ನು ಅನರ್ಹಗೊಳಿಸಿದ ನಂತರ ಮಾರ್ಚ್‌ 24 ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ಸುಧೀರ್‌ ಚೌಧುರಿ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು.

ರಾಹುಲ್‌ ಅವರ ಹೇಳಿಕೆಯನ್ನು ಟೀಕಿಸುವ ಸಲುವಾಗಿ ಸುಧೀರ್‌ ಚೌಧುರಿ ತಮ್ಮ ಶೋದಲ್ಲಿ ಕಾಲ್ಪನಿಕ್‌ ಕಹಾನಿ (ಕಲ್ಪನೆಯ ಕಥೆ) ಅನ್ನು ಹೇಳಿದರಲ್ಲದೆ ಇತರರ ಅಪರಾಧಗಳನ್ನು ಬೊಟ್ಟು ಮಾಡುವ ಮೂಲಕ ರಾಹುಲ್‌ ಅವರ ತಪ್ಪುಗಳು ಕಡಿಮೆಯಾಗುವವೇ ಎಂದು ಪ್ರಶ್ನಿಸಲು ಈ ಕಥೆ ಹೇಳುತ್ತಿರುವುದಾಗಿ ತಿಳಿಸಿದ್ದರು.

ಹೆದ್ದಾರಿಯಲ್ಲಿ ಜನರ ದರೋಡೆಗೈದ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು  ಸೆರೆಹಿಡಿದು ಪ್ರಶ್ನಿಸಿದ್ದರು ಎಂದು ಕಥೆಯನ್ನು ಸುಧೀರ್‌ ಚೌಧುರಿ ವಿವರಿಸಿದ್ದರು. ತನಗಿಂತಲೂ ದೊಡ್ಡ ಕಳ್ಳರಾದ ನೀರವ್‌ ಮೋದಿ, ಲಲಿತ್‌ ಮೋದಿ ಮತ್ತು ಮೆಹುಲ್‌ ಚೊಕ್ಸಿ ಇದ್ದಾರೆಂದು ಈ ಸಣ್ಣ ಕಳ್ಳ ಹೇಳುತ್ತಾನೆ ಹಾಗೂ ಪೊಲೀಸರು ಅವರನ್ನೇಕೆ ಹಿಡಿಯುವುದಿಲ್ಲ ಹಾಗೂ ಪೊಲೀಸರಿಗೆ ಅವರನ್ನು ಬಂಧಿಸಲು ಅಸಾಧ್ಯವಾದರೆ ತಮ್ಮಂತಹ ಸಣ್ಣ ಅಪರಾಧಿಗಳನ್ನು ಏಕೆ ಬಂಧಿಸುತ್ತಿದ್ದಾರೆ ಎಂದು ಪ್ರಶ್ನಿಸುತ್ತಾನೆ ಎಂದು ತಮ್ಮ ಕಥೆ ವಿವರಿಸಿದ್ದರು.

ಇತರರ ಅಪರಾಧಗಳನ್ನು ಪಟ್ಟಿ ಮಾಡುವ ಮೂಲಕ ಸ್ವಂತ ಅಪರಾಧಗಳು ಕಡಿಮೆಯಾಗುವುದಿಲ್ಲ ಹಾಗೂ ಕಾಂಗ್ರೆಸ್‌ ಪಕ್ಷ ಇದನ್ನೇ ಮಾಡುತ್ತಿದೆ ಎಂದು ಸುಧೀರ್‌ ಚೌಧುರಿ ಹೇಳಿದ್ದರು.

ಯುವ ಕಾಂಗ್ರೆಸ್‌ ಕಳುಹಿಸಿದ ಕಾನೂನು ನೋಟಿಸ್‌ ಅನ್ನು ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ ನಂತರ  ಪ್ರತಿಕ್ರಿಯಿಸಿದ ಸುಧೀರ್‌ ಚೌಧುರಿ," ನಾನು ಭಾರತದ ದನಿಗಾಗಿ ಹೋರಾಡುತ್ತಿದ್ದೇನೆ. ನಾನು ಯಾವುದೇ ಬೆಲೆ ತೆರಲು ಸಿದ್ಧ," ಎಂದು ಬರೆದಿದ್ದಾರೆ.

पत्रकारिता के पेशे को बदनाम करने के लिए पहले भी तिहाड़ में अच्छा खासा समय बिता चुके @sudhirchaudhary जी,

इस घटिया पत्रकारिता और हमारे नेताओं की छवि को धूमिल करने वाले मनगढ़ंत आरोपों के खिलाफ कानूनी कार्यवाही के लिए तैयार रहे।@aroonpurie @IYCLegalCell https://t.co/1jBIc6ph5L

— Srinivas BV (@srinivasiyc) March 24, 2023
share
Next Story
X